ವಿದ್ಯಾರ್ಥಿಗಳಿಗೆ ಹೂ ಕೊಡುವುದರ ಮೂಲಕ ಶಾಲೆಗೆ ಸ್ವಾಗತ

varthajala
0

  ಬಳ್ಳಾರಿ ಮೇ 16. ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜೀವರಾಯನಕೋಟೆಯಲ್ಲಿ 2022-23ನೇ ಸಾಲಿನ ಶಾಲಾ ಪ್ರಾರಂಭೋತ್ಸವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಹೂ ಕೊಡುವುದರ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳು ಶಾಲೆಯ ಕಡೆಗೆ ಹುಮ್ಮಸ್ಸಿನಿಂದ ಬರತೊಡಗಿದರು.ಪೋಷಕರು ಮಕ್ಕಳನ್ನು ಶಾಲೆಗೆ ಸಂತೋಷದಿಂದ ಕರೆದುಕೊಂಡು ಬರುತ್ತಿರುವುದು ಎಲ್ಲರ ಗಮನವನ್ನು ಸೆಳೆಯಿತು. ಶಾಲೆಯ ಹಿರಿಯ ಬಡ್ತಿ ಮುಖ್ಯ ಗುರುಗಳಾದ ಕೆ.ಕೃಷ್ಣವೇಣಿ, ಎಸ್. ಡಿ.ಎಂ.ಸಿ.ಅಧ್ಯಕ್ಷ ದೊಡ್ಡ ಕುಮಾರ,ಊರಿನವರಾದ ಪರಮೇಶ್ವರಪ್ಪ, ಗಂಗಲಿ,ಕೆರಾಳಪ್ಪ,ಶಿಕ್ಷಕರಾದ ರವಿಚೇಳ್ಳಗುರ್ಕಿ,ಮುನಾವರ ಸುಲ್ತಾನ, ಬಸವರಾಜ, ದಿಲ್ಷಾದ್ ಬೇಗಂ,ಮೋದಿನ್ ಸಾಬ್, ಚನ್ನಮ್ಮ,ದೈಹಿಕ ಶಿಕ್ಷಕಿ ಕೆ.ಸುಧಾ, ಸುಮತಿ, ಉಮ್ಮೇಹಾನಿ, ಶಶಮ್ಮ ಮುಂತಾದ ಉಪಸ್ಥಿತರಿದ್ದರು.



 

Tags

Post a Comment

0Comments

Post a Comment (0)