*ಅಕ್ಕನ ಬಳಗ ಮಹಿಳಾ ಸಮಾಜದಿಂದ ಬಸವ ಜಯಂತಿ ಆಚರಣೆ*

varthajala
0

ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ನಲ್ಲಿ ಅಕ್ಕನ ಬಳಗ ಮಹಿಳಾ ಸಮಾಜ (ರಿ) ದ ವತಿಯಿಂದ ಜಗದ್ಗುರು, ವಿಶ್ವ ಮಾನವ ಶರಣ, ಕ್ರಾಂತಿಯೋಗಿ ಶ್ರೀ  ಬಸವಣ್ಣನವರ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಆರಾಧ್ಯ ರವರ ಅಧ್ಯಕ್ಷತೆಯಲ್ಲಿ  ಆಚರಿಸಲಾಯಿತು. 




ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವೀರಶೈವ ಮುಖಂಡರುಗಳಾದ ಎಚ್.ಎಂ. ಪಾಟೀಲ್, ಕೆ.ಎಚ್. ಶಿವಕುಮಾರ್ ರವರಗಳು, ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಂಸ್ಥಾಪಕ ಅಧ್ಯಕ್ಷರಾದ ಸಿ.ಎಸ್.ಆರಾಧ್ಯರವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ, ಬಳಗದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು. ಇದೇ ವೇಳೆ ಎಲ್ಲರಿಗೂ ತೀರ್ಥ ಪ್ರಸಾದ ವಿನಿಯೋಗವನ್ನು ಸಹ ಬಳಗದ ವತಿಯಿಂದ ಏರ್ಪಡಿಸಲಾಗಿತ್ತು.

Post a Comment

0Comments

Post a Comment (0)