ಸುಧೀಂದ್ರನಗರ ರಾಯರ ಮಠದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ "ಅಖಂಡ ಭಾಗವತ" ಪ್ರವಚನ ಬೆಳಗ್ಗೆ 6-00 ರಿಂದ ರಾತ್ರಿ 12-30ರ ವರೆಗೆ
ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಸುಧೀಂದ್ರನಗರದ ರಾಯರ ಮಠದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಡಿಸೆಂಬರ್ 30, ಮಂಗಳವಾರ ಬೆಳಗ್ಗೆ 6-00 ರಿಂದ ರಾತ್ರಿ 12-30ರ ವರೆಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ "ಅಖಂಡ ಭಾಗವತ" ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಪಂಡಿತರ ಪ್ರವಚನ ಅವಧಿ ಒಂದೂವರೆ ಗಂಟೆ ನಿಗದಿಪಡಿಸಲಾಗಿದೆ.
ಉಪನ್ಯಾಸ ನೀಡುವ ಪಂಡಿತರು : ಶ್ರೀ ಚಂದ್ರಶೇಖರ ಆಚಾರ್ (ಸ್ಕಂದ-1), ಶ್ರೀ ಕಲ್ಲಾಪುರ ಪವಮಾನಾಚಾರ್ (ಸ್ಕಂದ-2), ಶ್ರೀ ಕಲ್ಯಾ ಶ್ರೀಕಾಂತಾಚಾರ್ (ಸ್ಕಂದ-3), ಶ್ರೀ ಬ್ರಹ್ಮಣ್ಯಾಚಾರ್ (ಸ್ಕಂದ-4), ಶ್ರೀ ದ್ವೈಪಾಯನಾಚಾರ್ ಜೋಶಿ (ಸ್ಕಂದ-5), ಶ್ರೀ ಜೆ.ಎಂ. ಚಿಮ್ಮಲಗಿ ಆಚಾರ್ಯ (ಸ್ಕಂದ-6), ಶ್ರೀ ವೆಂಕಟನರಸಿಂಹಾಚಾರ್ (ಸ್ಕಂದ-7), ಶ್ರೀ ಪ್ರಶಾಂತ ಭಾರ್ಗವಾಚಾರ್ (ಸ್ಕಂದ-8), ಶ್ರೀ ಮಾಳಗಿ ಆನಂದತೀರ್ಥಾಚಾರ್ (ಸ್ಕಂದ-9), ಶ್ರೀ ರಾಮವಿಠಲಾಚಾರ್ (ಸ್ಕಂದ-10 ಭಾಗ-1), ಶ್ರೀ ಸುಧಾಮಾಚಾರ್ (ಸ್ಕಂದ-10 ಭಾಗ-2), ಶ್ರೀ ಗುರುಪ್ರಸಾದಾಚಾರ್ (ಸ್ಕಂದ-11) ಮತ್ತು ಶ್ರೀ ನಾರಾಯಣಾಚಾರ್ (ಸ್ಕಂದ-12). ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು560003.
