ಕಿಡ್ ಝೀ ಶಾಲೆಯ ವಾರ್ಷಿಕೋತ್ಸವ ಹಾಗು ನೂತನ ವರ್ಷದ ಕ್ಯಾಲೆಂಡರ್ ಅನಾವರಣ

varthajala
0

 ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗದ ಡಾ, ರಾಜಕುಮಾರ್ ಆಡಿಟೋರಿಯಂ ನಲ್ಲಿ ಕಿಡ್ ಝೀ ಶಾಲೆಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅನ್ಯ ಕಾರ್ಯ ನಿಮಿತ್ತ ತೆರಳಿದರು. 


ನಂತರ ಕನ್ನಡ ಸಾಹಿತ್ಯ ಲೋಕದ ಸಾವಿರ ಬುಕ್ ಸರದಾರ ಎಂಬ ಬಿರುದು ಪಡೆದಿರುವ ಹಿರಿಯ ಸಾಹಿತಿ ಬೇ ಗೋ ರಮೇಶ್  ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್ ನಂದಿನಿ ಲೇಔಟ್ ವಾರ್ಡ್ ಅಧ್ಯಕ್ಷರಾದ ಲೋಕೇಶ್ ಶಾಲೆಯ ಸಂಸ್ಥಾಪಕರಾದ ಶ್ರೀ ಮತಿ ರಾಧಾ ಸೇರಿದಂತೆ ಹಲವು ಗಣ್ಯರು ಶಾಲೆಯ ಮಕ್ಕಳು ಮತ್ತು ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 ಈ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ, ನಾಟಕ ಪ್ರದರ್ಶನ ಚಲನಚಿತ್ರ ಗಾಯನ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು.ಹಾಗೆಯೇ ಕಿಡ್ ಝೀ ಶಾಲೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.


Tags

Post a Comment

0Comments

Post a Comment (0)