ಕಯ್ಯಾರ ಕಿಞ್ಞಣ್ಣರೈ - ಶ್ರೀಮತಿ ಜಯದೇವಿ ತಾಯಿಲಿಗಾಡೆ ರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಪ್ರಾಧಿಕಾರದ ತೀರ್ಮಾನ

varthajala
0

ಕಯ್ಯಾರ ಕಿಞ್ಞಣ್ಣರೈ - ಶ್ರೀಮತಿ ಜಯದೇವಿ ತಾಯಿಲಿಗಾಡೆ ರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಪ್ರಾಧಿಕಾರದ ತೀರ್ಮಾನ

-ಡಾ. ಸಿ. ಸೋಮಶೇಖರ
ಬೆಂಗಳೂರು,  ಜುಲೈ 16 (ಕರ್ನಾಟಕ ವಾರ್ತೆ):  ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣರೈ ಹಾಗೂ ಶ್ರೀಮತಿ ಜಯದೇವಿ ತಾಯಿಲಿಗಾಡೆ ರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಪ್ರಾಧಿಕಾರದ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ರವರು ತಿಳಿಸಿದ್ದಾರೆ.
ಇಂದು ಕರ್ನಾಟಕ ಗಡಿನಾಡಿನ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರಸ್ತುತ ಆರ್ಥಿಕ ವರ್ಷದ ಪ್ರಥಮ ಪ್ರಾಧಿಕಾರ ಸಭೆಯಲ್ಲಿ ಹಲವಾರು ಕನ್ನಡಪರ ಕನ್ನಡನಾಡು-ನುಡಿ ಸಂಸ್ಕೃತಿ ಪರಯೋಜನೆಗಳನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.
ರಾಜ್ಯದ ಗಡಿಭಾಗದಲ್ಲಿ ಬರುವ 63 ಗಡಿ ತಾಲ್ಲೂಕುಗಳಲ್ಲಿ ಹಾಗೂ ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ವಿಶೇಷವಾಗಿ ಕನ್ನಡ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವಗಳನ್ನು ಚಿಂತನಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗಡಿಭಾಗದಲ್ಲಿ ವರ್ಷಪೂರ್ತಿ ನಿರಂತರ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ವಿಶೇಷವಾಗಿ ಗಡಿನಾಡಿನ ಹಿರಿಯ ಸಾಧಕರ ಹಾಗೂ ಗಡಿಭಾಗದ ಐತಿಹಾಸಿಕ ಮಹತ್ವವನ್ನು ದರ್ಶಿಸುವ ವಿಶೇಷ ಸಮಗ್ರ ಸಾಕ್ಷ್ಯಚಿತ್ರ ನಿರ್ಮಾಣ, ಗಡಿಭಾಗದಲ್ಲಿನ ಜಾನಪದ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಜಾನಪದ ಅಧ್ಯಯನ ಗಡಿಭಾಗದಲ್ಲಿನ ಕನ್ನಡ ದಾರ್ಶನಿಕರ ಸ್ಮಾರಕಗಳ ಅಧ್ಯಯನ, ಸಮೂಹ ಮಾಧ್ಯಮಗಳ ಮೂಲಕ ಗಡಿಭಾಗದ ಜನರ ಜೀವನ ದರ್ಶನ ಮಾಡಿಸುವಂತಹ ಅನೇಕ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಜೊತೆಗೆ ಗಡಿಭಾಗದಲ್ಲಿನ ಕನ್ನಡ ಶಾಲೆಗಳಿಗೆ ವಿಶೇಷವಾಗಿ ಸ್ಮಾರ್ಟ್ ತರಗತಿಗಳನ್ನು ನಡೆಸಲು ಅನುಕೂಲವಾಗುವಂತಹ ತಾಂತ್ರಿಕ ಸಲಕರಣೆಗಳ ಪೂರೈಕೆ, ಗ್ರಂಥಾಲಯ, ಶೌಚಾಲಯಗಳ ನಿರ್ಮಾಣ, ಶುದ್ಧಕುಡಿಯುವ ನೀರಿನ ಪೂರೈಕೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಾ ತೀರ್ಮಾನಿಸಲಾಯಿತು.
  1. ವಿಶೇಷವಾಗಿ ಬೀದರ್ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿರುವ ಪ್ರಾಯೋಗಿಕವಾಗಿ ಕೆಲವು ಪ್ರತಿಭಾವಂತ ಕನ್ನಡ ಭಾಷಾ ವಿದ್ಯಾರ್ಹತೆಯುಳ್ಳ ಯುವಕರನ್ನು ಆಯ್ಕೆಮಾಡಿ ಅವರಿಗೆ ಒಂದು ನಿರ್ದಿಷ್ಟ ಅವಧಿಯ ತರಬೇತಿಯನ್ನು ನೀಡಿ, ಕನ್ನಡ ಶಿಕ್ಷಕರ ಅಭಾವವಿರುವ ಶಾಲೆಗಳಿಗೆ ನಿಯೋಜಿಸಿ, ಗಡಿಭಾಗದಲ್ಲಿ ಅವರಿಂದ ಕನ್ನಡ ಪಾಠಪ್ರವಚನ ನಡೆಸುವಂತೆ ಮಾಡುವ ಒಂದು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುವುದು.
  2. ಗಡಿಭಾಗದ 63 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿನಿಂದ ಒಂದು ಯುವಕ ಸಂಘ / ಸಾಂಸ್ಕೃತಿಕ ಸಂಘವನ್ನು ಆಯ್ಕೆ ಮಾಡಿ ಸ್ವಾತ್ರಂತ್ಯ ಅಮೃತೋತ್ಸವದ ಸವಿ ನೆನಪಿನಲ್ಲಿ ಈ ಸಂಘಗಳು ಸ್ವಾತಂತ್ರ್ಯ ಚಳುವಳಿಯ ಐತಿಹಾಸಿಕ ಮಹತ್ವವವನ್ನು ಸಾರುವಂತಹ ಒಂದು ನಿರ್ದಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಪ್ರೋತ್ಸಾಹಿಸಲು ನಿರ್ಧರಿಸಲಾಯಿತು. ರಾಜ್ಯದ ಹಾಗೂ ಹೊರರಾಜ್ಯದ ಕೆಲವು ಆಯ್ದ ಗಡಿಪ್ರದೇಶದ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
  3. ಗಡಿಭಾಗದ ದಾರ್ಶನಿಕರ ಕಿರುಸಾಕ್ಷ್ಯ ಚಿತ್ರಗಳನ್ನು ಸಹ ನಿರ್ಮಿಸಿ ಆಯಾ ಸ್ಮಾರಕಗಳ ಬಳಿ ಅವುಗಳನ್ನು ಪ್ರದರ್ಶಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
  4. ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನುಬಳಿಗಾರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್, ಪ್ರಕಾಶ್ ಮತ್ತೀಹಳ್ಳಿ, ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಯ ಅಧಿಕಾರಿ/ ಸದಸ್ಯರುಗಳು ಭಾಗವಹಿಸಿದ್ದರು.
Tags

Post a Comment

0Comments

Post a Comment (0)