ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ, ನಿಮ್ಮ ಭವಿಷ್ಯದ ಶಿಲ್ಪಿ ನೀವೆ

varthajala
0

ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿಯೋಜನೆಯಡಿಯಲ್ಲಿತರಭೇತಿ ಪಡೆಯುತ್ತಿರುವ ವಿಧ್ಯಾರ್ಥಿಗಳು ಮತ್ತು ಸಂಸ್ಥೆಯ ಶಿಕ್ಷಣಾರ್ಥಿಗಳ ಉಪಸ್ಥಿತಿಯಲ್ಲಿ 159 ನೇ ಸ್ವಾಮಿ ವಿವೇಕಾನಂದರವರಜಯAತಿನ್ನು ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ(ನೋA), (ಸಂಪ್ರೀತಿ ಸದನ, ಸರ್ಕಾರಿಆಸ್ಪತ್ರೆ ಪಕ್ಕದರಸ್ತೆ, ಮಾಗಡಿ)ಯಆವರಣದಲ್ಲಿ ವಿಜೃಂಭಣೆಯಿAದಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಸಿ ಆರ್ ಪಿ ಮುನಿಯಪ್ಪರವರುವಿಧ್ಯಾರ್ಥಿಗಳನ್ನು ಕುರಿತು  ಸ್ವಾಮಿ ವಿವೇಕಾನಂದರವರು ಭಾರತದಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ , ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರವರಜನ್ಮದಿನವಾದಜನವರಿ 12 ರಂದುರಾಷ್ಟ್ರೀಯ “ಯುವದಿನ “ ವೆಂದುಆಚರಿಸಲಾಗುತ್ತದೆ. 

ಸ್ವಾಮಿ ವಿವೇಕಾನಂದರವರು 1863 ನೇ ಜನವರಿ 12 ರ ಸೋಮವಾರದಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳಿಗೆ ಕಲ್ಕತ್ತಾದಲ್ಲಿ ಜನಿಸಿದರು. ಇವರಜನ್ಮನಾಮ ನರೇಂದ್ರದತ್ತ, ದತ್ತಕುಟುಂಬವು ಶ್ರೀಮಂತಿಕೆ ಮತ್ತುಗೌರವ ಪ್ರತಿಷ್ಠೆಗಳನ್ನು ಗಳಿಸಿದ್ದು ಔದಾರ್ಯ, ಪಾಂಡಿತ್ಯ ಮತ್ತುತೀವ್ರ ಸ್ವಾತಂತ್ರ‍್ಯ ಪ್ರಿಯತೆಗೆ ಹೆಸರುವಾಸಿಯಾಗಿದ್ದಿತ್ತು.

ಸ್ವಾಮಿ ವಿವೇಕಾನಂದರವರುಆಧ್ಯಾತ್ಮಿಕ ವಿಷಯಗಳ ಬಗ್ಗೆ ತೀವ್ರವಾದಆಸಕ್ತಿಯನ್ನು ಹೊಂದಿದ್ದರು. ಹಾಗೂ ಇವರುಕಾಲೇಜಿನಲ್ಲಿ ಪಾಶ್ಚ್ಯಾತಚಿಂತನೆಯನ್ನು ಅಭ್ಯಸಿಸಿ ಅದರ ಹಿರಿಮೆಯನ್ನುಅರಿತುಕೊಂಡಿದ್ದರುಇದುಅವರಲ್ಲಿ ವಿಮರ್ಶಾತ್ಮಕ ಸ್ವಭಾವವು ನೆಲೆಗೊಳ್ಳಲು ಕಾರಣವಾಯಿತು. ಹಾಗೂ ಸ್ವಾಮಿ ವಿವೇಕಾನಂದರವರು ಬೇಲೂರುಮಠ ,ರಾಮಕೃಷ್ಣ ಮಠ ಮತ್ತುರಾಮಕೃಷ್ಣ ಮಿಷನ್ ಸಂಸ್ಥಾಪನೆಯನ್ನು ಮಾಡಿದರು. ಇವರತತ್ವಶಾಸ್ತ್ರ ವೇದಾಂತವಾಗಿದೆ. ಇವರ ಪ್ರಮುಖ ಕೃತಿಗಳು ರಾಜಯೋಗ, ಕರ್ಮಯೋಗ , ಭಕ್ತಿಯೋಗ ಮತ್ತುಜ್ಞಾನಯೋಗ ಹಾಗೂ ಇವರ ಪ್ರಮುಖ ಅನುಯಾಯಿಗಳು ಸ್ವಾಮಿ ವಿರಾಜನಂದ, ಸ್ವಾಮಿ ಪರಮಾನಂದ ಮುಂತಾದವರು ಹಾಗೂ ಸ್ವಾಮಿ ವಿವೇಕಾನಂದರವರ ನುಡಿ ಏಳಿ  ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ, ನಿಮ್ಮ ಭವಿಷ್ಯದ ಶಿಲ್ಪಿ ನೀವೆ. ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಪ್ರೀತಿರವರು ಮಾತನಾಡುತ್ತಾ “ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ, ನಿಮ್ಮ ಹೃದಯವನ್ನು ಅನುಸರಿಸಿ” ಯುವಕರು ಹೇಡಿಗಳಾಗಬಾರದು ನೀವು ಎಂದು ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೆ, ಆಧ್ಯಾತ್ಮದ ತಳಹದಿಯ ಮೇಲೆ ದೇಶದ ಸಂಸ್ಕೃತಿಎತ್ತಿ ಹಿಡಿದುಯುವಕರಿಗೆ ಸ್ಪೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರಆದರ್ಶ ತತ್ವಗಳು ಸರ್ವಕಾಲಿಕಎಂದು ತಿಳಿಸಿದರು.


Post a Comment

0Comments

Post a Comment (0)