` ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗ' ಕುರಿತ ಪ್ರಬಂಧ ಸ್ಪರ್ಧೆ

varthajala
0

ಬೆಂಗಳೂರು, ಸೆಪ್ಟೆಂಬರ್ 27, (ಕರ್ನಾಟಕ ವಾರ್ತೆ) : ಅಂತರರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ದಿನಾಚರಣೆ  ಅಂಗವಾಗಿ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರವು “ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗಗಳು” ವಿಷಯದ ಮೇಲೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧಾರ್ಥಿಗಳು ತಮ್ಮ ಪ್ರಬಂಧಗಳನ್ನು ಟೈಪ್ ಮಾಡಿ (ವರ್ಡ್ ಫರ್ಮೆಟ್ ನಲ್ಲಿ) ಮಿಂಚಂಚೆ ಮೂಲಕ ಹಾಗೂ ಕೈಬರಹದಲ್ಲಿ ಬರೆಯವವರು ಪೋ್ಟ್ ಮೂಲಕ ಎರಡು ರೀತಿಯಲ್ಲಿ ಕಳುಹಿಸಲು ಅವಕಾಶ ನೀಡಲಾಗಿದೆ. ಪ್ರಬಂಧಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 15-11-2021 ನಿಗಧಿಪಡಿಸಿದೆ.

ಪ್ರಬಂಧವನ್ನು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಿ ವರ್ಡ್ ಪೈಲ್ ಮೂಲಕ ಕಳುಹಿಸುವವರು atiessaycompetition@gmail  ಗೆ ಕಳುಹಿಸುವುದು. ಕೈಬರಹದಲ್ಲಿ ಬರೆದ ಪ್ರಬಂಧಗಳ (ಹಾರ್ಡ್ ಕಾಫಿ)ನ್ನು ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಲಲಿತ ಮಹಲ್ ರಸ್ತೆ, ಮೈಸೂರು – 570011 ವಿಳಾಸಕ್ಕೆ ದಿನಾಂಕ: 15-11-2021ರ ಸಂಜೆ 5.00 ಗಂಟೆ ಒಳಗೆ ಕಳುಹಿಸಬೇಕು.
ಕನ್ನಡ ಮತ್ತು ಆಂಗ್ಲ ಭಾಷೆಯ ಪ್ರಬಂಧಗಳಿಗೆ ಪ್ರತ್ಯೇಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಮೊದಲ ಬಹುಮಾನ 10,000/- ದ್ವಿತೀಯ ಬಹುಮಾನ 8,000/- ತೃತೀಯ ಬಹುಮಾನ 5,000/- ಆಡಳಿತ ತರಬೇತಿ ಸಂಸ್ಥೆ ಮೈಸೂರು ಇಲ್ಲಿ ಹಮ್ಮಿಕೊಳ್ಳುವ ಕಾರ್ಯಾಗಾರದಲ್ಲಿ ನೀಡಲಾಗುವುದು. ಸ್ಪರ್ಧಾ‍ರ್ಥಿಗಳು     ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಇರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದ್ದು, ಮಾಹಿತಿಯನ್ನು http://atimysore.gov.in     ವೆಬ್ ಸೈಟ್ ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರು, ಮೊಬೈಲ್ ಸಂ. 9740768931 ಮತ್ತು 9901212215 ಇವರನ್ನು ಸಂಪರ್ಕಿ‍ಸಲು ಅಧಿಕೃತ ಪ್ರಕಟಣೆ ತಿಳಿಸಿದೆ.

Tags

Post a Comment

0Comments

Post a Comment (0)