ದೂರದರ್ಶನ ಕೇಂದ್ರದಲ್ಲಿ ಸ್ಟ್ರಿಂಜರ್‍ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ – ಜೂನ್ 6 ರವರೆಗೆ ಅವಧಿ ವಿಸ್ತರಣೆ

varthajala
0

 


ಬೆಂಗಳೂರು, ಮೇ 26 (ಕರ್ನಾಟಕ ವಾರ್ತೆ):

ಬೆಂಗಳೂರಿನ ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ ಕರ್ನಾಟಕದ 29 ಜಿಲ್ಲೆಗಳಲ್ಲಿ ಸ್ಟ್ರಿಂಜರ್‍ಗಳಾಗಿ ಕಾರ್ಯನಿರ್ವಹಿಸಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, 2025 ನೇ ಜೂನ್ 6 ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

ಯಾದಗಿರಿ ಹಾಗೂ ಗದಗ ಜಿಲ್ಲೆಗಳು ಹೊರತುಪಡಿಸಿ ಉಳಿದ 29 ಜಿಲ್ಲೆಗಳಾದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರಕನ್ನಡ, ವಿಜಯನಗರ, ವಿಜಯಪುರ ಜಿಲ್ಲೆಗಳಲ್ಲಿ ಪ್ರಸ್ತುತ ಸ್ಟ್ರಿಂಜರ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಅವಧಿಯನ್ನು 2025ನೇ ಜೂನ್ 6 ರವರೆಗೆ ವಿಸ್ತರಿಸಲಾಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಪ್ರಸಾರ ಭಾರತಿ ಜಾಲತಾಣ https://prasarbharati.gov.in/pbvacancies/ ದಲ್ಲಿ ನಮೂದಿಸಲಾಗಿರುವ ವಿವರಗಳನ್ನು ಗಮನಿಸುವುದು. ಅರ್ಜಿಗಳನ್ನು ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ ಪೋಸ್ಟ್ ಗಳ ಮೂಲಕ ಮಾತ್ರ ಸಲ್ಲಿಸುವುದು.

ಸ್ಟ್ರಿಂಜರ್‍ಗಳಿಗೆ ಇತ್ತೀಚೆಗೆ ಪರಿಷ್ಕøತ ಪಾವತಿ ದರಗಳ ಪ್ರಕಾರ, ನಿಯೋಜಿಸಲಾದ ಸ್ಥಳೀಯ ವ್ಯಾಪ್ತಿಗೆ ರೂ. 1500/- ರಂತೆ ಹಾಗೂ ಎರಡನೇ ಕವರೇಜ್‍ಗೆ ರೂ. 1000/- ರಂತೆ ಪಾವತಿಸಲಾಗುತ್ತದೆ. ಹೊರರಾಜ್ಯ ವ್ಯಾಪ್ತಿಗೆ ರೂ. 1800/- ಗಳನ್ನು ಪಾವತಿಸಲಾಗುವುದು. ಪಾವತಿಯ ಮಿತಿಯನ್ನು ಪರಿಷ್ಕರಿಸಲಾಗಿದ್ದು, ಬೆಂಗಳೂರಿನ ಪ್ರತಿ ಸ್ಟ್ರಿಂಜರ್‍ಗೆ ವಾರ್ಷಿಕ 5 ಲಕ್ಷ ರೂ. ಉಳಿದ ಜಿಲ್ಲೆಗಳಿಗೆ ಪ್ರತಿ ಸ್ಟ್ರಿಂಜರ್‍ಗೆ ವಾರ್ಷಿಕ 4 ಲಕ್ಷ ರೂ. ನಿಗದಿಪಡಿಸಲಾಗಿದೆ.
ಸ್ಟ್ರಿಂಜರ್‍ಗಳು ಹೊಂದಿರುವ ಕ್ಯಾಮೆರಾ ಮತ್ತು ಪರಿಕರಗಳು ಪ್ರಸ್ತುತ ತಾಂತ್ರಿಕ ಮಾನದಂಡಗಳನ್ನು ಹೊಂದಿರಬೇಕು. ಡಿಎಸ್‍ಎನ್‍ಜಿ/ಲೈವ್ ಯೂನಿಟ್‍ಗಳು ಇತ್ಯಾದಿಗಳಿಗೆ ಸಂಪರ್ಕಿಸಲು ಅವರು ಅಗತ್ಯವಿರುವ ಪರಿಕರಗಳು, ಕನೆಕ್ಟರ್‍ಗಳು ಮತ್ತು ಇಂಟರ್‍ಫೇಸಿಂಗ್ ಘಟಕಗಳನ್ನು ಸಹ ಹೊಂದಿರಬೇಕು.
 
ಅರ್ಜಿದಾರರು ಇತ್ತೀಚಿನ ಪೂರ್ಣ ಹೆಚ್‍ಡಿ/ 4ಕೆ/ಯುಹೆಚ್‍ಡಿ/ಎನ್‍ಎಕ್ಸ್ ಸ್ವರೂಪದೊಂದಿಗೆ ತಮ್ಮದೇ ಆದ ವೃತ್ತಿಪರ ದರ್ಜೆಯ ವೀಡಿಯೊ ಕ್ಯಾಮೆರಾವನ್ನು ಹೊಂದಿರಬೇಕು. ಇದಲ್ಲದೆ, ಅರ್ಜಿದಾರರು ಕಾರ್ಡ್ ರೀಡರ್ ಮತ್ತು ನೆಟ್ ಡೇಟಾ ಪ್ಯಾಕ್ ಹೊಂದಿರುವ 4ಜಿ/3ಜಿ ಸಿಮ್ ಹೊಂದಿರುವ ಗುಣಮಟ್ಟದ ಸ್ಮಾರ್ಟ್ ಫೋನ್ ಅನ್ನು ಹೊಂದಿರಬೇಕು, ಇದರಿಂದಾಗಿ ಅಗತ್ಯವಿದ್ದಾಗ ದೃಶ್ಯಾವಳಿಗಳನ್ನು ಸ್ಥಳದಿಂದಲೇ ಸುದ್ದಿ ವಿಭಾಗಕ್ಕೆ ಕಳುಹಿಸಬಹುದು.

ಕರ್ನಾಟಕದ ಎಲ್ಲಾ ಅಸ್ತಿತ್ವದಲ್ಲಿರುವ ಸ್ಟ್ರಿಂಜರ್‍ಗಳು ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಮತ್ತು ಅವರು ಸ್ಟ್ರಿಂಜರ್‍ಗಳ ಹೊಸ ಎಂಪನೇಲ್‍ಮೆಂಟ್ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಅರ್ಜಿದಾರರು ತಾವು ಪಟ್ಟಿಯಲ್ಲಿ ಸ್ಥಾನ ಪಡೆಯಲು ಬಯಸುವ ಜಿಲ್ಲೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು.

ಸೂಕ್ತ ಪೂರಕ ದಾಖಲೆಗಳೊಂದಿಗೆ ಅರ್ಜಿಗಳು ಮತ್ತು ರೂ. 1180/- ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್‍ನ್ನು  ಪ್ರಸಾರ ಭಾರತಿ (IPSB), ದೂರದರ್ಶನ ಬೆಂಗಳೂರು ಇವರ ಹೆಸರಿನಲ್ಲಿ ಪಡೆದು "RNU, DDK,     ಬೆಂಗಳೂರು” ಅರ್ಜಿ ಸಲ್ಲಿಸುವ ಜಿಲ್ಲೆಯ ಹೆಸರನ್ನು ನಮೂದಿಸಿ ಮುಚ್ಚಿದ ಲಕೋಟೆಯಲ್ಲಿ 2025 ನೇ ಜೂನ್ 6 ರ ಸಂಜೆ 5.00 ಗಂಟೆಯೊಳಗೆ ಸುದ್ದಿ ನಿರ್ದೇಶಕರು, ಪ್ರಾದೇಶಿಕ ಸುದ್ದಿ ವಿಭಾಗ, ದೂರದರ್ಶನ ಕೇಂದ್ರ, ಜೆ.ಸಿ. ನಗರ, ಬೆಂಗಳೂರು-560006" ಗೆ ಮಾತ್ರ ಕಳುಹಿಸಬೇಕು  ಎಂದು ಸುದ್ದಿ ವಿಭಾಗದ ನಿರ್ದೇಶಕರಾದ ಕೇಶವಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)