ಶ್ರೀ ಗುರು ರಾಘವೇಂದ್ರ ಗುರುಸಾರ್ವಭೌಮರ "404ನೇ ಪಟ್ಟಾಭಿಷೇಕೋತ್ಸವ" ಮತ್ತು "430ನೇ ಜನ್ಮ ದಿನೋತ್ಸವ"
ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-3-2025 ರಿಂದ 6-3-2025ರ ವರೆಗೆ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಸ್ವಾಮಿಗಳವರ "404ನೇ ಪಟ್ಟಾಭಿಷೇಕೋತ್ಸವ" ಮತ್ತು "430ನೇ ಜನ್ಮದಿನೋತ್ಸವ" ಸಮಾರಂಭಗಳು ಜರುಗಲಿದೆ.
ಮಾರ್ಚ್ 1, ಶನಿವಾರ : ಗುರುಗಳ ಪಟ್ಟಾಭಿಷೇಕದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ಶ್ರೀ ಬಾಳಗಾರು ಮಠದ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಅಕ್ಷೋಭ್ಯ ರಾಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಸಹಸ್ರ ಕಳಶ ಕ್ಷೀರಾಭಿಷೇಕ. ಬೆಳಗ್ಗೆ 9-00ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕೋತ್ಸವದ ಅಂಗವಾಗಿ "ಸ್ವರ್ಣ ಸಿಂಹಾಸನ"ದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದುಕೆಯನ್ನು ಇರಿಸಿ, "ಪುಷ್ಪವೃಷ್ಠಿ"ಯನ್ನು ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದ್ದು, ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಹಾಗೂ ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಹೃದ್ಯಾ ಅಕಾಡೆಮಿಯ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ" ನಿರ್ದೇಶನ : ವಿದುಷಿ ಶ್ರೀಮತಿ ರೂಪಶ್ರೀ ಕೆ.ಎಸ್.
ಮಾರ್ಚ್ 6, ಗುರುವಾರ : ರಾಯರ ವರ್ಧಂತ್ಯೋತ್ಸವದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ "ಲಕ್ಷ ಪುಷ್ಪಾರ್ಚನೆ". ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ "ದಾಸವಾಣಿ".
ಭಜನೆ ಮತ್ತು ಉಪನ್ಯಾಸ : ಮಾರ್ಚ್ 1 ರಿಂದ 6ರ ವರೆಗೆ ಪ್ರತಿದಿನ ಸಂಜೆ 5 ರಿಂದ 6 ವಿವಿಧ ಭಜನಾ ಮಂಡಳಿ "ಹರಿ ಭಜನೆ" ನಂತರ ವಿದ್ವಾನ್ ವೆಂಕಟ ನರಸಿಂಹಾಚಾರ್ಯ ರಾಜಪುರೋಹಿತ ಇವರಿಂದ "ಶ್ರೀ ಗುರು ರಾಘವೇಂದ್ರ ವೈಭವ" (ಶ್ರೀ ರಾಯರ ಚರಿತ್ರೆ) ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ,
ವಿಶೇಷವಾಗಿ ಪ್ರತಿನಿತ್ಯ ಹೋಮಗಳು ಹಾಗೂ ಉತ್ಸವಗಳು ಅನ್ನಸಂಪರ್ಪಣೆ ಇತ್ಯಾದಿ ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ ಸೇವೆಯನ್ನು ಮಾಡಿಸುವಂತಹ ಭಕ್ತರು ಶ್ರೀಮಠದ ಈ ನಂಬರ್ ವಾಟ್ಸಾಪ್ 9449133929 ಆನ್ಲೈನ್ ಮುಖಾಂತರ ಗುರುಗಳಿಗೆ ಸೇವೆ ಸಲ್ಲಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರಾಗಬಹುದು ಸೇವೆ ಸಲ್ಲಿಸಿದ ಸೇವ ಕರ್ತೃಗಳಿಗೆ ಪ್ರಸಾದ ಫಲ ಮಂತ್ರಾಕ್ಷತೆ ಕೊಡಲಾಗುವುದು ಹೆಚ್ಚಿನ ಮಾಹಿತಿಗಾಗಿ-08022443962 9945429129-8660349906
