TTD ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ) ದಲ್ಲಿ "ಊಂಜಲ್ ಸಂಗೀತೋತ್ಸವ"

varthajala
0

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (MALLESWARAM TTD) ದಲ್ಲಿ ಜೂನ್ 18, ಶನಿವಾರ ಏರ್ಪಡಿಸಿದ್ದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ಚೇತನಾ ನಾಗರಾಜ್ ಮತ್ತು ಡಾ|| ಶ್ರೀಮತಿ ಮಮತಾ ಸತೀಶ್ ಅವರು ತಾಳಪಾಕಂ ಅನ್ನಮಾಚಾರ್ಯರ ಕೀರ್ತನೆಗಳು, ಶ್ರೀ ಶಂಕರಾಚಾರ್ಯರ ಕೀರ್ತನೆಗಳು ಮತ್ತು ಹರಿದಾಸರ ಪದಗಳನ್ನು ಹಾಡಿದರು. 

ವಿ|| ಶಶಿಧರ್ ಪಿಟೀಲು ವಾದನದಲ್ಲಿ, ವಿ|| ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು. 

ಟಿ ಟಿ ಡಿ ಯ ಕಾರ್ಯಕ್ರಮ  ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗ ರಾವ್ ಅವರು ವಂದನಾರ್ಪಣೆ ಮಾಡಿದರು.

Post a Comment

0Comments

Post a Comment (0)