36 ಸಾವಿರ ದೇವಾಲಯಗಳನ್ನು ವಶಪಡಿಸಿಕೊಳ್ಳುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ !

varthajala
0

 ಅಯೋಧ್ಯೆ, ಕಾಶಿ, ಮಥುರಾ ಅಷ್ಟೇ ಅಲ್ಲದೇ; ಕಬಳಿಸಿದ 36 ಸಾವಿರ ದೇವಾಲಯಗಳನ್ನು ಮರಳಿ ವಶಪಡಿಸಿಕೊಳ್ಳುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ! 

- ಶ್ರೀ. ಸುರೇಶ ಚವ್ಹಾಣಕೆ, ಸುದರ್ಶನ ನ್ಯೂಸ್

ಇಸ್ಲಾಮಿಕ್ ಆಕ್ರಮಣಕಾರರು ಭಾರತದಲ್ಲಿ ಸಾವಿರಾರು ದೇವಾಲಯಗಳನ್ನು ಕೆಡವಿದರು ಮತ್ತು ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಈ ಪ್ರತಿಯೊಂದು ದೇವಾಲಯದ ಪುನರ್ನಿರ್ಮಾಣಕ್ಕಾಗಿ ಹಿಂದೂಗಳ ಅನೇಕ ತಲೆಮಾರುಗಳು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ; ಆದರೆ ದೇವಾಲಯದ ಮೇಲಿನ ಅಧಿಕಾರವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ನಾವೂ ಅದೇ ಹಿಂದೂಗಳ ವಂಶಜರಾಗಿದ್ದೇವೆ. ಹಿಂದೂಗಳಿಂದ ಎನೆಲ್ಲವನ್ನು ಕಸಿದುಕೊಳ್ಳಲಾಗಿದೆಯೋ. ಅವೆಲ್ಲವನ್ನು ಹಿಂತಿರುಗಿಸಬೇಕು. ಇದು ಈಗ ಹೊಸ ಹಿಂದೂಸ್ಥಾನವಾಗಿದೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯುವ ಸಂಕಲ್ಪವನ್ನು ಕೆಲವು ಶತಮಾನಗಳ ಹಿಂದೆ ತೆಗೆದುಕೊಳ್ಳಲಾಗಿತ್ತು. ಅದನ್ನು ಪ್ರತ್ಯಕ್ಷವಾಗಿ ಕೃತಿಗೆ ತರುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅಯೋಧ್ಯೆಯ ಶ್ರೀರಾಮ ದೇವಾಲಯ, ಕಾಶಿಯ ಶ್ರೀ ವಿಶ್ವನಾಥ ದೇವಾಲಯ, ಮಥುರಾದ ಶ್ರೀಕೃಷ್ಣ ದೇವಾಲಯ ಮಾತ್ರವಲ್ಲ, ಕುತುಬ್ ಮಿನಾರ್ ಸೇರಿದಂತೆ ದೇಶಾದ್ಯಂತ ಇಂತಹ 36 ಸಾವಿರ ದೇವಾಲಯಗಳ ಪಟ್ಟಿ ಇದೆ. ಈ ಕಬಳಿಸಿರುವ ದೇವಾಲಯಗಳನ್ನು ಹಿಂಪಡೆಯುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆಯವರು ಸ್ಪಷ್ಟವಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ‘ಭೋಜಶಾಲಾದಲ್ಲಿನ ಮಾತೆ ಶ್ರೀ ವಾಗ್ದೇವಿ ದೇವಾಲಯದ ಸ್ಥಳದಲ್ಲಿ ಕಮಾಲ ಮೌಲಾ ಮಸೀದಿ ಹೇಗೆ ?’ ಈ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಮಧ್ಯಪ್ರದೇಶದ ‘ಅಖಿಲ ಭಾರತ ಹಿಂದೂ ಮಹಾಸಭೆ’ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ದೇವೆಂದ್ರ ಪಾಂಡೆಯವರು ಮಾತನಾಡುತ್ತಾ, 1034 ರಲ್ಲಿ ಮಧ್ಯಪ್ರದೇಶದ ಧಾರನಲ್ಲಿ ಮಾತಾ ವಾಗ್ದೇವಿಯ (ಶ್ರೀಸರಸ್ವತಿ ದೇವಿ) ಅತ್ಯಂತ ಪುರಾತನ ದೇವಾಲಯವನ್ನು ರಾಜಾ ಭೋಜರು ಸ್ಥಾಪಿಸಿದ್ದರು. ಇದನ್ನು 1305 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ದಾಳಿ ಮಾಡಿ ನಾಶ ಮಾಡಲು ಪ್ರಯತ್ನಿಸಿದನು. ನಂತರ, 1401 ರಲ್ಲಿ, ದಿಲಾವರ ಖಾನ್ ದಾಳಿ ಮಾಡಿ ದೇವಾಲಯದ ಪ್ರವೇಶದ್ವಾರದ ಬಳಿ ಮಸೀದಿಯನ್ನು ನಿರ್ಮಿಸಿದನು. ಅದರ ನಂತರ ಮಹಮೂದ್‌ನು ಮತ್ತೊಂದು ಮಸೀದಿಯನ್ನು ನಿರ್ಮಿಸಿದನು. ಬ್ರಿಟಿಷರ ಆಳ್ವಿಕೆಯಲ್ಲಿ 1875 ರಲ್ಲಿ ದೇವಾಲಯದ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ದೊರೆತ ವಾಗ್ದೇವಿಯ ಪ್ರತಿಮೆಯನ್ನು ಇಂಗ್ಲೆಂಡ್‌ನ ವಸ್ತುಸಂಗ್ರಹಾಲಯಕ್ಕೆ ಕೊಂಡೊಯ್ಯಲಾಯಿತು. ಇಂದಿಗೂ ಭಾರತದ ಜ್ಞಾನ ಮತ್ತು ಬುದ್ಧಿ ಇಂಗ್ಲೆಂಡನಲ್ಲಿ ಬಂಧನದಲ್ಲಿದೆ. ಭಾರತ ಸರಕಾರವು ಈ ಕುರಿತು ಬೆಂಬೆತ್ತುವಿಕೆ ಮಾಡಿ ಆ ವಿಗ್ರಹವನ್ನು ಮರಳಿ ತರಬಹುದು. ಇದಕ್ಕಾಗಿ ಹಿಂದೂಗಳು ಒತ್ತಡ ಹೇರಬೇಕು ಎಂದು ಹೇಳಿದರು.
ಈ ವೇಳೆ ‘ಸನಾತನ ಸಂಸ್ಥೆ’ಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ಮೊಘಲರು ಅನೇಕ ದೇವಾಲಯಗಳನ್ನು ಕೆಡವಿದರು. ಹಿಂದೂಗಳು ಅದರ ವಿರುದ್ಧ ಹೋರಾಡಿದರು ಮತ್ತು ಅದನ್ನು ಪುನರ್ನಿರ್ಮಿಸಿದರು; ಆದರೆ ಮೊಘಲರ ಆಕ್ರಮಣಕಾರರು ಅದನ್ನು ಮತ್ತೆ ನೆಲಸಮಗೊಳಿಸಿದರು. ಈಗಲೂ ನಾವು ದೇವಾಲಯಗಳನ್ನು ಕಟ್ಟುತ್ತಿದ್ದೇವೆ; ಆದರೆ ದೇವಸ್ಥಾನಗಳ ರಕ್ಷಣೆಗೆ ನಾವು ಯಾವ ವ್ಯವಸ್ಥೆಯನ್ನು ರೂಪಿಸಲು ಹೊರಟಿದ್ದೇವೆ ಎಂಬುದನ್ನು ಹಿಂದೂಗಳು ಯೋಚಿಸಬೇಕು. ಇತಿಹಾಸದಲ್ಲಾದ ತಪ್ಪುಗಳು ಮರುಕಳಿಸಬಾರದು. ಅಲ್ಲದೇ ಕಾಂಗ್ರೆಸ್ ಸರಕಾರವು ಹಿಂದೂಗಳಿಗೆ ದ್ರೋಹ ಬಗೆದು ಸಿದ್ಧಪಡಿಸಿರುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991 ’ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಕೂಡಲೇ ಈ ಕಾನೂನನ್ನು ರದ್ದುಗೊಳಿಸಬೇಕು. ಎಲ್ಲೆಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆಯೋ ಅಲ್ಲಲ್ಲಿ ದೇವಸ್ಥಾನಗಳನ್ನು ಪುನರ್ ನಿರ್ಮಿಸಬೇಕು ಎಂದು ಹೇಳಿದರು.

ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂ :99879 66666)

Post a Comment

0Comments

Post a Comment (0)