ಶ್ರೀ ಸಿದ್ದಗಂಗಾ ಮಠದಲ್ಲಿ ಉಚಿತ ವಿದ್ಯಾಭ್ಯಾಸ

varthajala
0

 ಶ್ರೀ ಸಿದ್ದಗಂಗಾ ಮಠದಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಸೇರಬಯಸುವ ಬಡ ಮತ್ತು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ.

ದಿನಾಂಕ :15-4-2022ರಿಂದ ಅರ್ಜಿ ಫಾರಂ ಗಳನ್ನು ವಿತರಿಸಲಾಗುತ್ತಿದೆ.

ನೀವು ಇರುವ ಊರುಗಳಿಗೆ ಅಂಚೆ ಮೂಲಕ ಮಠಕ್ಕೆ ಸೇರುವ ಅರ್ಜಿ ಫಾರಂ ಮತ್ತು ಅಲ್ಲಿನ ಶಾಲೆಯಿಂದ ವರ್ಗಾವಣೆ ಪತ್ರ ತರಲು ಬೇಕಾದ ಪತ್ರವನ್ನು ತರಿಸಿಕೊಳ್ಳುವ ಸೌಲಭ್ಯವಿದೆ.

ಪ್ರತಿ ಅರ್ಜಿ ಫಾರಂ ಗೆ ರೂ 20ರಂತೆ ಶ್ರೀ ಸಿದ್ದಲಿಂಗೇಶ್ವರ ಅನಾಥಲಯ, ಶ್ರೀ ಸಿದ್ದಗಂಗಾ ಮಠ, ತುಮಕೂರು ಜಿಲ್ಲೆ 572104ಗೆ ತಲುಪುವಂತೆ MO ಮಾಡಿ.

ಅದರಲ್ಲಿ ನಿಮ್ಮ ಸರಿಯಾದ ಅಂಚೆ ವಿಳಾಸ ಮತ್ತು ನಿಮ್ಮ ಮಗು ಸೇರಬೇಕಾದ ತರಗತಿ ಮತ್ತು ಮಾಧ್ಯಮ ಗಳನ್ನು ಬರೆದು ಕಳಿಸಿ.

ಅರ್ಜಿ ನಿಮಗೆ ತಲುಪಿದ ನಂತರ ನಿಮ್ಮ ಎಲ್ಲಾ ದಾಖಲೆಗಳೊಂದಿಗೆ ಶ್ರೀ ಮಠಕ್ಕೆ ನಿಮ್ಮ ಮಗುವನ್ನು ದಾಖಲಾತಿ ಮಾಡಬಹುದು.

ಜನಸೇವೆಯೇ ಜನಾರ್ದನ ಸೇವೆ

 ಡಾ ಎಸ್ಆರ್  ರೇಣುಕಾ ಪ್ರಸಾದ್ ಸಂಸ್ಥಾಪಕ ಅಧ್ಯಕ್ಷರು ಭಾರತೀಯ ಯುವ ಚೇತನ ಪ್ರತಿಷ್ಠಾನ ಬೆಂಗಳೂರು.


Post a Comment

0Comments

Post a Comment (0)