ತುಮಕೂರು ವಿ.ವಿ. ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆಗಳ ಸಹಯೋಗದಲ್ಲಿ "ಕುವೆಂಪು: ಯುವ ಮಂಥನ"

varthajala
0

 ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆಗಳು ಜಂಟಿಯಾಗಿ "ಕುವೆಂಪು: ಯುವ ಮಂಥನ" ಲೇಖನ ಸ್ಪರ್ಧೆಯನ್ನು ಆಯೋಜಿಸಿವೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ.

ನಿಯಮಗಳು: ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು.

ಮೊದಲ ಬಹುಮಾನ 5 ಸಾವಿರ + 3 ಸಾವಿರ ಮೊತ್ತದ ಪುಸ್ತಕ, ಎರಡನೇ ಬಹುಮಾನ 3 ಸಾವಿರ+ 2 ಸಾವಿರ ನೊತ್ತದ ಪುಸ್ತಕ, ಹಾಗೂ ಮೂರನೇ ಬಹುಮಾನ 2 ಸಾವಿರ + 1 ಸಾವಿರ ಮೊತ್ತದ ಪುಸ್ತಕಗಳನ್ನು ನೀಡಲಾಗುವುದು.

ಕುವೆಂಪು ಅವರ ಈ ಕೆಳಗಿನ ಲೇಖನಗಳನ್ನು ಆಧರಿಸಿ ಬರೆಯಿರಿ.
1. ವಿಚಾರಕ್ರಾಂತಿಗೆ ಆಹ್ವಾನ
2. ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ
3. ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ
4. ಸಂಸ್ಕೃತಿ ಕರ್ನಾಟಕ
5.ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ
6.ವಿದ್ಯಾರ್ಥಿಗಳಿಗೇಕೆ  ಸಾಹಿತ್ಯ
7.ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆ
8.ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ

ಟೈಪಿಸಲ್ಪಟ್ಟ ಲೇಖನಗಳು 15 ಡಿಸೆಂಬರ್ ಒಳಗಾಗಿ ನಮ್ಮನ್ನು ತಲುಪಬೇಕು. ಆಯ್ದ ಅತ್ಯುತ್ತಮ ಮುಂದೆ ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವದು.


ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ: 
ಕೆಎಸ್‌ಎಸ್‌ಐಡಿಸಿ ಕಂಪೌಡ್, ಆರ್.ಕೆ ಕಾಂಪ್ಲೆಕ್ಸ್, ಮೂರನೇ ಮಹಡಿ, 
ವಿ4, ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್-1, ಬೆಂಗಳೂರು ಕರ್ನಾಟಕ 560100
ಮೊಬೈಲ್‌ ನಂಬರ್ : 7892608118, 
ಇಮೇಲ್ ಐಡಿ: nimagaagi@bookbrahma.com.
Tags

Post a Comment

0Comments

Post a Comment (0)