ಒಂದು ವರ್ಷದಲ್ಲಿ ಎರಡರಿಂದ ಮೂರು ಪಟ್ಟು ಸಿರಿಧಾನ್ಯ ರಫ್ತು ನಮ್ಮ ಗುರಿ – ಸಚಿವ ಚೆಲುವರಾಯ ಸ್ವಾಮಿ

varthajala
0

ಬೆಂಗಳೂರು,2; ರಾಜ್ಯ ಸರ್ಕಾರ ಸಾವಯವ ಕೃಷಿಗೆ ವಿಶೇಷ ಒತ್ತು ನೀಡಿದ್ದುಮುಂದಿನ ಒಂದು ವರ್ಷದಲ್ಲಿ ಸಿರಿಧಾನ್ಯ ಉತ್ಪಾದನೆ ಮತ್ತು ರಫ್ತು ಚಟುವಟಿಕೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕುರಫ್ತು ಪ್ರಮಾಣ ಎರಡರಿಂದ ಮೂರು ಪಟ್ಟು ಏರಿಕೆ ಮಾಡುವುದು ನಮ್ಮ ಗುರಿ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ







ಜನವರಿ 5 ರಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯಲಿರುವ ನಡೆಯಲಿರುವ ಅಂತರರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳದ ಹಿನ್ನೆಲೆಯಲ್ಲಿ “ಸಿರಿಧಾನ್ಯಗಳು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯ ಅನ್ವೇಷಣೆ” ಕುರಿತ ರಫ್ತುದಾರರ ಸಮಾವೇಶದಲ್ಲಿ ಮಾತನಾಡಿದ ಸಚಿವರುಮೊದಲ ಬಾರಿಗೆ 2017 ರಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ರ್ಕಾರ ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಅಂತರರಾಷ್ಟ್ರೀಯ ಸಮಾವೇಶ ನಡೆಸಿತುನಂತರ ಬರಗಾಲ  ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಪದ್ಧತಿ ಕುರಿತು ಚಿಂತನೆ ನಡೆಸಿದ ಪರಿಣಾಮ ಮೊದಲ ಬಾರಿಗೆ 2017ರಲ್ಲಿ ಪರಿಷ್ಕೃತ ಸಾವಯುವ  ನೀತಿಯನ್ನು ಹೊರತರಲಾಯಿತು ಎಂದರು. ರಾಜ್ಯ ಸರ್ಕಾರ ಸಾಂಪ್ರದಾಯಿಕ ಮತ್ತು ಸಾವಯವ ಪದ್ಧತಿಯಲ್ಲಿ ಬೆಳೆದ ಸಿರಿಧಾನ್ಯಗಳನ್ನು  "ಪುಜ್ಞಾವಂತ ಆಹಾರ"ವಾಗಿ ಉತ್ತೇಜಿಸುತ್ತಿದೆಒಂದು ಹೆಕ್ಟೇರ್‌ ಉತ್ಪಾನೆಗೆ ಹತ್ತು ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದ್ದುಬರುವ ದಿನಗಳಲ್ಲಿ  ಮೊತ್ತ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದುಮುಂದಿನ ವರ್ಷದ ವೇಳೆಗೆ ರಫ್ತು ಪ್ರಮಾಣ ದ್ವಿಗುಣತ್ರಿಗುಣಗೊಳಿಸಬೇಕುರಫ್ತು ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ತಲುಪುವುದು ನಮ್ಮ ಗುರಿರಫ್ತು ಮಾಡುವವರಿಗೆ ಕೆಫೆಕ್‌ ನಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದುಕೆಡಿಮೆ ನೀರುಹೆಚ್ಚು ಶ್ರಮವಿಲ್ಲದೇ ಬೆಳೆಯಲು ಅವಕಾಶವಿದೆಇದೀಗ ಪಂಚ ತಾರಾಸಪ್ತತಾರಾ ಹೋಟೆಲ್‌ ಗಳಲ್ಲೂ ಸಿರಿಧಾನ್ಯಗಳ ಆಹಾರ ದೊರೆಯುತ್ತಿದೆ ಎಂದರು.

ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ ಇಲಾಖೆಯ ವಿಶೇಷ ಕಾರ್ಯದರ್ಶಿರೋಹಿಣಿ ಸಿಂಧೂರಿ ಮಾತನಾಡಿರಫ್ತು ಚಟುವಟಿಕೆ ಉದಯೋನ್ಮುಖ ವಲಯವಾಗಿದ್ದುಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಶೇ ೨೬ ರಷ್ಟು ಪ್ರಗತಿಯಾಗಿದೆ.   ಕರ್ನಾಟಕದಲ್ಲಿ ಹತ್ತು ಕೃಷಿ ಹವಾಮಾನ ವಲಯಗಳಿದ್ದುಆರು ವಿಧದ ಮಣ್ಣು ವಿಧಗಳಿವೆ.  ರಾಜ್ಯ ೬ನೇ ಅತಿ ದೊಡ್ ರಫ್ತು ರಾಜ್ಯವಾಗಿದೆಸಿರಿಧಾನ್ಯಗಳ ರಫ್ತು ಚಟುಟಿಕೆಗೆ ವಿಶೇಷ ಗಮನಹರಿಸಲಾಗಿದೆ ಎಂದು ಹೇಳಿದರು.

ನಂತರ ಸಿರಿಧಾನ್ಯ ವಿಶೇಷತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಚೆಲುವರಾಯ ಸ್ವಾಮಿಪ್ರಸ್ತು ರಾಜ್ಯದಲ್ಲಿ 15.61 ಲಕ್ಷ ಹೆಕ್ಟೇರ್ ನಲ್ಲಿ ಸಿರಿಧಾನ್ಯ  ಬೆಳೆಯಲಾಗುತ್ತಿದೆಸಿರಿಧಾನ್ಯ ಮೇಳಕ್ಕೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್ಸಂಸ್ಥೆಯು ನೋಡೆಲ್‌ ಸಂಸ್ಥೆಯಾಗಿದೆಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ ಜಿಐಝಡ್‌ ತ್ತು ಐಐಎಂಆರ್‌ ಸಹ ಸಹಭಾಗಿ ಸಂಸ್ಥೆಗಳಾಗಿದ್ದು,  ಐಸಿಸಿಒಎ ಸಂಸ್ಥೆಯು ಸ್ತುಪ್ರದರ್ಶನದ ಪಾಲುದಾರ ಸಂಸ್ಥೆ ಎಂದರು.

ವಸ್ತುಪ್ರದರ್ಶನಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳುಮಾರುಕಟ್ಟೆದಾರರುರಫ್ತುದಾರರುಚಿಲ್ಲರೆ ಮಾರಾಟಗಾರರುರೈತ ಗುಂಪುಗಳುಪ್ರಾಂತೀಯ ಒಕ್ಕೂಟಗಳುಸಾವಯವ ಪರಿಕರಗಳ ಸಂಸ್ಥೆಗಳುರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆಮೇಳದಲ್ಲಿ ಉತ್ತರ ಪುದೇಶಪಂಜಾಬ್ಆಂಧ್ರ ಪ್ರದೇಶಮಹಾರಾಷ್ಟ್ರಒಡಿಸ್ಸಾತಮಿಳುನಾಡು ಮತ್ತು ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸುತ್ತಿವೆವಸ್ತು ಪುದರ್ಶನದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ ಎಂದರು.

ಕರ್ನಾಟಕ ಪೆವಿಲಿಯನ್ ನಲ್ಲಿ  ಕರ್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನ ಸಂಸ್ಥೆಗಳಿಂದ ಉತ್ತೇಜನಗೊಂಡಿರುವ ಕರ್ನಾಟಕದ ನವೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆಸಿರಿಧಾನ್ಯಸಾವಯವ ರೈತ ಗುಂಪುಗಳುಪ್ರಾಂತೀಯ ಒಕ್ಕೂಟಗಳುಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಒಟ್ಟು 100 ಮಳಿಗೆಗಳನ್ನು ತೆರೆಯಲಾಗಿದೆಉತ್ಪಾದಕರುಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುತ್ತದೆಎಂದು ಹೇಳಿದರು.

ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃ.ವಿ.ವಿ ಸಂಶೋಧನಾ ವಿಭಾಗದಿಂದ ಆಯೋಜಿಸಲಾಗಿದೆ. 10 ವಿವಿಧ ಸಿರಿಧಾನ್ಯ ಹೋಟಲ್ರೆಸ್ಟೋರೆಂಟ್ಗಳ ಮಳಿಗೆಗಳ ಮೂಲಕ ವೈವಿದ್ಯ ಮಯ ಮತ್ತು ರುಚಿಕರವಾದ ಸಿರಿಧಾನ್ಯಗಳ ಊಟ ಮತ್ತು ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ರಾಜ್ಯ ಮಿಡಿಸೌತೆಗುಲಾಬಿಈರುಳ್ಳಿ ಮತ್ತು ಕಾಫಿ ರಪ್ತಿನಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆಸಿರಿಧಾನ್ಯಗಳುದಾಳಿಂಬೆಕರಿಮೆಣಸುರಿಶಿನಮೆಣಸಿನಕಾಯಿಹಸಿರು ಮೆಣಸಿನಕಾಯಿಮಾವುಬಾಳೆಹಣ್ಣುಬೆಲ್ಲನೆಲಗಡಲೆಒಣದ್ರಾಕ್ಷಿಜಿಐಉತ್ಪನ್ನಗಳುಸಂಸ್ಕರಿಸಿದ ಆಹಾರಗಳುರಕಾರಿ ಸೇರಿದಂತೆ ಹಲವಾರು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ರಾಜ್ಯವು ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಕೃಷಿ ಆಯುಕ್ತರಾದ ಎನ್.ವೈಪಾಟೀಲ್.‌ ಕಾರ್ಯದರ್ಶಿ ಅನ್ಬು ಕುಮಾರ್‌, ಕೃಷಿ ಇಲಾಖೆ ನಿರ್ದೇಶಕರಾದ ಡಾಜಿ.ಟಿಪುತ್ರ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)