" ಬಿ.ಎಂ.ಟಿ.ಸಿ ಅಧಿಕಾರಿಯ ದರ್ಪ " - ಸಾರಿಗೆ ಸಚಿವ ಶ್ರೀ ರಾಮುಲು ಅವರಿಗೆ ಮನವಿ .

varthajala
0

ಮಾನ್ಯ  ಸಚಿವರೇ 

ಬಿ.ಎಂ.ಟಿ.ಸಿ  , ಸದಾ ಕಾಲ ನಷ್ಟ ದಲ್ಲಿ ಎಂದು  ಬೊಬ್ಬೆ ಹೊಡೆಯುವ  ಸಿಲಿಕಾನ್ ಸಿಟಿ  ಯ ಬಿ.ಎಂ.ಟಿ.ಸಿ ಯ ಆಡಳಿತ ಮಂಡಳಿ ಅವರ ಉದ್ಯೋಗಿಗಳು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ ಎಂದು ಒಮ್ಮೆ ನೋಡಿ ಕೊಂಡು ಆತ್ಮಾವಲೋಕನ ಮಾಡಿ ಕೊಳ್ಳಬೇಕು  ಎಂಬುದು ನನ್ನ ವಿನಂತಿ  ನಿಮ್ಮಲ್ಲಿ ..



ರಾಜ್ಯದ ಸಾರಿಗೆ ಸಚಿವ ಶ್ರೀ ರಾಮುಲು ಅವರೇ  ಸೆಪ್ಟೆಂಬರ್ 26 ರ ಭಾನುವಾರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ  ಬಸ್ ಪಾಸ್ ವಿತರಿಸುವ  ಕೌಂಟರ್ ಗಳು ಬಾಗಿಲು ಮುಚ್ಚಿದ್ದವು , ಬಿ.ಎಂ.ಟಿ.ಸಿ  ಬಸ್ ನಿಲ್ದಾಣದಲ್ಲಿ ಇರುವ  ವಿಚಾರಣೆ ಕೊಠಡಿ ಯ ಅಧಿಕಾರಿಯನ್ನು ಸಂಪರ್ಕಿಸಿ ,  ನನ್ನ ಐ .ಡಿ ಕಾರ್ಡ್ ಅನ್ನು  ನವೀಕರಣ ಮಾಡಿ ಕೊಡುವಂತೆ ಹಾಗೂ ಅಕ್ಟೋಬರ್ ತಿಂಗಳ ಮಾಸಿಕ ಪಾಸ್ ವಿತರಿಸುವಂತೆ ಕೇಳಿಕೊಂಡಾಗ ಮಧ್ಯಾಹ್ನ 2.15 ರ ಸಮಯ  , ಆದರೆ ವಿಚಾರಣೆ ಕೊಠಡಿಯಲ್ಲಿ  ಇದ್ದ ಅಧಿಕಾರಿ ಮಾತ್ರ ದರ್ಪದ ನುಡಿಗಳನ್ನು  ಆಡಿ  3 ವರುಷಕ್ಕೆ ಒಮ್ಮೆ  ನವೀಕರಣ ಮಾಡುವ ಐ .ಡಿ ಕಾರ್ಡ್ ಅನ್ನು ತಿಂಗಳ 1 ರಿಂದ  25 ನೇ ತಾರೀಕಿನ ವರೆಗೆ ಮಾತ್ರ ಮಾಡಲಾಗುತ್ತದೆ , ಅಕ್ಟೋಬರ್ ತಿಂಗಳ ಐ. ಡಿ ಕಾರ್ಡ್ ಬರಬೇಕು ಎಂದು ಸುಳ್ಳು ಹೇಳಿ , ನನ್ನನು ಸಾಗು ಹಾಕುವ  ಹಾದಿ ಹಿಡಿದ್ದರು . 


ನಾನು ಅವರಿಗೆ ಐ. ಡಿ ಕಾರ್ಡ್ ನವೀಕರಣ ಪ್ರತಿನಿತ್ಯ  ಮಾಡಿ ಕೊಡ ಬೇಕಲ್ಲವೇ ಎಂದಾಗ ನನ್ನ  ಬಳಿ ಜಗಳಕ್ಕೆ ಬಂದು ಕಛೇರಿ ಒಳಗೆ ಬನ್ನಿ ಎಂದು ಕರೆದಾಗ  ನಾನು ಅವರ ಕಚೇರಿ ಮುಂದೆ ನಿಂತು ಒಳಗೆ ಹೋಗದೆ  ಪ್ರಾಯಣಿಕರಿಂದ ಬರುವ ಲಾಭ ನಿಮಗೆ ಬೇಕು ಆದರೆ  ಪ್ರಯಾಣಿಕರಿಗೆ ಸ್ಪಂದಿಸುವ ರೀತಿ ನೀತಿ ನಿಮ್ಮಗೆ ಗೊತ್ತಿಲ್ಲ ಎಂದು ಅಲ್ಲಿಂದ ಹೊರಟು ಬಸ್ ನಿಲ್ದಾಣದ ಲ್ಲಿ ಇದ್ದ  ಟಿ.ಸಿ ಬಳಿ ಕೇಳಿದಾಗ ಪ್ರತಿ ನಿತ್ಯ   ಐ. ಡಿ ಕಾರ್ಡ್  ನವೀಕರಣ ಮಾಡಿ ಕೊಡ ಬೇಕು ಹಾಗೂ ಮುಂದಿನ ತಿಂಗಳ ಬಸ್ ಪಾಸ್ ಅನ್ನು ತಿಂಗಳ 25 ನೆ ತಾರಿಕಿನಿಂದ ವಿತರಿಸಲಾಗುತ್ತದೆ ಎಂದು ನುಡಿದ್ದರು .


  " ಅಧಿಕಾರಿಯ ದರ್ಪ ಇತ್ತ ನೋಡಿ ಸಾರಿಗೆ ಸಚಿವರೇ " - 


ಸಿಲಿಕಾನ್ ಸಿಟಿ ಯ ಹೃದಯ ಭಾಗ ಆಗಿರುವ  ಮೆಜೆಸ್ಟಿಕ್  ಬಸ್ ನಿಲ್ದಾಣದಲ್ಲಿ ಇರುವ ಬಿ.ಎಂ.ಟಿ.ಸಿ  ಕಛೇರಿ ಯ   ಸಹಾಯಕ ಕೇಂದ್ರದಲ್ಲಿ   ಸೆಪ್ಟೆಂಬರ್ 26 ರ ಇಂದು ಮಧ್ಯಾಹ್ನ 2.30 ವೇಳೆಗೆ  ಬಸ್ ಪಾಸ್ ನ ಐ.  ಡಿ ಕಾರ್ಡ್ ಅನ್ನು   ನವೀಕರಣ  ಮಾಡಲು  ಹೋದ ನನಗೆ  ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ  ಐ.  ಡಿ ಕಾರ್ಡ್  ಖಾಲಿ ಆಗಿದೆ ಎಂದು ಒಮ್ಮೆ  ಹೇಳುತ್ತಾ ಮತೊಮ್ಮೆ  25 ನೇ ತಾರಿಕಿನ ವರೆಗೆ ಮಾತ್ರ ನೀಡುವುದು ಎಂದು ದರ್ಪ ದಿಂದ ಮಾತನಾಡಿದರು .

ಅಕ್ಟೋಬರ್ ತಿಂಗಳ ಪಾಸ್ ನೀಡುವಂತೆ ಮನವಿ ಮಾಡಿದರೆ  ಅದಕ್ಕೆ ಅವರು 1 ನೆ  ತಾರಿಕಿನಿಂದ ನೀಡಲಾಗುತ್ತದ್ದೆ  ಎಂಬ ಉತ್ತರ ,.


ಅಸಲಿ ವಿಷಯವೇನೆಂದರೆ  ಬಿ.ಎಂ.ಟಿ.ಸಿ ಬಸ್ ಪಾಸ್ ವಿತರಣೆ ಮಾಡುವ ಹಿಂಭಾಗದ ಕಚೇರಿಯಲ್ಲಿ ಸಿಬ್ಬಂದಿಗಳು ಇಲ್ಲದೆ ಬಾಗಿಲು ಮುಚ್ಚ ಲಾಗಿತ್ತು .


 " ಬಿ.ಎಂ.ಟಿ.ಸಿ ಬಸ್ ನಿರ್ವಾಹಕರ ಉತ್ತರ "- 


ಬಸ್ ನಿಲ್ದಾಣದಲ್ಲಿ ಇದ್ದ ಟಿ.ಸಿ ಬಳಿ ಹಾಗೂ   ಬಳಿ ಕೇಳಿದಾಗ  ಅವರು ನಿಮ್ಮ  ಐ .ಡಿ ಕಾರ್ಡ್  ಅನ್ನು  3 ವರುಷ ಅವಧಿಗೆ ಮಾಡಲಾಗುತ್ತದೆ ಹಾಗೂ ಒಂದು ವಾರ ಇರುವಾಗ ಅದನ್ನು ನವೀಕರಿಸಬೇಕು ಹಾಗೂ  ಪ್ರತಿ ತಿಂಗಳ  25 ರ ನಂತರ  ಹೊಸ ಪಾಸ್ ಅನ್ನು (ಮುಂಬರುವ  ತಿಂಗಳ) ವಿತರಣೆ ಮಾಡಲಾಗುತ್ತದೆ .. ಆದರೆ ಅಲ್ಲಿಯ ಅಧಿಕಾರಿ ಮಾತ್ರ ಯಾಕೆ ಹಾಗೆ ಹೇಳಿದರು ಗೊತ್ತಿಲ್ಲ ಎಂದು ನುಡಿದು ನೀವು ಬನಶಂಕರಿ  ಬಸ್ ಡಿಪೋ ಗೆ ಹೋಗಿ ಅಲ್ಲಿ ನಿಮಗೆ ಕಾರ್ಡ್   ನವಿಕರಿಸಿ ಕೊಡುತ್ತಾರೆ ಎಂದಾಗ  ನಾನು ಅವರಿಗೆ  ತಿಳಿಸಿದೆ 15 ದಿನಗಳ ಹಿಂದೆ ಹೋದಾಗ ತಿಂಗಳ 1 ನೇ ತಾರೀಕು ಮಾತ್ರ ವಿತರಣೆ ಮಾಡುತ್ತೇವೆ ನೀವು ಕೊಡುವ  100 ರೋ ಗೆ ನಾವು ಮತ್ತೆ ಪ್ರಮುಖ  ಡಿಪೋ ಗೆ ಹೋಗಿ ಹಣ ಪಾವತಿಸ ಬೇಕಾಗುತ್ತದೆ ಎಂದು ಅಂದು ಬನಶಂಕರಿ ಬಿ.ಎಂ.ಟಿ ಸಿ ಬಸ್ ನಿಲ್ದಾಣದಲ್ಲಿ ಇದ್ದ ಅಧಿಕಾರಿ ನನ್ನ ಬಳಿ ನುಡಿದ್ದ ವಿಷಯವನ್ನು   ಬಿ.ಎಂ.ಟಿ. ಸಿ ನಿರ್ವಾಹಕರ ಬಳಿ ತಿಳಿಸಿದ್ದೆ .


ಬಿ.ಎಂ.ಟಿ ಸಿ ವಿಚಾರಣೆ ಕೊಠಡಿ ಅಧಿಕಾರಿಯ ದರ್ಪ  ಸೆಪ್ಟೆಂಬರ್ 26 ರ ಮಧ್ಯಾಹ್ನ 2. 30 ರ ಹೊತ್ತಿನಲ್ಲಿ  ಈ ರೀತಿ ನಡೆದಿತ್ತು , ಸಾರಿಗೆ ಸಚಿವರೇ  ಇಂತಹ  ದರ್ಪ ತೋರುವ ಅಧಿಕಾರಿಗಳಿಂದ ಬಿ.ಎಂ.ಟಿ.ಸಿ ನಷ್ಟದ ಹಾದಿಯಲ್ಲಿದೆ ಎಂದರೆ ಪ್ರಾಯಃಶ ತಪ್ಪಾಗಲಾರದು , ಸಚಿವರೇ ಇತ್ತ ನೋಡಿ , ನಾಗರೀಕ ರ ಸಮಸ್ಯೆಗೆ ಪರಿಹಾರ ನೀಡಿ .


ಅಕ್ಟೋಬರ್ 1 ರಿಂದ  ನವೀಕರಣ ಗೊಂಡ ಐ .ಡಿ  ತೋರಿಸಿದರೆ ಹಾಗೂ ಹೊಸ ಬಸ್ ಪಾಸ್ ತೋರಿಸಿದರೆ ಪ್ರಯಾಣ ಮಾಡಲು ಅನುಕೂಲ , 1ನೇ ತಾರೀಕು ಇಂದ ಹೊಸದಾದ ನವೀಕರಣ ಗೊಂಡ ಐ .ಡಿ ಕಾರ್ಡ್ ಇಲ್ಲದೆ ಹೋದರೆ ಬಿ.ಎಂ.ಟಿ.ಸಿ   ಬಸ್ ನ ನಿರ್ವಾಹಕರು   ಪ್ರಯಾಣ ಮಾಡಲು ಅನುಮತಿ  ನೀಡುವುದ್ದಿಲ್ಲ ,


ಹಾಗೇ ಯೇ ಬಸ್ ಪಾಸ್ ವಿಚಾರಿಸುವ ಬಿ.ಎಂ.ಟಿ.ಸಿ  ಬಸ್ ನಿಲ್ದಾಣದ ಕೊಠಡಿ ಯ ಮುಂಭಾಗದಲ್ಲಿ ಐ. ಡಿ ಕಾರ್ಡ್ ತೋರಿಸಿ  ಬಿ.ಎಂ.ಟಿ.ಸಿ ಬಸ್ ಪಾಸ್ ಪಡೆಯಿರಿ ಎಂಬ  ಸೂಚನೆ ನೀಡುವ ಚೀಟಿ ಬೇರೆ ಅಂಟಿಸಿದ್ದು ಐ. ಡಿ .ನವೀಕರಣ ಮಾಡಿ ಕೊಡಿ ಅಂದರೆ ಮಾತ್ರ  ಕಾರ್ಡ್ ಖಾಲಿ ಆಗಿದೆ ಎಂಬ ಖಯಾಲಿ ಉತ್ತರ ನೀಡುತ್ತಾ,  ಪ್ರತಿ ನಿತ್ಯ  ಕೊಲಿ ಮಾಡಿ ಜೀವನ ಸಾಗಿಸುವ ಶ್ರಮ  ಜೀವಿಗಳ ಬದುಕಿಗೆ ಕೊಳ್ಳಿ ಇಡುವ ಬಿ.ಎಂ.ಟಿ.ಸಿ  ವಿಚಾರಣೆ ಕೊಠಡಿಯ ಅಧಿಕಾರಿಯ ದರ್ಪಕ್ಕೆ ಬ್ರೆಕ್ ಹಾಕಿ ಸಾಮಾನ್ಯ ಜನರ ಬದುಕು ಅನ್ನು ಹಸನು ಮಾಡಿ ಸಚಿವರೇ .

ಚಿತ್ರ - ಬರಹ - ತೀರ್ಥಹಳ್ಳಿ ಅನಂತ  ಕಲ್ಲಾಪುರ



Tags

Post a Comment

0Comments

Post a Comment (0)