ಕಾಂಬೋಡಿಯ ದೇಶದಲ್ಲಿ ಇದೇ ಜುಲೈ 14 ರಿಂದ 17ರವರೆಗೆ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ

varthajala
0

ಇದರಲ್ಲಿ ಭಾರತವನ್ನು ಪ್ರತಿನಿಧಿಸಿ, ನಮ್ಮ ರಾಷ್ಟ್ರದ ನಿಲುವು, ಯೋಜನೆ ಮತ್ತು ವಿಷಯಗಳನ್ನು ಮಂಡಿಸಲು ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ನನ್ನನ್ನು ಆಯ್ಕೆ ಮಾಡಿರುತ್ತಾರೆ. ಈ ವರ್ಷದ ಸಭೆಯ ಪ್ರಮುಖ ವಿಷಯವಾದ "ಸಂವಾದದ ಮೂಲಕ ಶಾಂತಿ ಮತ್ತು ಮುಂದಿನ ಸಂಸದೀಯ ಹಾದಿ ಹಾಗೂ ಮಹಿಳೆಯರ ಸಶಕ್ತಿಕರಣ, ಹವಾಮಾನ ವೈಪರಿತ್ಯ" ಮತ್ತು ಇನ್ನಿತರ ವಿಷಯಗಳ ಕುರಿತಂತೆ ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂವಾದ ನಡೆಯಲಿದೆ. ಜೊತೆಗೆ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ವಿಶ್ವದ ಎಲ್ಲೆಡೆ ಅವರು ಕೈಗೊಂಡಿರುವ ಸಾಧನೆಯನ್ನು ಬಿಂಬಿಸುವ ಮೂಲಕ ಮತ್ತು ಮಹತ್ವದ ಚರ್ಚೆಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಕ್ರಿಯವಾಗಿ ಭಾಗವಹಿಸಲು ನಾನು ಕಾತರನಾಗಿದ್ದು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ರಾಷ್ಟ್ರದ ಪ್ರತಿನಿಧಿಯಾಗಿ ವಿಷಯಗಳನ್ನು ಮಂಡಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಶ್ರೀ ಓಂ ಬಿರ್ಲಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ವಿಶ್ವೇಶ್ವರ ಹೆಗಡೆ, ಕಾಗೇರಿ

ಸಂಸದರು, 

ಉತ್ತರ ಕನ್ನಡ

Post a Comment

0Comments

Post a Comment (0)