ಬೇಂದ್ರೆ ಬರಹದಾಳಕಿಳಿದರೆ ಸ್ತ್ರೀಗೆ ಎಂಥಹ ಗೌರವ ಸಿಗಬೇಕು ಎನ್ನುವುದು ಗೊತ್ತಾಗುತ್ತದೆ: ಸಹನಾ ನಾಗೇಶ್

varthajala
0

 ಮಧುಗಿರಿ : ಕನ್ನಡ ಭಾಷೆಯಲ್ಲಿ ಸಾವಿರಾರು  ಕೃತಿಗಳು ರಚೆಯಾದರೂ ಕೂಡ ಸಾವಿಲ್ಲದ  ಸಾಹಿತ್ಯವಾಗಿ ಗುರುತಿಸಿಕೊಂಡಿದ್ದು ಮಾತ್ರ  ಬೇಂದ್ರೆ ಸಾಹಿತ್ಯ. ಏಕೆಂದರೆ ಬದುಕಿನ  ಒಂದೊಂದು ಮಜಲುಗಳಿಗೂ ಕನ್ನಡಿ  ಹಿಡಿಯುವ ಕಾಯಕ ಮಾಡಿದ ಬೇಂದ್ರೆಯವರು  ಸಾವಿರಾರು ಹಾಡುಗಳನ್ನು ರಚಿಸುವ ಮೂಲಕ  ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. 

ಸ್ತ್ರೀ ಮೇಲಿನ ಅಪಾರವಾದ ಗೌರವದ ಫಲವಾಗಿ  ಅವರಿಂದ ಹೊರಬಂದ ಒಂದೊಂದು ಕವಿತೆಗಳು  ಕೂಡ ನಮ್ಮನ್ನು ಬೆಂಬಿಡದೆ ಕಾಡುತ್ತವೆ. ತಮ್ಮ  ಕಾವ್ಯನಾಮದಲ್ಲಿ ಹೆತ್ತಮ್ಮನಿಗೆ ಸ್ಥಾನ ನೀಡಿದ ಅವರು ಸ್ತ್ರೀ ಎಂಥಹ ಗೌರವಕ್ಕೆ ಅರ್ಹಳು ಎನ್ನುವುದನ್ನು ತೋರಿಸಿದ್ದಾರೆ ಎಂದು ಪಟ್ಟಣದ ಎಂ ಜಿ ಎಂ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್  ಬೇಂದ್ರೆಯವರ ಜನ್ಮದಿನಾಚರಣೆ ಹಾಗೂ ಪುರಂದರದಾಸರ ಆರಾಧನೆ ಮತ್ತು ಮಡಿವಾಳ ಮಾಚಯ್ಯ ನವರ ಜನ್ಮದಿನಾಚರಣೆಯನ್ನು ಪ್ರಯುಕ್ತ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು;  ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವರು ತಮ್ಮ  ಕೊಡುಗೆಯನ್ನು ಸಲ್ಲಿಸಿದ್ದಾರೆ.

ಅವರ ಬರವಣಿಗೆಯಿಂದಾಗಿ ಇಂದು ಕನ್ನಡ ಸಾಹಿತ್ಯ ಎನ್ನುವುದು ಶ್ರೀಮಂತಿಕೆಯ ತೊಟ್ಟಿಲಲ್ಲಿ ತೂಗುತ್ತಿದೆ. ಅದೇ ಕಾರಣಕ್ಕಾಗಿಯೇ ನಮ್ಮ ಭಾಷೆಗೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿಗಳು ಅರಸಿ ಬಂದಿವೆ. 

ಅದರಲ್ಲೂ ಮಾತೃಭಾಷೆಯಾದ ಮರಾಠಿಯನ್ನು ಬಿಟ್ಟು ಹೃದಯದ ಭಾಷೆಯಾದ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಮೂಲಕ  ಕನ್ನಡದ ವರಕವಿ ಎಂದು ಪ್ರಖ್ಯಾತಿ ಗಳಿಸಿದ  ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ  ಮೇರು ಶಿಖರವಾಗಿ ಗುರುತಿಸಿಕೊಳ್ಳುತ್ತಾರೆ. 

ಅವರ ಬರವಣಿಗೆಯಲ್ಲಿ ಸ್ತ್ರೀಗೆ ನೀಡಿದಷ್ಟು ಗೌರವ ಬೇರ್ಯಾವುದಕ್ಕೂ ನೀಡಿಲ್ಲ. ತಾನು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗುವುದಲ್ಲದೆ ತನ್ನ ಕಾವ್ಯನಾಮದಲ್ಲಿ ಅಂಬಿಕಾ ತನಯದತ್ತ ಎಂದು ಹೇಳಿಕೊಳ್ಳುವ ಮೂಲಕ ತನ್ನನ್ನು ಹೆತ್ತ ತಾಯಿ ಅಂಬಿಕೆಯನ್ನು ಕೂಡ ಅಜರಾಮರಗೊಳಿಸಿದ ಶ್ರೇಯ ಬೇಂದ್ರೆಅವರದು ಎಂದು ಹೇಳಿದರು. 

ಇವರ ಸಾವಿಲ್ಲದ ಸಾಹಿತ್ಯದಲ್ಲಿ ಮೂಡಿ ಬಂದ ನೂರಾರು ಕೃತಿಗಳು ಇಂದಿಗೂ ಕೂಡ ಓದುಗನನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಹನಾ ನಾಗೇಶ್  ಹೇಳಿದರು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಮಾ ಲಾ ನ ಮೂರ್ತಿ ಅವರು; ಬೇಂದ್ರೆಯವರ ಸಾಹಿತ್ಯವನ್ನು  ಅರಗಿಸಿಕೊಳ್ಳುವುದು ಸುಲಭವಲ್ಲ. ಶಬ್ದಗಳಲ್ಲಿಯೇ ಆಟವಾಡುತ್ತಿದ್ದ ಅವರ  ಬರವಣಿಗೆಯ ಶೈಲಿ ಇಂದಿನ ಯುವ ಬರಹಗಾರರಿಗೆ ಅಧ್ಯಯನದ ವಸ್ತುವಾಗುತ್ತದೆ. 

ಎಲ್ಲ ಸಾಹಿತ್ಯನ್ನು ಓದುವುದು ಸಾಧ್ಯವಾಗದೇ  ಇದ್ದರೂ ಅವರ ಒಂದೊಂದು ಕವಿತೆಯ ಒಂದೊಂದು ಸಾಲನ್ನು ದಿನಕ್ಕೊಂದರಂತೆ  ಓದುತ್ತ ಸಾಗಿದರು ಸಾಹಿತ್ಯ ಕ್ಷೇತ್ರದಲ್ಲಿ ದಿನಕಿಷ್ಟು ಬೆಳೆಯುತ್ತ ಸಾಗುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ  ಕೃಷ್ಣಪ್ಪ ಸಿ ; ಬೇಂದ್ರೆ ಎಂದರೆ ಬದುಕಿನ  ಅನುಭವ. ಬದುಕಿನಲ್ಲಿನ ನೋವು ನಲಿವುಗಳಿಗೆ  ಅಕ್ಷರ ರೂಪವನ್ನು ನೀಡಿ ಬರೆಯುತ್ತಿದ್ದ  ಬೇಂದ್ರೆಯವರ ಬರವಣಿಗೆ ಇಂದಿಗೂ ಕೂಡ  ಓದುಗನನ್ನು ಆಕರ್ಷಿಸುತ್ತವೆ. ಅದರಲ್ಲೂ  ನಾಕುತಂತಿ, ಸಖಿಗೀತ ಸೇರಿದಂತೆ ಅವರ ಕವನ  ಸಂಕಲನಗಳು ಎಲ್ಲ ವಯೋಮಾನದವರನ್ನು ಕೂಡ ಓದುವುದಕ್ಕೆ ಪ್ರೇರಣೆ ನೀಡುತ್ತವೆ ಎಂದು  ಹೇಳಿದರು.

 ಸಾಯಿತಿ  ವಿಜಯ ಮೋಹನ್ ಅನೇಕ ವಿಷಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ರಂಗಧಾಮಯ್ಯ, ಶ್ರೀಮತಿ ವೀಣಾ ಶ್ರೀನಿವಾಸ್, ಶ್ರೀಮತಿ ಶಾರದಾ, ರಫಿಕ್ ಸಾಬ್.ನಿಕಟಪೂರ್ವ ಅಧ್ಯಕ್ಷ ಚಿ  ಸು ಕೃಷ್ಣಮೂರ್ತಿ.ಅರುಂಧತಿ.ಉಮಾ ಮಲ್ಲೇಶ್. K. S. V. ಪ್ರಸಾದ್. ನಾಗರಾಜ್. ರುದ್ರರಾಧ್ಯ. ಲತಾ ರಾಜ್.ಸವಿತಾ. ಇನ್ನು ಮುಂತಾದವರು ಹಾಜರಿದ್ದರು.


ವರದಿ:ನಾಗೇಶ್ ಜೀವಾ ಮಧುಗಿರಿ

Tags

Post a Comment

0Comments

Post a Comment (0)