ಪಹಲ್ಗಾಂಗೂ ಮುನ್ನ ದೆಹಲಿ ಸ್ಪೋಟಕ್ಕೆ ನಡೆದಿತ್ತು ಸಂಚು: ಹೊರಬಿತ್ತು ಸ್ಪೋಟಕ ಮಹಿತಿ

varthajala
0

 




ನವದೆಹಲಿ: ಪಾಕಿಸ್ತಾನದ ಐಎಸ್‍ಐ ಜೊತೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಜಾಲವನ್ನು ಭಾರತೀಯ ಗುಪ್ತಚರ ಸಂಸ್ಧೆಗಳು ಭೇದಿಸಿದ್ದು ರಾಷ್ಟ್ರ ರಾಜಧಾನಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿವೆ,
ಮೂರು ತಿಂಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಐಎಸ್‍ಐ ನ ಇಬ್ಬರು ಏಜೆಂಟ್ ಗಳು ಬಂಧನವಾಗಿದೆ, ಇದರಲ್ಲಿ ಪಾಕಿಸ್ತಾನಿ ಗೂಢಚಾರನೂ ಸೇರಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ,
3 ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಕಾರ್ಯಾಚರಣೆಯ ನಂತರ ಏಜೆನ್ಸಿಗಳು ನೇಪಾಳಿ ಮೂಲದ ಐಎಸ್‍ಐ ಏಜೆಂಟ್ ಅನ್ನು ದೆಹಲಿಯಲ್ಲಿ ಬಂಧಿಸಿದೆ, ಆರೋಪಿಯಿಂದ ಭಾರತೀಯ ಸೇನೆ ಮತ್ತು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಕೇಂದ್ರೀಯ ಸಂಸ್ಧೆ ವಶಪಡಿಸಿಕೊಂಡಿದೆ, ದೆಹಲಿ ವಿಮಾನ ನಿಲ್ದಾಣದಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗೆ ಆತ ಸಿಕ್ಕಿಬಿದ್ದಿದ್ದಾನೆ,
ನೇಪಾಳ ಮೂಲದ ಆರೋಪಿ ಅನ್ಸಾರುಲ್ ಮಿಯಾನ್ ಅನ್ಸಾರಿ ಪಾಕಿಸ್ತಾನಿ ಗುಪ್ತಚರ ಸಂಸ್ಧೆ ಐಎಸ್‍ಐ ಕೋರಿಕೆಯ ಮೇರೆಗೆ ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದ್ದು, ಭಾರತೀಯ ಸೇನೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ದಾಖಲೆಗಳ ಸಿಡಿಗಳನ್ನು ತಯಾರಿಸಿ ಪಾಕಿಸ್ತಾನಕ್ಕೆ ಕಳುಹಿಸುವುದು ಆತನ ಟಾಸ್ಕ್ ಆಗಿತ್ತು ಎನ್ನಲಾಗಿದೆ,

Post a Comment

0Comments

Post a Comment (0)