ಮಕ್ಕಳ ಕಳ್ಳಸಾಗಾಣಿಕೆ ತಡೆಗೆ ಬೇಕಿದೆ ಕಠಿಣ ಕ್ರಮ; ಡಾ.ತಿಪ್ಪೇಸ್ವಾಮಿ ಕೆ.ಟಿ.

varthajala
0
ಭಾರತ ದೇಶವು ಸ್ವಾತಂತ್ರ್ಯ ಪಡೆದು 78 ವರ್ಷಗಳು ಕಳೆದರೂ ಕೂಡ ಮಕ್ಕಳು ಬಾಲ್ಯವಿವಾಹಲೈಂಗಿಕ ದೌರ್ಜನ್ಯಮಕ್ಕಳ ಕಳ್ಳ ಸಾಗಾಣಿಕೆ ಇಂತಹ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದೆಪುರಾತನ ಕಾಲದಿಂದಲೂ ಕೂಡ ಮಹಿಳೆಯರನ್ನು ಮತ್ತು ಮಕ್ಕಳನ್ನು ವೇಶ್ಯಾವಾಟಿಕೆಅಂಗಾಂಗಗಳನ್ನು ಮಾರಾಟಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುವುದುಗುಲಾಮಗಿರಿಗೆ ಬಳಸಿಕೊಳ್ಳುವುದು, ಇತ್ಯಾದಿ ಕಾರಣಗಳಿಂದ ಮಹಿಳೆಯರು ಮತ್ತು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ. ಒಂದು ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎಂದಾದರೆ ಆ ಸಮಾಜದಲ್ಲಿ ಮಾನವೀಯತೆ ಇನ್ನೂ ಪೂರ್ಣವಾಗಿ ವಿಕಾಸಹೊಂದಿಲ್ಲವೆಂದೇ ಅರ್ಥ. ಹಾಗಾಗಿ ನಾವೆಲ್ಲರೂ ಜೊತೆಗೂಡಿ ಇಂತಹ ಅನಿಷ್ಟ ಸಾಮಾಜಿಕ ರುಜಿನಗಳನ್ನು ತೊಡೆದುಹಾಕಬೇಕಿದೆ. 

ರಾಜ್ಯದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 26436 ಬಾಲಗರ್ಭಿಣಿಯರು ಪತ್ತೆಯಾಗಿರುವ ಆಘಾತಕಾರಿ ಅಂಶವನ್ನು ಆರೋಗ್ಯ ಇಲಾಖೆ ಮಾರ್ಚ್ 2024 ಫೆಬ್ರವರಿ-2025 ಮಧ್ಯೆ ಸಂಗ್ರಹಿಸಿರುವ ದಾಖಲೆಗಳನ್ನು ಬಹಿರಂಗಪಡಿಸಿವೆ. ಈ ಸಮಸ್ಯೆ ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟಕ್ಕೂ ಕಾರಣವಾಗಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿತಿಪ್ಪೇಸ್ವಾಮಿ ವಿಷಾದಿಸಿದರು.

ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಹಾಗೂ ಬಾಲ್ಯವಿವಾಹ ನಿಷೇಧ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಗಾಟಿಸಿ  ಮಾತನಾಡಿದರು.
ರಾಜ್ಯದಲ್ಲಿ ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚಿನ ರೀತಿಯಲ್ಲಿ ಇರುವುದಕ್ಕೆ  ಅಂಕಿಅಂಶಗಳು ಸಾಕ್ಷಿಯಾಗಿವೆಬಾಲಗರ್ಭಿಣಿಯರು ದೈಹಿಕವಾಗಿ ಸದೃಢವಾಗಿರದ ಕಾರಣ ರಕ್ತಹೀನತೆಯಿಂದ ಹೆರಿಗೆ ಕೂಡ ಸಮಯದಲ್ಲಿ ಸಾವನ್ನಪ್ಪುತ್ತಿರುವುದು ಕಂಡುಬರುತ್ತಿವೆಇದಕ್ಕೆಲ್ಲಾ ಬಾಲ್ಯ ವಿವಾಹವು ಮೂಲಕಾರಣವಾಗಿದೆ ಇದನ್ನು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ನಿರ್ಮೂಲನೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಆರ್.ಜಿ.ಇತ್ತೀಚಿನ ದಿನಗಳಲ್ಲಿ ಚಿಕ್ಕಚಿಕ್ಕ ಮಕ್ಕಳಿಗೆ ಬೇರೆ ಬೇರೆ ಆಮಿಷಗಳನ್ನೊಡ್ಡಿ ಮಕ್ಕಳನ್ನು ವಿವಿಧ ರೀತಿಯ ಕೃತ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆಪೋಕೊ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆಆದ್ದರಿಂದ ಇಲಾಖೆಯ ಜೊತೆಯಲ್ಲಿ ಪೋಷಕರು ಕೂಡ ಕೈಜೋಡಿಸಿದಾಗ ಮಾತ್ರ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಶ್ರೀ ಪುರುಷೋತ್ತಮ ರವರು ಮಾತನಾಡಿ ದೇಶದ ವಿವಿಧ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ವಲಸೆ ಬಂದಿರುವ ಕುಟುಂಬಗಳಲ್ಲಿ ಸಾಕಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡುಬರುತ್ತದೆಇಂತಹ ಮಕ್ಕಳಿಗೆ ದೈಹಿಕವಾಗಿ ದುಡಿಯಲು ಅಸಮರ್ಥರಾಗಿರುವುದರ ಜೊತೆಗೆ ದುಶ್ಚಟಗಳಿಗೆ ಬಲಿಯಾಗುವುದನ್ನು ಸಹ ನಾವು ಕಾಣುತ್ತೇವೆಇಂತಹ ಮಕ್ಕಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಮಕ್ಕಳ ಸಹಾಯವಾಣಿ-1098ಗೆ ಮಾಹಿತಿ ನೀಡುವಂತೆ ಮಕ್ಕಳ ರಕ್ಷಣೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. 

ಜಿಲ್ಲಾ ಪಂಚಾಯತ್ ಆಡಳಿತ ವಿಭಾಗದ ಉಪಕಾರ್ಯದರ್ಶಿ ಈಶ್ವರಪ್ಪ ಮಾತನಾಡಿಕಿಶೋರಾವಸ್ಥೆಯ ಮಕ್ಕಳನ್ನು ಪೋಷಕರು ತಮ್ಮ ಕಣ್ಣುಗಳಂತೆ ಜೋಪಾನ ಮಾಡಿದಾಗ ಮಾತ್ರ ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು. ಅಲ್ಲದೇ ಪ್ರತಿಯೊಂದು ಗ್ರಾಮಪಂಚಾಯ್ತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚನೆಯಾಗಿರುತ್ತದೆಗ್ರಾಮೀಣ ಭಾಗದಿಂದ ಇದನ್ನು ಪ್ರಾರಂಭ ಮಾಡಬೇಕುವಿವಿಧ ಭಾಗಗಳಿಂದ ವಲಸೆ ಬರುವ ಕುಟುಂಬಗಳನ್ನು ಕಾವಲು ಸಮಿತಿ ಸದಸ್ಯರು ಗುರುತಿಸಿ ಸಂಪೂರ್ಣ ವಿವರವನ್ನು ಪಡೆದುಕೊಳ್ಳಬೇಕು ತಿಳಿಸಿದರು. 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯರಾದ ನೂರುನ್ನಿಸಾಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೈಂಗಿಕ ಪ್ರಕರಣಗಳು ಮೊದಲು ತಮ ಕುಟುಂಬದವರಿಂದಲೇ ನಡೆಯುತ್ತಿರುವುದಾಗಿ ನ್ಯಾಯಾಲಯದ ಮುಂದೆ ದಾಖಲಾಗುತ್ತಿವೆಒಂದೂವರೆ ವರ್ಷದಿಂದ ಹಿಡಿದು 18 ವರ್ಷದೊಳಗಿನ ಮಕ್ಕಳ ಮೇಲೆ ವಿವಿಧ ರೀತಿಯ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆಹೀಗಾಗಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಪೋಷಕರ ಸಭೆಗಳಲ್ಲಿ ಪೋಷಕರಿಗೆ ಬಾಲ್ಯವಿವಾಹ ಮತ್ತು ಮೋಕೋ ಕಾಯ್ದೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ಪ್ರತಿಯೊಂದು ಸರ್ಕಾರಿ ಕಟ್ಟಡದ ಮೇಲೆಶಾಲೆಯ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ-1098ನ್ನು ಕಡ್ಡಾಯವಾಗಿ ಶಾಶ್ವತ ಫಲಕದಲ್ಲಿ ಬರೆಸಿರುವುದನ್ನು ಕೊಳ್ಳಬೇಕೆಂದು ತಿಳಿಸಿದರುಖಚಿತಪಡಿಸಿಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಜೆಪವಿತ್ರ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳುಪೊಲೀಸ್ ಇಲಾಖೆಯ ಅಧಿಕಾರಿಗಳುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳುಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳುಅಂಗನವಾಡಿ ಮೇಲ್ವಿಚಾರಕರುಅಂಗನವಾಡಿ ಕಾರ್ಯಕರ್ತೆ ಯರುರಕ್ಷಣಾಧಿಕಾರಿ (ಸಾಂಸ್ಥಿಕ ಸೇವೆ)ಕಾನೂನು ಪರಿವೀಕ್ಷಣಾಧಿಕಾರಿಸಮಾಜ ಕಾರ್ಯಕರ್ತರುಜಿಲ್ಲಾ ಮಕ್ಕಳ ರಕ್ಷಣಾ ಘಟಕತುಮಕೂರು ಹಾಗೂ ಮಕ್ಕಳ ಸಹಾಯವಾಣ1098 ಸಿಬ್ಬಂದಿಗಳುತುಮಕೂರು ಇವರು ಹಾಜರಿದ್ದರು.

 

VK DIGITAL NEWS:

 

Post a Comment

0Comments

Post a Comment (0)