ನಟಿ ಬಿ. ಸರೋಜಾದೇವಿ ನಿಧನ: ಬಸವರಾಜ ಹೊರಟ್ಟಿ ತೀವ್ರ ಸಂತಾಪ

varthajala
0

ಬೆಂಗಳೂರು: ಜುಲೈ17, (ಕರ್ನಾಟಕ ವಾರ್ತೆ): ಕನ್ನಡದ ಗಿಳಿ ಅಭಿನಯ ಸರಸ್ವತಿ, ಸರಳ ಸಜ್ಜನಿಕೆಗೆ ಹೆಸರುವಾಸಿಯಾದ ಬಹುಭಾಷೆ ನಟಿ ಬಿ.ಸರೋಜಾದೇವಿ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಶೋಕ ಸಂದೇಶದಲ್ಲಿ ಅವರು, ಸುಮಾರು 6 ರಿಂದ 7 ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಹಿರಿಯ ನಟಿ ಬಿ. ಸರೋಜಾದೇವಿ. ಅವರು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತುಮಿಳು ಭಾμÉಗಳು ಸೇರಿದಂತೆ ವಿವಿಧ ಭಾμÉಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅಭಿನಯ ಶಾರದೆ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದರು.


“ಕಿತ್ತೂರು ಚೆನ್ನಮ್ಮ” ಚಲನ ಚಿತ್ರದಲ್ಲಿ ರಾಣಿ ಚೆನ್ನಮ್ಮನಾಗಿ ಸರೋಜಾದೇವಿ ಅವರ ಮನೋಜ್ಞ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟಿದ್ದಂತಿದೆ. ರಾಣಿ ಕಿತ್ತೂರ ಚೆನ್ನಮ್ಮನನ್ನು ನೋಡಿರದ ತಾವು ಶಾಲಾ ದಿನಗಳಲ್ಲಿ ಬಿ. ಸರೋಜಾದೇವಿ ಅವರನ್ನೇ ಚೆನ್ನಮ್ಮ ರಾಣಿ ಎಂದೇ ಭಾವಿಸಿದ್ದು, ಇಂದಿಗೂ ತಮ್ಮ ಸ್ಮøತಿ ಪಟಲದಲ್ಲಿದೆ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕನ್ನಡದಲ್ಲಿ ಡಾ. ರಾಜ್‍ಕುಮಾರ್, ಉದಯಕುಮಾರ್, ಕಲ್ಯಾಣ ಕುಮಾರ್, ತಮಿಳಿನ ಶಿವಾಜಿ ಗಣೇಶನ್, ಎಂ.ಜಿ ರಾಮಚಂದ್ರನ್, ತೆಲುಗು ನಟ ಎನ್.ಟಿ.ಆರ್, ನಾಗೇಶ್ವರರಾವ್ ಸೇರಿದಂತೆ ಹಲವು ಖ್ಯಾತನಾಮ ಕಲಾವಿದರೊಂದಿಗೆ ನಟಿಸಿದ್ದ ಸರೋಜಾದೇವಿ ಅವರು ಕನ್ನಡದ ಮೊಟ್ಟ ಮೊದಲ ಸೂಪರ್ ಸ್ಟಾರ್ ಲೇಡಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ರಾಜ್ಯ, ರಾಷ್ಟ್ರ ಮತ್ತು ಚಿತ್ರರಂಗದ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಕನ್ನಡದ ಅಪ್ರತಿಮ ಕಲಾವಿದೆಯಾಗಿದ್ದ ಬಿ. ಸರೋಜಾದೇವಿ. ಅವರ ನಿಧನದಿಂದ ಕನ್ನಡದ ಸಾಂಸ್ಕøತಿಕ ಲೋಕ ಒಂದು ಅನಘ್ರ್ಯ ರತ್ನವನ್ನು ಕಳೆದುಕೊಂಡತಾಗಿದೆ ಎಂದು ಬಸವರಾಜ ಹೊರಟ್ಟಿ ಕಂಬಿನಿ ಮಿಡಿದಿದ್ದಾರೆ.
ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

Post a Comment

0Comments

Post a Comment (0)