"ಬೃಹತೀಸಹಸ್ರಯಾಗ" ಮತ್ತು "ಸಹಸ್ರ ಕಲಶಾಭಿಷೇಕ"

varthajala
0

ಬೆಂಗಳೂರಿನ ಪ್ರಕಾಶನಗರದಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಕಟ್ಟಡದಲ್ಲಿ ಪುನರ್ ಪ್ರತಿಷ್ಠಾಪನೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಆಗಸ್ಟ್ 6 ಮತ್ತು 7ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಗಸ್ಟ್ 6, ಶನಿವಾರ ಪುಣ್ಯಾಹವಾಚನ,  ನಾಂದಿ ಪೂಜಾ ಮತ್ತು ಬೃಹತೀಸಹಸ್ರ ಕಲಶ ಪ್ರತಿಷ್ಠಾಪನೆ, ಆಗಸ್ಟ್ 7, ಭಾನುವಾರ ಬೆಳಿಗ್ಗೆ  ರಾಯರ ಮೃತ್ತಿಕಾ ಬೃಂದಾವನಕ್ಕೆ ಸಹಸ್ರ ಕಲಶಾಭಿಷೇಕ, ಫಲ-ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಬೃಹತೀಸಹಸ್ರಯಾಗ, ಪಂಡಿತರಿಂದ ಉಪನ್ಯಾಸ,  ಕನಕಾಭಿಷೇಕ, ಮಹಾ ಮಂಗಳಾರತಿ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕನಕಾಚಲಾಚಾರ್ ಒಡೆಯರ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿದವು‌. ಈ ಕಾರ್ಯಕ್ರಮವನ್ನು ಆಯೋಜಿಸಿದವರು ಶ್ರೀ ಹೆಚ್. ಪಿ. ಸತ್ಯನಾರಾಯಣ ರಾವ್.





Post a Comment

0Comments

Post a Comment (0)