ನಾಡಿನ ಜನತೆಗೆ ಈದ್ ಉಲ್ ಫಿತರ್ ಶುಭಾಶಯ ಕೋರಿದ ರಾಜ್ಯಪಾಲರು

varthajala
0

  ಬೆಂಗಳೂರು 10.04.2024: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಸಮಸ್ತ ಜನತೆಗೆ ಈದ್ ಉಲ್ ಫಿತರ್ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

"ಈದ್ ಉಲ್-ಫಿತರ್ ಹಬ್ಬವನ್ನು ರಾಷ್ಟ್ರದಾದ್ಯಂತ ಆಚರಿಸುತ್ತಿರುವ ನಮ್ಮ ಎಲ್ಲಾ ನಾಗರಿಕರಿಗೆ ದೇವರು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ರಂಜಾನ್ ತಿಂಗಳು ಮುಗಿಯುತ್ತಿದ್ದಂತೆ, ನಾವು ಸಹಾನುಭೂತಿ, ಉದಾರತೆ ಮತ್ತು ಏಕತೆಯ ಮೌಲ್ಯಗಳನ್ನು ಪಾಲಿಸುವುದನ್ನು ಮುಂದುವರಿಸೋಣ. ಸರ್ವರಿಗೂ ಈದ್ ಮುಬಾರಕ್!" ಎಂದು ಗೌರವಾನ್ವಿತ ರಾಜ್ಯಪಾಲರು ಹೇಳಿದ್ದಾರೆ.


Post a Comment

0Comments

Post a Comment (0)