ಆತ್ಮೀಯ ಮಿತ್ರ `ಮಿಂಚು ಶ್ರೀನಿವಾಸ್’ ಇನ್ನಿಲ್ಲ

varthajala
0

ಬೆಂಗಳೂರು ನಗರದ ಪತ್ರಿಕಾ ರಂಗದಲ್ಲಿ ಹೆಸರು ಮಾಡಿದ್ದ ಆತ್ಮೀಯ ಮಿತ್ರ ಹಿರಿಯ ಛಾಯಾಗ್ರಾಹಕ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕöÈತ, ಕೇರಾ ಸಂಘಟನೆಯ ಬೆಂ.ನಗರ ಜಿಲ್ಲಾಧ್ಯಕ್ಷ, ಪತ್ರಕರ್ತರ ಏಳಿಗೆಗಾಗಿ ದುಡಿದ ಪ್ರಮಾಣಿಕ, ಸೃಜನಶೀಲ, ಹಿರಿಯ ಪತ್ರಕರ್ತ ಡಾ: ಕೆ. ಶ್ರೀನಿವಾಸ್ ಅವರು ಇಂದು ನಮ್ಮಿಂದ ದೂರವಾಗಿದ್ದಾರೆ. ಎಲ್ಲಾ ಪತ್ರಕರ್ತರೊಂದಿಗೆ ಒಡನಾಟ ಹೊಂದಿದ್ದ ಸದಾ ಹಸನ್ಮುಖಿಯೂ ಹೌದು. ಪತ್ರಿಕಾ ಸಂಘಟನೆಗಳೊAದಿಗೆ ತಮ್ಮ ಸಮಯವನ್ನು ಮುಡಿಪಾಗಿಟ್ಟಿದ್ದರು. ಶ್ರೀನಿವಾಸ್‌ರವರು ಇಂದು ನಮ್ಮಿಂದ ದೂರವಾಗಿದ್ದಾರೆ. 


ಮಲ್ಲೇಶ್ವರದ ವಾರ್ತಾಜಾಲ ಪತ್ರಿಕೆಯ ವರದಿಗಾರರಾಗಿಯೂ, ಛಾಯಾಗ್ರಾಹಕರಾಗಿಯೂ ತಮ್ಮ ಸೇವೆ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಲೇಬೇಕು. ವಾರ್ತಾಜಾಲ ಸಾಪ್ತಾಹಿಕ ಸಂಚಿಕೆ `ಮಲ್ಲೇಶ್ವರ ಸುತ್ತಮುತ್ತ’ ಪತ್ರಿಕೆಗೆ ಅವರು ಬೆನ್ನೆಲೆಬುಗಾಗಿ ನಿಂತು ಕಾರ್ಯ ನಿರ್ವಹಿಸಿದ್ದರು. 

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಮತ್ತು ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಕರುಣಿಸಲಿ.

-ಸಂ.

Post a Comment

0Comments

Post a Comment (0)