ಪತಂಜಲಿ ಯೋಗ ಸಮಿತಿಯಿಂದ ಶಿಬಿರ

varthajala
0

 ಮುರಾರ್ಜಿ ದೇಸಾಯಿ ಮೈನಾರಿಟಿ ವಸತಿ ನಿಲಯ ಶಾಲೆಯ 300 ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಸಮಿತಿಯಿಂದ ಶಿಬಿರ

ಬಳ್ಳಾರಿ ಫೆ 03. ಬಳ್ಳಾರಿ ನಗರದ ಅಲ್ಲಿಪುರದಲ್ಲಿರುವ ಮುರಾರ್ಜಿ ದೇಸಾಯಿ ಮೈನಾರಿಟಿ ವಸತಿ ನಿಲಯ ಶಾಲೆಯ 300 ವಿದ್ಯಾರ್ಥಿಗಳಿಗೆ ಗುರುವಾರ ಬೆಳಿಗ್ಗೆ 6 ಗಂಟೆಗೆ 75 ಕೋಟಿ ಸೂರ್ಯನಮಸ್ಕಾರದ ಅಭಿಯಾನದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯವರು ಶಿಬಿರವನ್ನು ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜ್ ಮತ್ತು ದೈಹಿಕ ಶಿಕ್ಷಕರಾದ ರಂಗಪ್ಪ, ಪತಂಜಲಿ ಜಿಲ್ಲಾ ಸಂಯೋಜಕರಾದ ಇಸ್ವಿ ಪಂಪಾಪತಿ, ಭಾರತ್ ಸ್ವಾಭಿಮಾನ ಅಧ್ಯಕ್ಷರಾದ ಅಶೋಕ್ ದಿನ್ನಿ, ಲಾಲ್ ಬಹದ್ದೂರ್ ಶಾಸ್ತ್ರಿ ಕೇಂದ್ರದ ಪ್ರಭಾರಿ ಗಳಾದ ಪ್ರಕಾಶ್ ,ಶಿಕ್ಷಕರಾದ ಸೂರ್ಯನಾರಾಯಣ ಹಾಗೂ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಎಂದು ಪತಂಜಲಿ ಜಿಲ್ಲಾ ಸಂಯೋಜಕರಾದ ಇಸ್ವಿ ಪಂಪಾಪತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags

Post a Comment

0Comments

Post a Comment (0)