ಬೆಂಗಳೂರು : ಕರ್ನಾಟಕದ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ

varthajala
0

 ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕದ ಸೂಫಿಗಳು ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಮಾತನಾಡಿ,   

"ಸೂಫಿಗಳು ಇಲ್ಲಿನ ಭಾಷೆಗಳನ್ನ ಕಲಿತರು. ನಂತರ ದೇವರನ್ನ ಒಂದು    ಆಕೃತಿಗೆ ಹೋಲಿಸದೆ ಎಲ್ಲಾ ಕಡೆ ದೇವರ ಇರುವಿಕೆಯ ನಂಬಿಕೆಯನ್ನ ಕಾಣುತ್ತಾರೆ. ಪ್ರೀತಿಯಿಂದ ಬದುಕಿನಲ್ಲಿ ಧರ್ಮ ಕಾಣುತ್ತಾರೆ. ನಿರಾಕರ ಭಾವದಿಂದಲೇ ಸರಿಯೆಂದು ಭಾವಿಸಿದರು..ಪ್ರೇಮ ತತ್ವ,ಇತರರನ್ನ ಗೌರಿಸುವ ಸೂಚಿಸುವ ಧರ್ಮ ಸೂಫಿಯಲ್ಕಿ ಕಂಡು ಬರುತ್ತದೆ.ಸೂಫಿಗಳಲ್ಲಿ ಹಲವಾರು ಪಂಗಡಗಳು ಇವೆ. ಇವರು ಜನಪ್ರಿಯರಾಗಲು ಗುರುಗಳಿಂದ ದೇವರನ್ನ ನಂಬುತ್ತಾರೆ.ಈ ಧರ್ಮವನ್ನ ಅನುಸರಿಸುವವರು ಕಮ್ಮಿ. ರಾಜಾಸತ್ತೆ ಧರ್ಮವಾಗಿ ಉಳಿಯಲಿಲ್ಲ ಇಂದು ಹೆಚ್ಚಾಗಿ ಇದರ ಬಗ್ಗೆ ಅಧ್ಯಯನ  ನಡೆಯಬೇಕಿದೆ.ಕನ್ನಡ ಸಂಸ್ಕೃತಿ  ವಿಶ್ವಕ್ಕೆ ಕಾಣುವಂತಾಗಲಿ" ಎಂದು ಅಭಿಪ್ರಾಯಪಟ್ಟರು.ಡಾ. ಷರೀಫಾ ರವರು ಸಾಹಿತಿ ಹಾಗೂ ಸಿಂಡಿಕೇಟ್ ಸದಸ್ಯರು ಮಾತನಾಡಿ,

 " ಸೂಫಿಲೋಕ ದೇವರನ್ನ ಮನುಷ್ಯರಲ್ಲಿ ಕಂಡವರು. ಇವರು ಶಿಕ್ಷಿತರವರಾಗಿರಲಿಲ್ಲ. ಇವರ ಬಗ್ಗೆ ಒಂದು ದೊಡ್ಡ ಚರಿತ್ರೆ ಇದೆ. ಸಂಪ್ರದಾಯಗಳನ್ನ ಒಪ್ಪದ ಸೂಫಿಗಳನ್ನ ಮುಸ್ಲಿಂ ಅಲ್ಲವೆಂದರು. ಮನುಷ್ಯನ ಅಂಧಾಕಾರವನ್ನ  ಹೋಗಲಾಡಿಸಲು ಇವರು  ಸಾಕಷ್ಟು ಪ್ರಯತ್ನಿಸಿದರು. 'ಸೂಫಿ'ಗಳಲ್ಲಿ ಮಹಿಳೆಯರು ಕಂಡುಬಂದರೂ, ಕೆಲವು ಮಹಿಳೆಯರ ಬಗ್ಗೆ ಇತಿಹಾಸದಲ್ಲಿ ದಾಖಲಾಗಲಿಲ್ಲ.ಇಂದಿನ ಯುವ ಜನಾಂಗ  ಕೋಮುವಾದಕ್ಕೆ ಒಳಗಾಗದೆ' ಸೂಫಿ'ತತ್ವಗಳನ್ನ ಅಳವಡಿಸಿಕೊಂಡು ಸೋದರತ್ವ ಬೆಳೆಸಬೇಕಿದೆ' "ಎಂದರು..

 'ಕನ್ನಡ ಅಧ್ಯಯನ ಕೇಂದ್ರ'ದ ನಿರ್ದೇಶಕರಾದ 'ಡೊಮಿನಿಕ್ 'ರವರು ಮಾತನಾಡಿ. "ತಳಸಮುದಾಯಗಳ  ದೈವಗಳಾಗಿರುವ ಮಾದಪ್ಪ, ಮಂಟೇಸ್ವಾಮಿ, ಚೆನ್ನಮ್ಮಾಜಿ ಮುಂತಾದವರು, ದಕ್ಷಿಣದಿಂದ ಉತ್ತರಕ್ಕೆ ಹೋಗಿ ಕೊಡೇಕಲ್ ಬಸವಣ್ಣರನ್ನ ಭೇಟಿಯಾಗಿ ಅಲ್ಲಿಂದ ಪ್ರೇರಣೆ ಪಡೆದು ದಕ್ಷಿಣಕ್ಕೆ  ಪುನಃ ಬಂದು. ಇಲ್ಲಿನ ತಳಸಮುದಾಯಗಳ ಬದುಕಿಗಾಗಿ ಜೀವತೇದವರು.  ಈವತ್ತಿಗೂ ಸಹ ಅಲ್ಲಿ ಹಿಂದೂ-ಮುಸ್ಲಿಂ ಧರ್ಮದವರು ಆ ಪರಂಪರಗೆ ನಡೆದುಕೊಳ್ಳುತ್ತಿದ್ದಾರೆ.  ಅಲ್ಲಿರುವ ಗದ್ದುಗೆ ಇಬ್ಬರಿಗೂ ಸೇರಿದ್ದರಿಂದ ಮತ್ತೆ ಮತ್ತೆ ಅದರ ಐಕ್ಯತೆ ಎದ್ದು ಕಾಣುತ್ತಿದೆ. ತಳ ಸಮುದಾಯಗಳಿಗೆಲ್ಲಾ ಚೈತನ್ಯ ತುಂಬುವ ತಾಣವಾಗಿದೆ "ಎಂದು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕಾರದ ಡಾ. ಚಿತ್ತಯ್ಯ ಪೂಜಾರ್ ರವರು ಮಾತನಾಡಿ "ಇಂದು ಇಡೀ ಭಾರತ ದೇಶವೇ ಅತ್ಯಂತ ದುರಿತ ಕಾಲದಲ್ಲಿದೆ.  ಪ್ರಪಂಚದಲ್ಲೆಲ್ಲಾ ಯುದ್ಧಗಳು ಜರುಗುತ್ತಿದೆ.ನಾವು ದ್ವೇಷ,ಅಸೂಯೆಗಳನ್ನ ಬಿಟ್ಟು ಭಾವೈಕ್ಯತೆಯಿಂದಿರಬೇಕು ಎನ್ನುವುದನ್ನ 'ಸೂಫಿ 'ಸಂತತಿ ಜಗತ್ತಿನುದ್ದಗಲಕ್ಕೂ ಸಾರಿದ್ದಾರೆ.ಅವರ ಎಲ್ಲಾ ಚಿಂತನೆಗಳು ಇಂದಿನ ಯುವಶಕ್ತಿಗಳಿಗೆ ಅವಶ್ಯಕತೆವಿದೆ" ಎಂದು  ಅಭಿಪ್ರಾಯಪಟ್ಟರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದಂತಹ ಬೆಂ. ವಿ. ವಿದ್ಯಾಲಯದ ಕುಲಪತಿಯಾದ ಡಾ. ಜಯಕರ್. ಎಸ್. ಎಂ ರವರು ಮಾತನಾಡಿ. "ಇಂದಿನ ದಿನಗಳಲ್ಲಿ ಮನುಷ್ಯ ಮನುಷ್ಯರನ್ನ  ಪ್ರೀತಿಸುವ ಗುಣವನ್ನ ಮರೆತಿದ್ದಾನೆ .ಇದೆ ಅನಾಹುತಕ್ಕೆ ಕಾರಣವಾಗುತ್ತಿದೆ.ಎಲ್ಲಾ ಧರ್ಮಗಳು ಇರುವುದು ಒಳ್ಳೇಯದನ್ನ ಬಯಸುವುದಕ್ಕೆ ವಿನಃ ಕೆಟ್ಟದನ್ನ ಬಯಸುವುಕ್ಕಲ್ಲ.ಇಂದು ನಾವುಗಳು ಮಾನವೀಯತೆಯನ್ನ ಕಳೆದುಕೊಳ್ಳುತ್ತಿದ್ದೇವೆ. ಯಾವುದೆ ಧರ್ಮ -ಜಾತಿಯವರಾಗಿರಲಿ ಮಾನವೀಯ ಗುಣ ಬೆಳಸಿಕೊಳ್ಳಬೇಕು. 'ಸೂಫಿ' ಒಂದು ಆಧ್ಯಾತ್ಮಕ ಮಾರ್ಗ.ನಮ್ಮ ವಿದ್ಯಾರ್ಥಿಗಳು ನಾಡಿನ ವಿವಿಧ ಸಂಸ್ಕೃತಿಯನ್ನ ಅರಿಯಬೇಕಿದೆ" ಎಂದರು.

 ಕಾರ್ಯಕ್ರದಲ್ಲಿ, 'ಕನ್ನಡ ಅಧ್ಯಯನ ಕೇಂದ್ರ'ದ ಪ್ರಾಧ್ಯಾಪಕರಾದ  ಡಾ. ಬಿ ಗಂಗಾಧರ್ ರವರು, ಡಾ. ವಡ್ದೆ ಹೇಮಲತಾ ರವರು, ಡಾ. ಸುಮಿತ್ರ ಎಂ.ರವರು, ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳು, ಕರ್ನಾಟಕ ಸಂಘದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.   

VK DIGITAL NEWS:ಶ್ರೀ ಗುರುರಾಯರ ಆರಾಧನಾ ಮಹೋತ್ಸವಕ್ಕೆ ಕ್ಷಣಗಣನೆ - ಜಯನಗರ ರಾಯರ ಮಠದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ



Post a Comment

0Comments

Post a Comment (0)