ಸರಕಾರಿ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಿರುಕುಳ ನೀಡುವಂತಿಲ್ಲ: ಶ್ರೀ ಕೆ.ವಿ. ಧನಂಜಯ

varthajala
0

ಬೆಂಗಳೂರು: ಇನ್ನು ಮುಂದೆ ಯಾವುದೇ ಕಾನೂನಿನ ಭಯ ತೋರಿಸಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರಕಾರಿ ಅಧಿಕಾರಿಗಳು ಕಿರುಕುಳ ನೀಡುವಂತಿಲ್ಲಇದರಿಂದ ಕಳೆದ ೨೮ ವರ್ಷಗಳ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮಾ) ಹೋರಾಟಕ್ಕೆ ಜಯ ಸಿಕ್ಕಿದೆ ಎಂದು  ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ಕೆ.ವಿಧನಂಜಯ ಹೇಳಿದ್ದಾರೆ.

ಶನಿವಾರ  ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು (ಕುಸ್ಮಾ) ತನ್ನ 40ನೇ ವಾರ್ಷಿಕೋತ್ಸವದ ವಿಶೇಷ ಸಮ್ಮೇಳನದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸ್ಮಾದ ಅಧ್ಯಕ್ಷ ಶ್ರೀ ಎಸ್. ಸತ್ಯಮೂರ್ತಿ ಅವರು ವಹಿಸಿಕೊಂಡಿದ್ದರು.

೧೯೯೫ರಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಸಂಸ್ಥಾಪಕರಾದ  ದಿಜಿ.ಎಸ್‌. ಶರ್ಮಾಜಿ ಅವರು ಸರಕಾರದ ಅಸಂಬದ್ಧ ಧೋರಣೆಗಳ ವಿರುದ್ಧ ನ್ಯಾಯಾಲಯದ ಮೂಲಕ ಹೋರಾಟಕ್ಕೆ ಮುಂದಾಗಿದ್ದರುಅವರ ದೂರದರ್ಶಿತ್ವದ ಹಾಗೂ ಕ್ರಿಯಾಶೀಲ ಹೋರಾಟದ ಪರಿಣಾಮ ಇಂದು ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘಕ್ಕೆ (ಕುಸ್ಮಾ) ಜಯ ಸಿಕ್ಕಿದೆಕಳೆದ ಡಿಸೆಂಬರ್‌ ೧ರಂದು ಕುಸ್ಮಾ ಹಾಗೂ ಸರಕಾರದ ನಡುವೆ ಇದ್ದ ವಾದಕ್ಕೆ ಘನತೆವೆತ್ತ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಸ್ಪಷ್ಟ ತೀರ್ಪನ್ನು ನೀಡುವ ಮೂಲಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಕಾರಣವಾಗಿದೆಈ ಮೂಲಕ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದಂತಾಗಿದೆ ಎಂದು ಶ್ರೀ ಕೆ.ವಿಧನಂಜಯ ಅಭಿಪ್ರಾಯ ಪಟ್ಟಿದ್ದಾರೆ.      

ಶತ-ಶತಮಾನಗಳಿಂದ ಕರ್ನಾಟಕ ಅನುದಾನರಹಿತ ಶಾಲೆಗಳ ಮೇಲೆ ಕಾನೂನಿನ ಹೆಸರಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಲೇ ಬಂದಿತ್ತುಪರಿಣಾಮ ಈ ಮೂಲಕ ದೋಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ರಹದಾರಿಯಾಗಿತ್ತುಹಿಂದೆ ಇದ್ದ ಬಹುತೇಕ ಎಲ್ಲಾ ಕಾನೂನುಗಳನ್ನು ಹೈಕೋರ್ಟ್‌ ರದ್ದು ಪಡಿಸುವ ಮೂಲಕ ಉತ್ತಮ ತೀರ್ಪನ್ನು ನೀಡಿದೆಇನ್ನು ಮುಂದೆ ಖಾಸಗಿ ಶಿಕ್ಷಕರ ವೇತನವನ್ನು ಆಯಾ ಖಾಸಗಿ ಶಿಕ್ಷಣ ಸಂಸ್ಥೆಯೇ ನಿರ್ಧಾರ ಮಾಡಲು ಅವಕಾಶ ಕಲ್ಪಸಿದೆಹಿಂದೆ ಸರಕಾರಿ ಶಿಕ್ಷಕರ ವೇತನಕ್ಕೆ ಸರಿ ತೂಗುವಂತೆ ವೇತನ ನೀಡಬೇಕು ಎನ್ನುವ ಸರಕಾರದ ಕಾನೂನು ಇತ್ತುಆದರೆ ಇನ್ನು ಮುಂದೆ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷರ ವೇತನವನ್ನು ಆಯಾ ಶಿಕ್ಷಣ ಸಂಸ್ಥೆಯೇ ನಿರ್ಧರಿಸಲಿದೆಕೆಲವು ಮಾನದಂಡಗಳನ್ನು ಸರಕಾರಿ ಶಾಲೆಗಳು ಪಾಲಿಸದಿದ್ದರೂ ಖಾಸಗಿ ಶಾಲೆಗಳು ಪಾಲಿಸಲೇಬೇಕು ಎನ್ನುವ ನಿಯಮಗಳನ್ನು ಹೇರುತ್ತಿದ್ದ ಅಧಿಕಾರಿಗಳ ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ಕೆ.ವಿಧನಂಜಯ ತಿಳಿಸಿದ್ದಾರೆ.    

ಇನ್ನೂ ರಾಜ್ಯದ ಕೆಲವು ಭಾಗಗಳಲ್ಲಿ ಖಾಸಗಿ ಶಾಲೆಗಳಲ್ಲಿ ಸಿಬ್ಬಂದಿಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸಬೇಕೆಂಬ ಕಾನೂನನ್ನು ಆಗಾಗ ಪ್ರತಿಪಾದಿಸುತ್ತಿದ್ದರುಇನ್ನೂ ಮುಂದೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಶ್ನೆ ಮಾಡುವಂತಿಲ್ಲಸೂಕ್ತ ಅಭ್ಯರ್ಥಿಗಳನ್ನು ತಮ್ಮ ತಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಗಳಾಗಿ ನೆಮಿಸಿಕೊಳ್ಳುವ ಸಂಪೂರ್ಣ ಅಧಿಕಾರ ಆಯಾ ಸಂಸ್ಥೆಗಳಿಗೆ ಇರುತ್ತದೆತಮ್ಮ ಸಂಸ್ಥೆಯ ಶುಲ್ಕ ಪ್ರಮಾಣ ನಿರ್ಧರಿಸುವ ಅಧಿಕಾರವೂ ಆಯಾ ಸಂಸ್ಥೆಗೆ ಕೋರ್ಟ್‌ ನೀಡುವ ಮೂಲಕ ಉತ್ತಮ ತೀರ್ಪನ್ನು ನೀಡಿದೆ.  ಸಮಾಜದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಮನಗಂಡು ಹೈಕೋರ್ಟ್‌ ನೀಡಿರುವ ತೀರ್ಪನ್ನು ಕುಸ್ಮಾ ಗೌರವದಿಂದ ಸ್ವಾಗತಿಸುತ್ತದೆಜೊತೆಗೆ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಂದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮುಂದಾಗಬೇಕು ಎಂದು ಕೆ.ವಿಧನಂಜಯ ಹೇಳಿದರು.

ಕಾರ್ಯಕ್ರಮದ ಇನ್ನೊಬ್ಬ ಅತಿಥಿಯಾಗಿದ್ದ  ಚಾರ್ಟರ್ಡ್‌ ಅಕೌಂಟಂಟ್‌ ಶ್ರೀ ಮಧುಕರ ಹೆಗಡೆ ಮಾತನಾಡಿಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ ಹಂಚುವಿಕೆಯನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆಸಿಬ್ಬಂದಿಗಳಿಗೆ ನೀಡುವ ಆರ್ಥಿಕ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡುವ ವ್ಯವಸ್ಥೆಯನ್ನು ಸಂಸ್ಥೆಗಳು ಮಾಡಿಕೊಂಡು ಬರುವ ಮೂಲಕ ತಮ್ಮ ಸಂಸ್ಥೆಗಳಲ್ಲಿ ಆಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಕಿವಿಮಾತು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಸ್ಮಾದ ಅಧ್ಯಕ್ಷರಾದ ಶ್ರೀ ಎಸ್. ಸತ್ಯಮೂರ್ತಿ ಅವರು ಮಾತನಾಡಿಕುಸ್ಮಾ ಕಟ್ಟುವಾಗ ನಮ್ಮ ಹಿರಿಯ ಕಂಡ ಕನಸು ಈಗ ನನಸಾಗುತ್ತಿದೆಸರಕಾರಿ ಅಧಿಕಾರಿಗಳಂದ ಆಗುತ್ತಿರುವ ಕಿರುಕುಳದ ಮುಂದಾಲೋಚನೆ ಇಟ್ಟುಕೊಂಡೇ ನ್ಯಾಯಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ರಾಜ್ಯದ ಏಕೈಕ ಸಂಸ್ಥೆ ನಮ್ಮ ಕುಸ್ಮಾಕುಸ್ಮಾ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆನಿರಂತರ ನಮ್ಮ ಹೋರಾಟಕ್ಕೆ ಸಾಥ್‌ ನೀಡಿದ ಸಂಸ್ಥೆಯ ಎಲ್ಲ ಸದಸ್ಯರಿಗೂಕಾನೂನು ಹೋರಾಟದ ಜವಾಬ್ದಾರಿ ಹೊತ್ತ ನ್ಯಾಯವಾದಿಗಳ ತಂಡವನ್ನೂ ಕುಸ್ಮಾ ಸದಾ ಸ್ಮರಿಸುತ್ತದೆ ಎಂದು ಹೇಳಿದರು.

ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮಾ) ಕಾರ್ಯದರ್ಶಿ ಶ್ರೀ ಎ. ಮರಿಯಪ್ಪ ಅವರು ಎಲ್ಲರನ್ನು ಸ್ವಾಗತಿಸಿದರುಕೋಶಾಧ್ಯಕ್ಷ ಶ್ರೀ ಎಸ್‌. ಎಲ್‌. ಭಟ್ಟ ಅವರು ಕುಸ್ಮಾದ  ಆರ್ಥಿಕ ವರದಿಯನ್ನು ಮಂಡಿಸಿದರುಉಪಾಧ್ಯಕ್ಷೆ ಶ್ರೀಮತಿ  ವಿಜಯಾ ಶೆಟ್ಟಿ ಅವರು ವಂದಿಸಿದರುಪ್ರಗತಿ ಸೂರ್ವೆ ಅವರು ಕಾರ್ಯಕ್ರಮ ನಿರೂಪಿಸಿದರು.

 


 ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ)  40ನೇ ವಾರ್ಷಿಕೋತ್ಸವದ ವಿಶೇಷ ಸಮ್ಮೇಳನವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ಕೆ.ವಿಧನಂಜಯ ಅವರು ಉದ್ಘಾಟಿಸಿದರು.

Post a Comment

0Comments

Post a Comment (0)