ಜೂನ್ 28 ರಂದು ಉದ್ಯೋಗ ಮೇಳ

varthajala
0

ಬೆಂಗಳೂರು, ಜೂನ್ 27, (ಕರ್ನಾಟಕ ವಾರ್ತೆ) : ಬೆಂಗಳೂರು ಉದ್ಯೋಗ ವಿನಿಮಯ ಕೇಂದ್ರ, ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಪೌಂಡೇಷನ್ ಸಹಯೋಗದಲ್ಲಿ  ಜೂನ್ 28 ರಂದು ಉದ್ಯೋಗ ಮೇಳವನ್ನು ಬೆಳಿಗ್ಗೆ 09 ರಿಂದ ಸಂಜೆ 04-30 ಗಂಟೆಯವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು, ರೇಸ್‍ಕೋಸ್ ರಸ್ತೆ, ಬೆಂಗಳೂರು-09, ಇಲ್ಲಿ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಹಲವು ಹೆಸರಾಂತ ಖಾಸಗಿ ಸಂಸ್ಥೆಗಳ ನಿಯೋಜಕರು ಭಾಗವಹಿಸಲಿದ್ದಾರೆ.

ಈ ಮೇಳದಲ್ಲಿ ಆಸಕ್ತ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ. ಐ.ಟಿ.ಐ          (ಎಲ್ಲಾ ಟ್ರೇಡ್‍ಗಳು) ಡಿಪ್ಲೊಮಾ, ಸಾಮಾನ್ಯ ಪದವೀಧರರು, ಹಾಗೂ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ತಮ್ಮ ವೈಯುಕ್ತಿಕ ವಿವರಗಳುಳ್ಳ (ಬಯೋಡೇಟಾ) ಹಲವು ಪ್ರತಿಗಳೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.  

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಂಶುಪಾಲರು ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು, ರೇಸ್‍ಕೋಸ್ ರಸ್ತೆ, ಬೆಂಗಳೂರು-09 ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Tags

Post a Comment

0Comments

Post a Comment (0)