ಗುರುಕುಲಕ್ಕೆ ಉತ್ತಮ ಪುಸ್ತಕಗಳು ದಾನವಾಗಿ ನೀಡಲು ಮನವಿ

varthajala
0

ಎಲ್ಲರಿಗೂ ನಮಸ್ಕಾರ,  ವಿದ್ಯಾಕ್ಷೇತ್ರ  ಕೆಂಗೇರಿಯ ಹೊಸಕೆರೆ ಬಳಿಯ ಮೈತ್ರಿ ಗ್ರಾಮದಲ್ಲಿರುವ ಒಂದು ವಿಶಿಷ್ಟ ಶಾಲೆ. ಪ್ರಾಚೀನ ಭಾರತೀಯ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಸುಮಾರು ನೂರು ಮಂದಿ‌ ವಿದ್ಯಾರ್ಥಿಗಳಿದ್ದಾರೆ. ಕೃಷಿ, ಪಶುಪಾಲನೆ, ಪ್ರಾಚೀನ ಭಾರತದ ಸಂಪ್ರದಾಯ, ಪುರಾಣ ಪುಣ್ಯ ಕಥೆಗಳು ಹೀಗೆ ನಾನಾ ವಿಚಾರಗಳ ಜೊತೆ ಆಧುನಿಕ‌ ಶಿಕ್ಷಣವೂ ಈ ಶಾಲೆಯಲ್ಲಿ ನಡೆಯುತ್ತದೆ. ಈಗ ಈ ಗುರುಕುಲದ ಲೈಬ್ರರಿ ವಿಸ್ತರಣೆ ಮಾಡುತ್ತಿದ್ದು ಮಕ್ಕಳು‌ ಓದುವಂತಹ ಕನ್ನಡ, ಆಂಗ್ಲ, ಸಂಸ್ಕೃತ ಭಾಷೆಯ ಉತ್ತಮವಾದ ( ಕಲೆ,‌ಸಾಹಿತ್ಯ, ಶಿಕ್ಷಣ, ಕೃಷಿ, ಆಹಾರ, ಆಯುರ್ವೇದ, ಪುರಾಣ ಕಥೆಗಳು, ವಿಜ್ಞಾನ, ಸಂಗೀತ ಹಾಗೂ ಇತರೆ..)  ಪುಸ್ತಕಗಳನ್ನು ಸಹೃದಯಿಗಳು ದಾನವಾಗಿ ನೀಡಿದರೆ ಮಕ್ಕಳ ಜ್ಞಾನ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿಕೊಳ್ಳುತ್ತೇವೆ. 



ಸಂಪರ್ಕ : ಪ್ರಶಾಂತ್. 9036123401 

ಪುಸ್ತಕ ಕಳುಹಿಸಬೇಕಾದ ವಿಳಾಸ: ಪ್ರಶಾಂತ್, #18, ಮೊದಲ ಮಹಡಿ, ಮೊದಲನೇ ಕ್ರಾಸ್ ವೀರಭದ್ರನಗರ, ಕೊಮ್ಮಘಟ್ಟ, ಕೆಂಗೇರಿ ಹೋಬಳಿ, ಬೆಂಗಳೂರು 560060,  ಮೊಬೈಲ್ ಸಂಖ್ಯೆ: 9036123401

Post a Comment

0Comments

Post a Comment (0)