ಬೆಂಗಳೂರು, ನವೆಂಬರ್ 14, (ಕರ್ನಾಟಕ ವಾರ್ತೆ) :
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ವಿಳಾಸವು ನಂ.01, ವೆಂಕಟೇಶ್ವರ ಬಡಾವಣೆ, ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆ ಈ ವಿಳಾಸಕ್ಕೆ ಬದಲಾವಣೆಯಾಗಿದ್ದು, ಇನ್ನು ಮುಂದೆ ಸದಸ್ಯರ ಹೆಸರಿನಲ್ಲಿ ಕಳುಹಿಸಲಾಗುವ ಎಲ್ಲಾ ಕಾಗದ ಪತ್ರಗಳ ವ್ಯವಹಾರವನ್ನು ಸದರಿ ವಿಳಾಸದಲ್ಲಿ ನಡೆಸಬೇಕೆಂದು ಕರ್ನಾಟಕ ವಿಧಾನಸಭೆಯ ಅಧೀನ ಕಾರ್ಯದರ್ಶಿ ಕೆ.ಸುನೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.