ರಾಜ್ಯದಲ್ಲಿ 7300 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆ : ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ

varthajala
0

ಬೆಳಗಾವಿ / ಬೆಂಗಳೂರು: ಸೋಲಾರ್ ಹಾಗೂ ವಿಂಡ್ ಸೇರಿದಂತೆ ಹೈಬ್ರಿಡ್ ವಿದ್ಯುತ್ ಉತ್ಪಾದನೆಗೆ ರ‍್ಕಾರ ಆದ್ಯತೆ ನೀಡಿದೆ. ಸದ್ಯ ರಾಜ್ಯದಲ್ಲಿ 7,300 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜರ‍್ಜ್ ಅವರು ಹೇಳಿದರು.ಬೆಳಗಾವಿಯ ಸುರ‍್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಷ್ಠಗಿ ಶಾಸಕರಾದ ದೊಡ್ಡನಗೌಡ ಹನಮಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 41 ಯೋಜನೆಗಳ 213 ವಿಂಡ್ ರ‍್ಬೈನ್‍ಗಳಿಂದ 433.12 ಮೆಗಾವ್ಯಾಟ್ ಸಾಮಥ್ರ‍್ಯ ಪವನ ವಿದ್ಯುತ್ ಯೋಜನೆಗಳು ಅನುಷಾ್ಠನಗೊಂಡಿವೆ. 2022-23 ರಿಂದ 2025-26 ನವೆಂಬರ್ ಅಂತ್ಯದವರೆಗೆ 1394 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಗಳು ಹಂಚಿಕೆಯಾಗಿವೆ. ಇದರಲ್ಲಿ 57 ಮೆಗಾವ್ಯಾಟ್ ಸಾಮಥ್ರ‍್ಯದ ಯೋಜನೆಗಳು ಅನುಷಾ್ಠನಗೊಂಡಿವೆ. 1337 ಮೆಗಾವ್ಯಾಟ್ ಸಾಮಥ್ರ‍್ಯ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಿಗೆ ಬೇಕಾಗಿರುವ ಜಮೀನುಗಳನ್ನು ರ‍್ನಾಟಕ ಭೂ ಸುಧಾರಣಾ ಕಾಯ್ದೆ 1961 ಮತ್ತು ಅದರ ಪರಿಷ್ಕರಣೆಯನ್ವಯ ಸೆಕ್ಷನ್ 109ರ ಅಡಿಯಲ್ಲಿ ಅವಕಾಶ ಕಲ್ಪಿಸಿದಂತೆ, ಸಂಬಂಧಿಸಿದ ಇಲಾಖೆ ಅಥವಾ ಭೂ ಮಾಲೀಕರಿಂದ ಜಮೀನು ಗುತ್ತಿಗೆ ಅಥವಾ ಕ್ರಯಕ್ಕೆ ಪಡೆಯುವುದು ಸಂಬಂಧಪಟ್ಟ ಕಂಪನಿಗಳದ್ದಾಗಿದೆ. ಇದರಲ್ಲಿ ರ‍್ಕಾರದ ಹಸ್ತಕ್ಷೇಪವಿಲ್ಲ. ವಿಂಡ್ ರ‍್ಬೈನ್ ಅಳವಡಿಸಲು ಖಾಸಗಿ ಕಂಪನಿಗಳು ದೊಡ್ಡಗಾತ್ರ, ವಾಹನಗಳನ್ನು ಬಳಿಸಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದರೆ, ಸಂಬಂಧಪಟ್ಟ ಕಂಪನಿಗಳು ರಸ್ತೆ ನರ‍್ಮಿಸಿಕೊಡುವಂತೆ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಸಚಿವ ಕೆ.ಜೆ.ಜರ‍್ಜ್ ಅವರು ತಿಳಿಸಿದರು.

3 ರ‍್ಷದಲ್ಲಿ 400 ಉಪವಿದ್ಯುತ್ ವಿತರಣಾ ಕೇಂದ್ರ ನರ‍್ಮಾಣಕ್ಕೆ ಯೋಜನೆ:ರಾಜ್ಯ ರ‍್ಕಾರ ಈಗಾಗಲೇ 100 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ಹೊಸದಾಗಿ ನರ‍್ಮಿಸಿದೆ. ಮುಂಬರುವ 3 ರ‍್ಷದಲ್ಲಿ 400 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ನರ‍್ಮಿಸಿ, ರಾಜ್ಯದ ಮೂಲೆ ಮೂಲೆಗಳಿಗೂ ವಿದ್ಯುತ್ ಸರಬರಾಜು ಸಂರ‍್ಕ ಜಾಲ ಬಲಪಡಿಸಲಾಗವುದು ಎಂದು ಸಚಿವ ಕೆ.ಜೆ.ಜರ‍್ಜ್ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.ರಾಜ್ಯದ ಎಲ್ಲೆಡೆ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಗೃಹ ಹಾಗೂ ಕೈಗಾರಿಕೆ ಸಂರ‍್ಕಗಳಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡಲಾಗುತ್ತಿದೆ. ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಆಲ್ಲಾಪಟ್ಟಣ ಗ್ರಾಮದಲ್ಲಿ 220/66/ಕೆ.ವಿ. ವಿದ್ಯುತ್ ಉಪಕೇಂದ್ರ ನರ‍್ಮಾಣಕ್ಕೆ, ಅಲ್ಲಾಪಟ್ಟಣ ಗ್ರಾಮದ ರ‍್ವೆ ನಂ.59 ರಲ್ಲಿ 7 ಎಕರೆ 10 ಗುಂಟೆ ಜಮೀನಿನ ಜೊತೆಗೆ ಅವಶ್ಯಕತೆ ಇದ್ದ 2 ಎಕರೆ 30 ಗುಂಟೆ ಜಮೀನು ಮಂಜೂರಾತಿಗೆ ಹಾಸನ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ. ಜಮೀನು ಹಸ್ತಾಂತರಗೊಳಿಸಿದ ಕೂಡಲೇ ಟೆಂಡರ್ ಕರೆದು ವಿದ್ಯುತ್ ಉಪಕೇಂದ್ರ ನರ‍್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕರಾದ ಮಂಜು.ಎ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಬಂಗಾರಪೇಟೆ ವಿಧಾನ ಸಭಾಕ್ಷೇತ್ರದ ಕೋಲಾರ ತಾಲ್ಲೂಕು ತಂಬಿಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ಸಾಮಥ್ರ‍್ಯದ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವ ಕೆ.ಜೆ.ಜರ‍್ಜ್ ಅವರು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ತಿಳಿಸಿದರು.

Post a Comment

0Comments

Post a Comment (0)