ಫೋಂಡಾ, (ಗೋವಾ) - ಮೇ 17 ರಿಂದ 19, 2025 ರವರೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ರಾಷ್ಟ್ರ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಚೇತನವನ್ನು ಮೂಡಿಸಿದ ಒಂದು ಅಪೂರ್ವ ಉತ್ಸವವಾಗಿತ್ತು. ಈ ಮೂರು ದಿನಗಳ ಐತಿಹಾಸಿಕ ಮಹೋತ್ಸವವು ‘ನ ಭೂತೋ ನ ಭವಿಷ್ಯತಿ’ ಎಂಬ ಛಾಪು ಮೂಡಿಸಿದ್ದು, ನಿಜವಾದ ಅರ್ಥದಲ್ಲಿ ‘ಸನಾತನ ರಾಷ್ಟ್ರ’ದ ಶಂಖನಾದವಾಯಿತು ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ತಿಳಿಸಿದ್ದಾರೆ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಮಾರೋಪ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ. ವರ್ತಕ ಅವರು ಮುಂದುವರಿದು, ಗೋವಾ ಇತಿಹಾಸದಲ್ಲಿ ಭಾರತ ಸೇರಿದಂತೆ 23 ದೇಶಗಳ 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಇಷ್ಟು ಭವ್ಯ, ನಯನಮನೋಹರ ಮತ್ತು ಯೋಜಿತ ಕಾರ್ಯಕ್ರಮ ಇದಾಗಿತ್ತು ಎಂದು ಅನೇಕ ಚಿಂತಕರು, ಪ್ರಾಧ್ಯಾಪಕರು, ಉದ್ಯಮಿಗಳು, ಲೇಖಕರು, ಸಂಪಾದಕರು, ಕೇಂದ್ರ ಸಚಿವರು ಮತ್ತು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದರು. ಅಲ್ಲದೆ, ಪ್ರತಿ ವರ್ಷ ಇಂತಹ ಶಂಖನಾದ ಮಹೋತ್ಸವವನ್ನು ಆಯೋಜಿಸಬೇಕು ಎಂಬ ಬೇಡಿಕೆ ಸಮಾಜದಿಂದ ಬರಲು ಪ್ರಾರಂಭಿಸಿದೆ ಎಂದು ಶ್ರೀ. ವರ್ತಕ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಫೋಂಡಾದ ‘ಪ್ಯಾನ್ ಅರೋಮಾ’ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಚುನಾವಣಾ ಆಯುಕ್ತರಾದ ಶ್ರೀ. ನಾರಾಯಣ ನಾವತಿ, ಉದ್ಯಮಿ ಶ್ರೀ. ಮನೋಜ ಗಾಂವ್ಕರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ, ಉದ್ಯಮಿ ಶ್ರೀ. ಜಯಂತ್ ಮಿರಿಂಗಕರ, ಬ್ರಾಹ್ಮಣ ಮಹಾಸಂಘದ ಶ್ರೀ. ರಾಜ್ ಶರ್ಮಾ ಮತ್ತು ಗೋಮಾಂತಕ ಮಂದಿರ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ್ ಥಳಿ ಉಪಸ್ಥಿತರಿದ್ದರು.ಸಂತ ಮಹಾತ್ಮರು, ವ್ಯಾಖ್ಯಾನಕಾರರು, ಲೇಖಕರು ಮತ್ತು ಸನಾತನ ರಾಷ್ಟ್ರ ಹಿತೈಷಿಗಳ ಸಮಾವೇಶ; ವಿವಿಧ ಮಾರ್ಗಗಳು ಮತ್ತು ಕೊಠಡಿಗಳಿಗೆ ಋಷಿಗಳು ಮತ್ತು ದೇವತೆಗಳ ಹೆಸರಿನ ಭವ್ಯ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ’ ದ ನಿರ್ಮಾಣ; 30,000 ಜನರಿಗೆ ಎರಡೂ ಹೊತ್ತಿನ ಊಟದ ವ್ಯವಸ್ಥೆ, ಹಾಗೆಯೇ 1 ಲಕ್ಷ ಜನರಿಗೆ ಮಹಾಧನ್ವಂತರಿಯಾಗದ ಪ್ರಸಾದ ವಿತರಣೆ; ಗಣ್ಯರ ಭಾಷಣಗಳೊಂದಿಗೆ ಸಾಕ್ಷಾತ್ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಬಹುಮೂಲ್ಯ ಮಾರ್ಗದರ್ಶನ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಒಂದು ಕಡೆ ಕ್ಷಾತ್ರತೇಜಸ್ಸುಳ್ಳ ಶಿವಾಜಿ ಕಾಲದ ಶಸ್ತ್ರಾಸ್ತ್ರ ಪ್ರದರ್ಶನ, ಮತ್ತೊಂದು ಕಡೆ ಭಕ್ತಿ ಮತ್ತು ಬ್ರಾಹ್ಮತೇಜಸ್ಸುಳ್ಳ 15 ಸಂತರ ಪಾದುಕೆಗಳ ದರ್ಶನ; ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಸಂದಣಿ ಇದ್ದರೂ ಸುನಿಯೋಜಿತ ಸಂಚಾರ ವ್ಯವಸ್ಥೆಯಿಂದ ಸ್ಥಳೀಯ ಜನಜೀವನ ಸುಗಮವಾಗಿಡಲು ಸಾಧ್ಯವಾದ ಯಶಸ್ಸು, ಇಂತಹ ವೈವಿಧ್ಯಮಯ ವೈಶಿಷ್ಟ್ಯಗಳು ಮಹೋತ್ಸವದ ಗಮನಸೆಳೆದಿದ್ದವು.
ಮಹೋತ್ಸವದ ಉತ್ತರಾರ್ಧದಲ್ಲಿ ನಡೆದ ಶತಚಂಡಿ ಯಜ್ಞವು ವಿಶೇಷವಾಗಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತೀಯ ಸೇನೆಯು ವಿಜಯ ಸಾಧಿಸಲಿ ಎಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸೇನಾಪಡೆಗಾಗಿ 1 ಲಕ್ಷ 11 ಸಾವಿರ ರೂಪಾಯಿಗಳ ಮೊತ್ತವನ್ನು ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಅವರಿಗೆ ಹಸ್ತಾಂತರಿಸಲಾಯಿತು.
ಈ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಕರಕಮಲದಿಂದ 4 ಗಣ್ಯರಿಗೆ ‘ಹಿಂದೂ ರಾಷ್ಟ್ರರತ್ನ’ ಪ್ರಶಸ್ತಿ ಮತ್ತು 21 ಗಣ್ಯರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಮಹೋತ್ಸವದಲ್ಲಿ ‘ಸವ್ಯಸಾಚಿ ಗುರುಕುಲಂ’ ವತಿಯಿಂದ ಶಿವಾಜಿ ಕಾಲದ ಯುದ್ಧಕಲೆ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸ್ವಸಂರಕ್ಷಣಾ ತರಬೇತಿಯ ಪ್ರಾತ್ಯಕ್ಷಿಕೆಗಳು, ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನೃತ್ಯ ಮತ್ತು ಸಂಗೀತ ಪ್ರಸ್ತುತೀಕರಣ ನಡೆಯಿತು.
ಈ ಮಹೋತ್ಸವಕ್ಕಾಗಿ ಸಾವಿರಾರು ಜನರು ಗೋವಾದ ಹೊರಗಿನಿಂದ ಬಂದಿದ್ದರು, ಅವರು ಗೋವಾದ ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರಿಂದ ಗೋವಾದಲ್ಲಿ ‘ಸ್ಪಿರಿಚುವಲ್ ಟೂರಿಸಂ’ಗೆ ಹೆಚ್ಚಿನ ಉತ್ತೇಜನ ಸಿಕ್ಕಿತು. ದೇಶ-ವಿದೇಶಗಳಿಂದ ಬಂದ ಗಣ್ಯರಿಗೆ ಗೋವಾ ‘ಭೋಗಭೂಮಿ’ ಅಲ್ಲ, ಅದು ‘ಯೋಗಭೂಮಿ’ ಎಂದು ಮನವರಿಕೆ ಮಾಡಿಸುವಲ್ಲಿ ಈ ಮಹೋತ್ಸವವು ದೊಡ್ಡ ಯಶಸ್ಸನ್ನು ಸಾಧಿಸಿದೆ ಎಂದು ಖಚಿತವಾಗಿ ಹೇಳಬಹುದು. ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಗೋವಾ ಸರಕಾರ, ಪೊಲೀಸ್ ಆಡಳಿತ, ಗೋವಾ ಇಂಜಿನಿಯರಿಂಗ್ ಕಾಲೇಜು, ಸ್ಥಳೀಯ ಜನಪ್ರತಿನಿಧಿಗಳು, ಸರಪಂಚರು, ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಿದರು, ಹಾಗೆಯೇ ಪತ್ರಕರ್ತರು, ಉದ್ಯಮಿಗಳು ಮತ್ತು ಸೇವಾ ಸಂಸ್ಥೆಗಳ ಕೊಡುಗೆ ಅತ್ಯಂತ ಅಮೂಲ್ಯವಾಗಿದೆ. ಅದೇ ರೀತಿ, ಎಲ್ಲಾ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ವಿಚಾರಗಳ ಸಂಸ್ಥೆಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದವು, ಇದಕ್ಕಾಗಿ ಅವರಿಗೆ ವಿಶೇಷ ಕೃತಜ್ಞತೆಗಳು!
ಈ ಭವ್ಯ ಮಹೋತ್ಸವದ ಚರ್ಚೆ ದೇಶಾದ್ಯಂತ ಹರಡಿದ್ದು, ‘ಶಂಖನಾದ’ ಎಂಬ ಪರಿಕಲ್ಪನೆಯು ಈಗ ದೇಶಾದ್ಯಂತ ರಾಷ್ಟ್ರ ನಿರ್ಮಾಣದ ಚೇತನವನ್ನು ಮೂಡಿಸುತ್ತಿದೆ. ಒಟ್ಟಾರೆ, ಈ ಮಹೋತ್ಸವದಿಂದ ‘ರಾಷ್ಟ್ರೀಯ ಏಕತೆ’, ‘ಭಾರತೀಯತೆಯ ಭಾವನೆ’, ‘ಆಧ್ಯಾತ್ಮಿಕ ಶಕ್ತಿ’, ‘ಸಾಂಸ್ಕೃತಿಕ ಚೇತನ’ ಮತ್ತು ‘ಶೌರ್ಯ’ ಇವುಗಳ ಪ್ರಬಲ ಜಾಗೃತಿಯಾಯಿತು. ಆದ್ದರಿಂದ ಅನೇಕ ಗಣ್ಯರು ಹಾಗೂ ಸಾಮಾನ್ಯ ನಾಗರಿಕರು ‘ಇಂತಹ ಮಹೋತ್ಸವವನ್ನು ಪ್ರತಿ ವರ್ಷ ಆಯೋಜಿಸಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಇದು ಕಾರ್ಯಕ್ರಮದ ಯಶಸ್ಸಿನ ಸಾಕ್ಷಿಯಾಗಿದೆ ಎಂದೂ ಹೇಳಬಹುದು.
ತಮ್ಮ ಸವಿನಯ,
ಶ್ರೀ. ಅಭಯ ವರ್ತಕ,
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ: 99897 22222)