ಹದಿನಾಲ್ಕು ಬಾಲೆಯರ ನೃತ್ಯಾರೋಹಣ -ಕಲಾಸಕ್ತರಿಂದ ಆಸ್ವಾದನೆ

varthajala
0

ಬೆಂಗಳೂರು : ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರದ ಸೇವಾ ಸದನದಲ್ಲಿ ಹದಿನಾಲ್ಕು ಬಾಲೆಯರ ಭರತನಾಟ್ಯ ನೃತ್ಯಾರೋಹಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಖ್ಯಾತ ವೀಣಾ ವಾದಕರಾದ ವಿದ್ವಾನ್ ಶ್ರೀ ಎ ಶಂಕರ್ ರಾಮನ್ ಹಾಗೂ ಕಲಾವಿದರು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು.

ನೃತ್ಯರೋಹಣದ ಮೊದಲನೇ ಹಂತವಾದ ರಂಗ ಪ್ರವೇಶಕ್ಕೆ ಸಿದ್ಧರಾದ  ಹದಿನಾಲ್ಕು ಜನ ವಿದ್ಯಾರ್ಥಿನಿಯರು (ಧೃತಿ, ಸಾನ್ವಿ, ಮನಸ್ವಿ, ಶ್ರಾವ್ಯ, ಗುರುಸನ್ನಿಧಿ, ನಿವೇದಿತಾ, ಸಿರಿ, ಅವ್ನಿ, ನಂದನ, ಅರ್ಚನಾ ಹಾಗೂ ಮನು ನೃತ್ಯ ಶಾಲೆಯ ವಿದ್ಯಾರ್ಥಿನಿಯರಾದ ಸಂಹಿತಾ, ಧನ್ವಿತಾ, ಉನ್ನತಿ ಹಾಗೂ ಪುಣ್ಯಶ್ರೀ)  ಪ್ರಮಾಣ  ಮಾಡಿ ತಮ್ಮ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೃತ್ಯ ಪ್ರದರ್ಶನವನ್ನು ನೀಡಿದರು. ನೃತ್ಯರೋಹಣದ ಮೂರನೇ ಹಂತವಾದ ಸೃಜನಿಕದಲ್ಲಿ ಕು. ಸಂಗೀತ ಬಿ ಎಸ್ ರವರು 45 ನಿಮಿಷಗಳ ಕಾಲ ನೃತ್ಯವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಎ ಶಂಕರ್ ರಾಮನ್ ರವರನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸಲಾಯಿತು. ಗಾಯನದಲ್ಲಿ ವಿದುಷಿ ಶ್ರೀಮತಿ ರಾಧಿಕಾ ಪೊದುವಳ್, ನಟುವಾಂಗದಲ್ಲಿ ವಿದುಷಿ  ಶ್ರೀಮತಿ ಸೋನಿಯಾ ಪೊದುವಾಳ್, ಶ್ರೀಮತಿ ದೀಪ ಕಲ್ಮಡಿ, ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಎಸ್. ವಿ. ಗಿರಿಧರ್, ಕೊಳಲು ವಾದನದಲ್ಲಿ ವಿದ್ವಾನ್ ಶ್ರೀ ಕೃಷ್ಣಭಟ್, ವಿಶೇಷ ತಾಳವಾದ್ಯದಲ್ಲಿ ವಿದ್ವಾನ್ ಶ್ರೀ ಕಾರ್ತಿಕ್ ವೈಧಾತ್ರಿ ಹಾಗೂ  ವೀಣಾ ವಾದನದಲ್ಲಿ ಶ್ರೀ ಅಚ್ಯುತ್  ರವರು ಹಿಮ್ಮೇಳದಲ್ಲಿ ಸಹಕಾರ ನೀಡಿದರು.

Post a Comment

0Comments

Post a Comment (0)