"ಇನ್ನೊಂದು ಭಾರತೀಯ ಭಾಷಾ ಕಲಿಯಿರಿ" ವಿದ್ಯಾರ್ಥಿಗಳಿಗಾಗಿ ಪಿ ಎಮ್ ಶ್ರೀ ಕೇಂದ್ರಿಯಾ ವಿದ್ಯಾಲಯದಲ್ಲಿ ಭಾಷಾ ಬೇಸಿಗೆ ಶಿಬಿರ ಆಯೋಜನೆ

varthajala
0

 ಬೆಂಗಳೂರು, ಮೇ 26 (ಕರ್ನಾಟಕ ವಾರ್ತೆ): ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾರ್ಗದರ್ಶನದಲ್ಲಿ ನಗರದ ಪಿ ಎಮ್ ಶ್ರೀ ಕೇಂದ್ರಿಯಾ ವಿದ್ಯಾಲಯ ಎಂಇಜಿ ಮತ್ತು ಸೆಂಟರ್ ನಲ್ಲಿ 5 ರಿಂದ 8 ನೇ ತರಗತಿ ಮಕ್ಕಳಿಗಾಗಿ ಮೇ 21 ರಿಂದ 27, 2025 ರವರೆಗೆ ಭಾರತೀಯ ಭಾಷಾ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ದೃಷ್ಟಿಕೋನಕ್ಕೆ ಅನುಗುಣವಾಗಿ “ಭಾರತದ ಭಾಷೆಗಳು” ಕೇಂದ್ರಿತವಾದ ಆನಂದದಾಯಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲಿದೆ. ವಿದ್ಯಾರ್ಥಿಗಳನ್ನು "ಇನ್ನೊಂದು ಭಾರತೀಯ ಭಾಷಾ ಕಲಿಯಿರಿ" ಎಂದು ಪ್ರೇರೇಪಿಸುವುದು ಈ ಶಿಬಿರ ಪ್ರಮುಖ ಉದ್ದೇಶವಾಗಿದ್ದು, ಶಿಬಿರದಲ್ಲಿ 80 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರವು ಮೇ 21 ಪ್ರಾರಂಭವಾಗಿದ್ದು, ಮೇ 27ರ ವರೆಗೆ ನಡೆಯಲಿದೆ. ಶಿಬಿರದ ಮೊದಲ ಮೂರು ದಿನಗಳಲ್ಲಿ, ವಿದ್ಯಾರ್ಥಿಗಳು ಪ್ಲಾಷ್‍ಕಾರ್ಡ್‍ಗಳು ಮತ್ತು ಪಾತ್ರಾಭಿನಯದ ಮೂಲಕ ಶುಭಾಶಯಗಳು ಮತ್ತು ಅಭಿವ್ಯಕ್ತಿಗಳನ್ನು ಕಲಿಯಲಿದ್ದಾರೆ. ನಿಜ ಜೀವನದ ಸಂಭಾಷಣೆ ಅಭ್ಯಾಸದೊಂದಿಗೆ ಅಣಕು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ದೇಶಭಕ್ತಿ ಗೀತೆಗಳು, ಸಾಂಪ್ರದಾಯಿಕ ವಾದ್ಯಗಳು ಮತ್ತು ಸ್ಥಳೀಯ ಕಲೆಗಳನ್ನು ವೀಡಿಯೊಗಳು ಮತ್ತು ಗೆಳೆಯರೊಂದಿಗೆ ಭಾಷಾ ವಿನಿಮಯದ ಮೂಲಕ ಅನ್ವೇಷಿಸುವಂತಹ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಲಿರುವರು.
ಅಲ್ಲದೆ, ದೃಶ್ಯ ಸಾಧನಗಳು, ಪಾತ್ರಾಭಿನಯ, ಸಂಗೀತ ಮತ್ತು ಸಂವಾದಾತ್ಮಕ ಆಟಗಳಂತಹ ವೈವಿಧ್ಯಮಯ ಕಲಿಕಾ ಮಾಧ್ಯಮಗಳ ಪರಿಣಾಮಕಾರಿ ಬಳಕೆಯನ್ನು ಕಲಿಯಲಿದ್ದಾರೆ, ಜೊತೆಗೆ ಭಾಷಾ ತಜ್ಞರು ಮತ್ತು ಸಮುದಾಯ ಸದಸ್ಯರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳ ಅಮೂಲ್ಯ ಕೊಡುಗೆಗಳನ್ನು ಆಕರ್ಷಕ ಬಹುಭಾಷಾ ಕಲಿಕೆಯ ಅನುಭವಗಳನ್ನು ಸೃಷ್ಟಿಸಲಾಗುವುದು.

ಶಿಬಿರದ ಅಂತ್ಯದ ವೇಳೆಗೆ, ವಿದ್ಯಾರ್ಥಿಗಳು ಭಾರತದ ಭಾಷಾ ವೈವಿಧ್ಯತೆಯ ಶ್ರೀಮಂತಿಕೆಗೆ ಒಡ್ಡಿಕೊಳ್ಳುವುದಲ್ಲದೆ, ಗೌರವ, ಆತ್ಮವಿಶ್ವಾಸ ಮತ್ತು ತಮ್ಮ ಮಾತೃಭಾಷೆಯನ್ನು ಮೀರಿದ ಭಾಷೆಗಳನ್ನು ಅನ್ವೇಷಿಸಲು ಕುತೂಹಲವನ್ನು ಬೆಳೆಸಿಕೊಳ್ಳಲಿದ್ದಾರೆ. ಇದು ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕøತಿಕ ಮೆಚ್ಚುಗೆಯನ್ನು ಹೆಚ್ಚಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)