ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ಮಕ್ಕಳ ದಿನಾಚರಣೆ

varthajala
0

 ಬಳ್ಳಾರಿ ನ 19. ಬಳ್ಳಾರಿ ನಗರದ ವಿವಿದ  ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮತ್ತು ಬಡ ಶಾಲಾ ಮಕ್ಕಳಿಗೆ ಶಿಕ್ಷಣ ಕಿಟ್‌ಗಳನ್ನು ವಿತರಿಸಲಾಯಿತು. ಈ  ಕಾರ್ಯಕ್ರಮವು ಲಂಡನ್ ಮಿಷನ್ ಶಾಲೆ (ಐಒಖಿ), ಜುಬಿಲಿ ಶಾಲೆ, ವಾರ್ಡ್ಲಾ ಹೈಸ್ಕೂಲ್, ಐಒಂಗಿ ಶಾಲೆ ಮತ್ತು ಮಾರ್ಟಿನ್ ಹೋಮ್, (ಆಂಥೋನಿ ಕ್ಯಾಥೆಡ್ರಲ್ ಚರ್ಚ್ ಹಿಂದೆ) ಈ ಎಲ್ಲಾ ಶಾಲೆಗಳಲ್ಲಿ ಆಯೋಜಿಸಲಾಯಿತು. ಹಾಗೂ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಬಡ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮಕ್ಕೆ ಬಳ್ಳಾರಿ ಕ್ಷೇತ್ರದ ಕಾರ್ಯಕಾರಿ ಸಮಿತಿಯ ಪ್ರಾದೇಶಿಕ ಅಧ್ಯಕ್ಷರಾದ ರೆವ್ ಸ್ಯಾಮ್ಯುಯೆಲ್ ಕ್ರಿಸ್ತಾ ವತ್ಸ, ಬಳ್ಳಾರಿ,  ಮತ್ತು ಕಾಂತಿ ನೋಹ ವಿಲ್ಸನ್ ಸಂಚಾಲಕ ಙಒಅಂ ಬಳ್ಳಾರಿ ಗ್ರಾಮೀಣ, ಬಳ್ಳಾರಿ. ಇವರು ಮುಖ್ಯ ಅತಿಥಿಗಳಾಗಿ ಬಾಗವಾಹಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಮೋಹನ್ , ಶ್ರೀಮತಿ ಮಾರ್ಗರೇಟ್ ಮೋಹನ್, ಶ್ರೀಮತಿ. ಹೆಲೆನ್ ಜ್ಯೋತಿ,  ಮನೋಹರ್ ಆಂಟಿನ್,  ಹರ್ಷ ಡೇನಿಯಲ್, ನೋಹ್ ಅನಿಲ್ ಕುಮಾರ್ ಹಾಗೂ ಙಒಅಂ ಯುವ ಸದಸ್ಯರಾದ. ಗ್ರೇಸ್ ಕೋಮಲ, ಆಶಾ, ಸುಸನ್, ಜಾಶ್ವಾ, ಸುನಿಲ್, ಜಶ್, ಉಮೇಶ್, ಡಿಯೋಲ್, ರಾಜೇಶ್, ಸ್ಟೀಫನ್, ವಿಜಯ್ ಕುಮಾರ್ ಮತ್ತು ಸುಜನ್ ಸುನಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಕರಿಸಿದ 5 ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀಮತಿ ಕ್ರಿಸ್ಟಿನಾ, ಶ್ರೀಮತಿ ಡೋರ್ಕಾ ಬಾಯಿ, ಶ್ರೀಮತಿ ಕ್ಯಾಥರೀನ್,  ಶಿಖಾಮಣಿ ಮತ್ತು ಫಾದರ್ ನೆಲ್ಸನ್  ರವರೆಲ್ಲರು ನಮ್ಮ ಕಾರ್ಯಕ್ರಮಕ್ಕೆ  ಅದ್ಭುತವಾಗಿ ಸಹಕಾರಿಯಾದರು.


Tags

Post a Comment

0Comments

Post a Comment (0)