ಬೆಂಗಳೂರು,ಜ.11; ಚಾಮರಾಜು ಕಲ್ಯಾಣ ಮಂಟಪದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟಿಡ್ ನಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಚಿಕ್ಕಪೇಟೆ ಶಾಸಕ ಉದಯ್ ಬಿ. ಗರುಡಾಚಾರ್ ಹಾಗೂ ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜು, ಬ್ಯಾಂಕ್ ಅಧ್ಯಕ್ಷರಾದ ಡಿ.ಆರ್.ವಿಜಯಸಾರಥಿ, ಉಪಾಧ್ಯಕ್ಷರಾದ ರಂಗಧಾಮ ಶೆಟ್ಟಿ, ನಿರ್ದೇಶಕರುಗಳು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಸಾಹಸ್ರರು ಸದಸ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು. ನೂರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.*ಉದಯ್ ಬಿ.ಗರುಡಾಚಾರ್ ಮಾತನಾಡಿ, ಸಹಕಾರ ವಲಯದ ಬ್ಯಾಂಕ್ ನಡೆಸುವುದು ಸುಲಭವಲ್ಲ. ಸಾರ್ವಜನಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಸಿಕೊಳ್ಳಬೇಜು. ಮುಂದಿನ ದಿನಗಳಲ್ಲಿ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಗೆ ಧನ ಸಹಾಯ ಮಾಡುವುದಾಗಿ ಹೇಳಿದರು.
*ಎನ್.ನಾಗರಾಜು ಮಾತನಾಡಿ ರಾಷ್ಟ್ರೀಯ ಬ್ಯಾಂಕ್ ಗಳು ಸಮಾಜಮುಖಿ ಕಾರ್ಯಗಳು ಮಾಡವುದಿಲ್ಲ, ಕೋ-ಆಪರೇಟಿವ್ ಬ್ಯಾಂಕ್ ಗಳು ಸ್ಥಳೀಯರು ಮತ್ತು ಸದಸ್ಯರಿಗೆ ಉತ್ತಮ ಸೇವೆ ಮತ್ತು ಸಮಾಜಕ್ಕೆ ಬೇಕಾದ ಕೆಲಸಗಳು ಮಾಡುತ್ತದೆ. ಸಮಾಜ ಸೇವೆ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು. ಬ್ಯಾಂಕ್ ಅಭಿವೃದ್ದಿಯ ಜೊತೆಯಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ಕುರಿತು ಕೆಲಸ ಮಾಡಬೇಕು ಎಂದು ಹೇಳಿದರು.
*ಡಿ.ಆರ್.ವಿಜಯಸಾರಥಿ ಮಾತನಾಡಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಮಾಜಮುಖಿ ಕಾರ್ಯಗಳು ಮಾಡುತ್ತಾ ಬಂದಿದೆ. ಗುರಿ ಮತ್ತು ಗುರುಗಳ ಆಶೀರ್ವಾದ ಮತ್ತು ಆರೋಗ್ಯವಂತರಾಗಿ ಇದ್ದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಮ್ಮ ಬ್ಯಾಂಕ್ ವತಿಯಿಂದ ಪ್ರಥಮ ಬಾರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಮ್ಮ ಸದಸ್ಯರಿಗೆ ಖಾಸಗಿ ಆಸ್ಪತ್ರೆ ಜೊತೆಯಲ್ಲಿ ಒಪ್ಪಂದವಾಗಿದೆ ಎಂದರು.
ಸದಸ್ಯರು ಮತ್ತು ಆಡಳಿತ ಮಂಡಳಿ ಜೊತೆಯಲ್ಲಿ ಉತ್ತಮ ಸಹಕಾರವಿರಬೇಕು. ಆಡಳಿತ ಮಂಡಳಿ ಮತ್ತು ಸದಸ್ಯರು ಜೊತೆಯಲ್ಲಿ ಉತ್ತಮ ಬಾಂಧ್ಯವವಿರಬೇಕು ಆಗ ಮಾತ್ರ ಸಹಕಾರ ಸಂಸ್ಥೆ ಉಳಿಯಲು ಸಾಧ್ಯ. ಏಪ್ರಿಲ್ ತಿಂಗಳಲ್ಲಿ 25 ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಮ್ಮ ಸದಸ್ಯರ ಮಕ್ಕಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ
ಆರೋಗ್ಯ ತಪಾಸಣೆ ವಿಭಾಗಗಳು: ಹೃದಯ, ಕಿಡ್ನಿ, ನರರೋಗ (ನ್ಯೂರಾಲಜಿ), ಕಣ್ಣು,ಮೂಗು-ಕಿವಿ-ಗಂಟಲು (ENT),ಮಕ್ಕಳ ವೈದ್ಯಕೀಯ (ಪೀಡಿಯಾಟ್ರಿಕ್ಸ್) ಮತ್ತು ಸಾಮಾನ್ಯ ತಪಾಸಣೆಯನ್ನು ವೈದೇಹಿ ಆಸ್ಪತ್ರ ಸಹಯೋಗ ನೀಡಿತು.