ಉಭಯ ಸದನಗಳಲ್ಲಿ ಅಗಲಿದ ಗಣ್ಯರುಗಳಿಗೆ ಸಂತಾಪ

varthajala
0



ಬೆಂಗಳೂರು, ಫೆಬ್ರವರಿ 14, (ಕರ್ನಾಟಕ ವಾರ್ತೆ) : ವಿಧಾನಮಂಡಲದ ಅಧಿವೇಶನವು ಇಂದು ವಿಧಾನಸೌಧದಲ್ಲಿ ಸಮಾವೇಶಗೊಂಡು, ಘನತೆವೆತ್ತ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾನ್ಯ ಸಭಾಪತಿ ಬಸವರಾಜ ಹೊರಹಟ್ಟಿ ಹಾಗೂ ಮಾನ್ಯ ಸಭಾಧ್ಯಕ್ಷರಾದ ವಿಶ್ವೇಶ್ವರಹೆಗಡೆ ಕಾಗೇರಿ ಅವರು, ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ಮಾಜಿ ಸಚಿವರಾದ ಡಾ: ಜೆ. ಅಲೆಕ್ಸಾಂಡರ್, ರಾಜ್ಯ ಸಭೆಯ ಮಾಜಿ ಸದಸ್ಯರಾದ ಕೆ.ಆರ್. ಜಯದೇವಪ್ಪ, ರಾಜ್ಯ ಸಭೆಯ ಮಾಜಿ ಸದಸ್ಯರು ಹಾಗೂ ಲೋಕಸಭೆಯ ಮಾಜಿ ಸದಸ್ಯರಾದ ಹನುಮಂತಗೌಡ ಭೀಮನಗೌಡ ಪಾಟೀಲ್, ಭಾರತ ರತ್ನ, ದಾದಾಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕøತರಾದ ಡಾ: ಲತಾ ಮಂಗೇಶ್ಕರ್, ಕನ್ನಡದ ಸಾಹಿತಿ ಚಂದ್ರಶೇಖರ ಪಾಟೀಲ, ಭಾವೈಕ್ಯತೆಯ ಸಂತರಾದ ಇಬ್ರಾಹಿಂ ಸುತಾರ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಹಾಗೂ ಪರಿಸರ ಸಂರಕ್ಷಕ ಮಹದೇವ ಬುದೋ ವೇಳಿಪ ಅವರುಗಳು ನಿಧನರಾಗಿರುವ ಸಂಬಂಧ, ಮೃತರ ಗೌರವಾರ್ಥ ಉಭಯ ಸದನಗಳಲ್ಲಿ ಸಂತಾಪ ವ್ಯಕ್ತಪಡಿಸಿದರು.
Tags

Post a Comment

0Comments

Post a Comment (0)