ತಾಯಿ ಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಯು ಆರ್ ಆರ್ ನಗರದ ಕೆ.ಕೆ. ಸಮೂಹ ಶಿಕ್ಷಣ ಸಂಸ್ಥೆ ಯ ಸಂಯೋಗದಲ್ಲಿ ದೇಸಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಬಂಜಾರ ಸಾಂಸ್ಕೃತಿಕ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಚ್ ಲಕ್ಷ್ಮಿ ನಾರಾಯಣಸ್ವಾಮಿ , ಕೆ. ಕೆ. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಹೇಮಲತಾ, ಕೇರಳ ರಾಜ್ಯ ಕಾಸರಗೋಡಿನ ಸಾಹಿತಿಗಳು ಮತ್ತು ಪತ್ರಕರ್ತರಾದ ಶ್ರೀ ರವಿ ನಾಯ್ಕಾ ಪು, ಖ್ಯಾತ ನಿರೂಪಕರು ಶ್ರೀಮತಿ ಸೌಮ್ಯಗೌಡ. ತಾಯಿಬೇರು ಸಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಎ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು .