ತ್ಯಾಗರಾಜ್ ನಗರದಲ್ಲಿ ವಿಶಿಷ್ಟ ವೈಭವದ ಗುರುಪೂರ್ಣಿಮೆ

varthajala
0

 ಬೆಂಗಳೂರು -ಜು. 10-ನಗರದ ತ್ಯಾಗರಾಜ್ ನಗರದ ಶ್ರೀ ಸಾಯಿ ಆದ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದಲ್ಲಿ ಇಂದು ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆಧಾರ್ಮಿಕ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತುಭಕ್ತರ ನೆರವಿನಿಂದ ಹರಿದುಬಂದ 6 ಟನ್ ವಿವಿಧ ತರಕಾರಿಗಳು ಮತ್ತು 5 ಟನ್ ವಿವಿಧ ರೀತಿಯ ಹಣ್ಣುಗಳಿಂದ ಮತ್ತು ಹೂವುಗಳಿಂದ ದೇವಸ್ಥಾನವನ್ನ , ಸದ್ಗುರು ಶ್ರೀ ಸಾಯಿ ಬಾಬಾಶ್ರೀ ನರಸಿಂಹ ಸ್ವಾಮೀಜಿಮತ್ತು ರಾಧಾಕೃಷ್ಣ ಸ್ವಾಮೀಜಿಯವರನ್ನ ವಿಶೇಷವಾಗಿ ಅಲಂಕರಿಸಲಾಗಿದ್ದು ದೇವಲೋಕವೇ ಭೂಮಿಗೆ ಬಂದಂತಿತ್ತು.

 50 ವರ್ಷದ ನಂತರ ಇಂದು ಗುರುವಾರದ ದಿನ ಗುರು ಪೌರ್ಣಿಮೆ ಬಂದಿರುವುದು ತುಂಬಾ ವಿಶೇಷವಾಗಿದೆಬೆಳಿಗ್ಗೆ 9 ಗಂಟೆಗೆ ವ್ಯಾಸ ಪೂಜೆ,ಸಂಜೆ 6 ಗಂಟೆಗೆ ಸತ್ಯನಾರಾಯಣ ಪೂಜೆರಾತ್ರಿ ಶೇಜಾರತಿ ನಡೆಯಿತು.

ಬೆಳಗಿನಿಂದ ಸಂಜೆಯವರೆಗೆ ಸುಮಾರು ಒಂದು ಲಕ್ಷ ಭಕ್ತರು ಸಾಲಿನಲ್ಲಿ ನಿಂತು ಆಗಮಿಸಿ ಸಾಯಿ ಗುರುವಿನ ದರ್ಶನ ಪಡೆದರುಕ್ಷೇತ್ರದ ಅನೇಕ ಗಣ್ಯರು ಆಗಮಿಸಿದ್ದರುಎಲ್ಲಾ ಭಕ್ತರಿಗೋ ತುಪ್ಪದ ಮೈಸೂರುಪಾಕ್ ಸೇರಿದಂತೆ ವಿವಿಧ ಪ್ರಸಾದ ತೀರ್ಥವನ್ನ ವಿತರಿಸಲಾಯಿತು.

ದಿನಾಂಕ 12 ರಂದುಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಭಜನೆ ಕಾರ್ಯಕ್ರಮ ಹೆಮ್ಮಿಕೊಳ್ಳಲಾಗಿದೆಇದರಲ್ಲಿ ಶ್ರೀ ಸಾಯಿ ಸ್ಮರಣ್ ಭಜನಾ ವೃಂದಶ್ರೀ ಅನಂತ ಸಾಯಿ ಸಂಗೀತ ತಂಡತಿಲಕ್ ಕಾರ್ತಿಕ್ ಶಿವ ಚರಣ್ ಮತ್ತು ವೃಂದಸಾಯಿಗೀತಾ ಭಜನಾ ಮಂಡಳಿಸಾಯಿ ಪಾದಾನಂದ ಬಾಲ ವಿಹಾರ ಕೇಂದ್ರಸಾಯಿ ಅಧ್ಯಾತ್ಮಕ ಕೇಂದ್ರ ಇವರುಗಳು ನಿರಂತರ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ

75 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ತ್ಯಾಗರಾಜ್ ನಗರದ ಸಾಯಿ ಆಧ್ಯಾತ್ಮಿಕ ಕೇಂದ್ರ ಬೆಂಗಳೂರಿನ ತ್ಯಾಗರಾಜ ನಗರವಸಂತ ನಗರಮತ್ತು ತಮಿಳು ನಾಡಿನಲ್ಲಿಯು ಸಹ ಶ್ರೀ ಸಾಯಿ ಮಂದಿರವನ್ನ ಹೊಂದಿದ್ದು ನಿರಂತರವಾಗಿ ಧಾರ್ಮಿಕಸಾಮಾಜಿಕಶೈಕ್ಷಣಿಕವೈದ್ಯಕೀಯ ನೆರವಿನ ಕಾರ್ಯಕ್ರಮಗಳನ್ನ ನಡಸುತ್ತ ಬಂದಿದೆಪ್ರತಿದಿನ ಎಂಟು ಸಾವಿರ ಶಾಲಾ ಮಕ್ಕಳಿಗೆಒಂದು ಸಾವಿರ ರೋಗಿ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಮಧ್ಯಾಹ್ನ ಬಿಸಿ ಊಟವನ್ನ ವಿತರಿಸುತ್ತಿದ್ದಾರೆ.

 

ವಿಶೇಷ ಅಲಂಕಾರವನ್ನ ಸಾರ್ವಜನಿಕರಿಗೆ ವೀಕ್ಷಣೆಗಾಗಿ ಭಾನುವಾರದವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು

 ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

 

 

ವೆಂಕಟೇಶ್ 

ಕಾರ್ಯಕಾರಿ ಸದಸ್ಯ 

ಸಾಯಿ ಆಧ್ಯಾತ್ಮಿಕ ಕೇಂದ್ರ 

Post a Comment

0Comments

Post a Comment (0)