'ಸುಕನ್ಯಾ ಪುಸ್ತಕ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ

varthajala
0

'ಸುಕನ್ಯಾ ಪುಸ್ತಕ ಪ್ರಶಸ್ತಿ'ಗೆ 2020-21 ರ ಸಾಲಿನಲ್ಲಿ ಪ್ರಕಟಗೊಂಡಿರುವ ಕೃತಿಗಳನ್ನು ಶ್ರೀ ಬುದ್ಧ ಬಸವ ಅಂಬೇಡ್ಕರ್ ಜನಕಲ್ಯಾಣ ಪ್ರತಿಷ್ಠಾನವು ಆಹ್ವಾನಿಸಿದೆ. 


ಕಥೆ, ಕವನ, ಕಾದಂಬರಿ, ನಾಟಕ, ಅನುವಾದ, ಪ್ರಬಂಧ, ಕಥಾಸಂಕಲನ, ಹರಟೆ, ಪ್ರವಾಸ ಕಥನ,  ಸಂಪಾದನೆ ಸೇರಿದಂತೆ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಸಲ್ಲಿಸಬಹುದಾಗಿದೆ.      

ಆಯ್ಕೆಯಾದ ಕೃತಿಗೆ "ಸುಕನ್ಯಾ ಪುಸ್ತಕ ಪ್ರಶಸ್ತಿ" ಯೊಂದಿಗೆ ಶಾಲು, ಫಲಕ, ನೆನಪಿನ ಕಾಣಿಕೆ, ಪದಕವನ್ನು ನೀಡಿ ಗೌರವ ಯುತವಾಗಿ ಸನ್ಮಾನಿಸಲಾಗುವುದು.    

ಅರ್ಜಿದಾರರು ಪುಸ್ತಕದ ಮೂರು ಪ್ರತಿಗಳನ್ನು ಅಕ್ಟೋಬರ್ 25ರ ಒಳಗಾಗಿ ಅಧ್ಯಕ್ಷರು ಶ್ರೀ ಬುದ್ಧ ಬಸವ ಅಂಬೇಡ್ಕರ್ ಜನಕಲ್ಯಾಣ ಪ್ರತಿಷ್ಠಾನ ಚಮಕೇರಿ ರೋಡ್, ಭರಮಖೋಡಿ ತಾ. ಅಥಣಿ ಜಿ. ಬೆಳಗಾವಿ ಪಿನ್ 591304 ಇಲ್ಲಿಗೆ ಕಳುಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ (ಹೆಚ್ಚಿನ ಮಾಹಿತಿಗಾಗಿ ಮೊ. 9880635268) ತಿಳಿಸಲಾಗಿದೆ.

Post a Comment

0Comments

Post a Comment (0)