ಅಸ್ತಿತ್ವವಿಲ್ಲದ ಅರಣ್ಯ ಹಕ್ಕು ಸಮಿತಿಯಿಂದ ತಿರಸ್ಕೃತ ಅರ್ಜಿ ಪುನರ್ ಪರಿಶೀಲನೆ
ಬೆಂಗಳೂರು: ಸುಪ್ರೀಂ ಕೋರ್ಟ ಆದೇಶ ಮತ್ತು ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ರಾಜ್ಯದಲ್ಲಿ ಪುನರ್ ಪರೀಶೀಲನಾ ಕಾರ್ಯವು, ಅಸ್ತಿತ್ವವಿಲ್ಲದ ಅಪೂರ್ಣ ಸಮಿತಿಯಿಂದ, ಕಾನೂನಿನಲ್ಲಿ ಮಾನ್ಯತೆವಿಲ್ಲದ ತೀರ್ಮಾನ ಜರುಗಿಸಿದ್ದಲ್ಲದೇ, ಇಂತಹ ಕಾನೂನು ಭಾಹಿರ ಕೃತ್ಯಕ್ಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಕಾನೂನು ಭಾಹಿರವಾಗಿ ಪುನರ್ ಪರಿಶೀಲಿಸುವ ಕಾರ್ಯವನ್ನು ಸ್ಲಾಘೀಸಿ ಅಭಿನಂದಿಸಿ ಪತ್ರ ಬರೆದಿರುವ ಆಘಾಧಕರ ಹಾಗೂ ಖಂಡನಾರ್ಹ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ// ಶಾಲನಿ ರಜನೀಶ್ ಅವರು ಮಂಡ್ಯ ಜಿಲ್ಲಾಧಿಕಾರಿ ಡಾ// ಕುಮಾರ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ ಹಾಗೂ ಇನ್ನೀತರ ಜಿಲ್ಲಾಧಿಕಾರಿಗಳಿಗೆ ಅವರಿಗೆ ಮೇ.೫ ರಂದು ಅಭಿನಂದಿಸಿ ಬರೆದ ಅಭಿನಂದನಾ ಪತ್ರ ಉಲ್ಲೇಖಿಸಿ ಮೇಲಿನಂತೆ ಅವರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ ೨೦೦೬ ಮತ್ತು ನಿಯಮ-೨೦೦೭ರ ಅನುಷ್ಟಾನಕ್ಕೆ ಸಂಬAಧಿಸಿದAತೆ, ಮಾನ್ಯ ಸರ್ವೋಚ್ಚ ನ್ಯಾಯಾಲಯವು WP.(S)(ಅiviಟ) ಓo: ೧೦೯/೨೦೦೮ ದಿನಾಂಕ:೨೮.೦೨.೨೦೧೯ ರಲ್ಲಿ ನೀಡಿದ ಆದೇಶದಲ್ಲಿ ಸೂಚಿಸಿರುವಂತೆ ಮಂಡ್ಯ ಜಿಲ್ಲೆಯಲ್ಲಿ ತಿರಸ್ಕರಿಸಲಾದ ಒಟ್ಟು ೪೦೭ ಅರ್ಜಿಗಳ ಪೈಕಿ, ೪೦೭ ಅರ್ಜಿಗಳುÀ ಹಾಗೂ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ೨೪೧ ಅರ್ಜಿಗಳ ಪೈಕಿ ೨೪೧ ಅರ್ಜಿಗಳ ಪುನರ್ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿರುವುದಕ್ಕೆ ಜಿಲ್ಲೆಯಲ್ಲಿ ಸಾಧಿಸಿರುವ ಈ ಪ್ರಗತಿಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅರಣ್ಯ ಹಕ್ಕು ಸಮಿತಿಗಳ ಕಾರ್ಯವನ್ನು ಮುಖ್ಯ ಕಾರ್ಯದರ್ಶಿಯವರು ಬರೆದ ಪತ್ರದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ (Sಆಐಅ) ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ (ಆಐಅ) ಚುನಾಯಿತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ತಿರಸೃತ ಅರ್ಜಿಗಳನ್ನು ಪುನರ್ ಪರಿಶೀಲನೆ ಕಾರ್ಯವನ್ನು ಮುಂದಿನ ನಿರ್ದೇಶನವರೆಗೆ ತಡೆಹಿಡಿಯುವಂತೆ ಸರ್ಕಾರದ ಕಾರ್ಯದರ್ಶಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ರಂದೀಪ್.ಡಿ ಅವರು ಸರ್ಕಾರದ ಪರವಾಗಿ ಪೆಭ್ರುವರಿ ೧೨,೨೦೨೫ ರಂದು ಆದೇಶ ಪ್ರಕಟಿಸಿರುವರು. ತಾಲೂಕಾ ಮತ್ತು ಜಿಲ್ಲಾ ಪಂಚಾಯತ ನಾಮನಿರ್ದೇಶನ ಮೂರು ಸದಸ್ಯರ ಅನುಪಸ್ಥಿತಿಯಲ್ಲಿ ಪುನರ್ ಪರಿಶೀಲಿಸುವ ಕಾರ್ಯ ಹಾಗೂ ಈ ಹಿನ್ನಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಭಿನಂದನಾ ಪತ್ರವು ರಾಜ್ಯಾದಂತ ಚರ್ಚೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ತೊಡಕು:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸೃತವಾದ ಅರಣ್ಯವಾಸಿಗಳ ಅರ್ಜಿಯನ್ನ, ತಿರಸೃತವಾದ ಸಮಿತಿಯಿಂದಲೇ ಪುನರ್ ಪರಿಶೀಲನೆ ಜರುಗಬೇಕು ಹಾಗೂ ಅರ್ಜಿಗಳ ಪುನರ್ ಪರಿಶೀಲನೆಗೆ ಕಾನೂನಾತ್ಮಕ ಮಾನದಂಡ ನಿಗದಿಗೊಳಿಸಿ ಸುಪ್ರೀಂ ಕೋರ್ಟ ಪೆಭ್ರುವರಿ ೨೮,೨೦೧೯ ನಿರ್ದೇಶನ ನೀಡಿತ್ತು. ಆದರೆ, ವಿವಿಧ ಅರಣ್ಯ ಹಕ್ಕು ಸಮಿತಿಗಳಲ್ಲಿ ನಾಮನಿರ್ದೇಶಿತ ತಾಲೂಕಾ ಮತ್ತು ಜಿಲ್ಲಾ ಪಂಚಾಯತಿ ಪ್ರತಿನಿಧಿಸುವ ೩ ಸದಸ್ಯರ ಅನುಪಸ್ಥಿತಿಯಲ್ಲಿ ಸಮಿತಿಗೆ ಕಾನೂನಾತ್ಮಕ ಮೌಲ್ಯತೆ ಇರುವುದಿಲ್ಲ. ಸಮಿತಿಯ ಒಟ್ಟು ೬ ಸದಸ್ಯರಲ್ಲಿ ಕೇವಲ ಮೂರು ಅಧಿಕಾರ ವರ್ಗದ ಸದಸ್ಯರ ಉಪಸ್ಥಿತಿಯಲ್ಲಿ ಸಮಿತಿಗೆ ಅರಣ್ಯ ಭೂಮಿ ಹಕ್ಕಿನ ವಿಷಯಕ್ಕೆ ಸಂಬAಧಿಸಿ ಪನರ್ ಪರಿಶೀಲಿಸುವ ಮತ್ತು ನಿರ್ಣಯಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಅರಣ್ಯವಾಸಿಯ ೩ ತಲೆಮಾರಿನ ವ್ಯಯಕ್ತಿಕ ನಿರ್ದಿಷ್ಟ ದಾಖಲೆಗಳಿಗೆ ಆಗ್ರಹಿಸಿ ಅರ್ಜಿ ತಿರಸ್ಕರಿಸಲು ಬರಲಾರದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ರಾಜ್ಯದಲ್ಲಿ ೨,೯೫,೧೭೬ ಅರ್ಜಿ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕರ್ನಾಟಕದ ೨೪ ಜಿಲ್ಲೆಗಳಲ್ಲಿ ೨,೯೫,೧೭೬ ಅರಣ್ಯವಾಸಿ ಕುಟುಂಬಗಳು ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ೧೩,೦೪೦ ಪರಿಶಿಷ್ಟ ಪಂಗಡ, ೨,೨೯೭ ಪಾರಂಪರಿಕ ಅರಣ್ಯವಾಸಿಗಳಿಗೆ ಹಾಗೂ ಸಮೂಹ ಉದ್ದೇಶಕ್ಕೆ ೧,೩೪೫ ಒಟ್ಟು ೧೬,೬೮೨ ಅರಣ್ಯವಾಸಿ ಮಾನ್ಯತೆ ಹಕ್ಕು ದೊರಕಿದ್ದು ಇರುತ್ತದೆ. ಬಂದಿರುವAತಹ ಅರ್ಜಿಗಳಲ್ಲಿ ಪ್ರಥಮ ಹಂತದಲ್ಲಿ ೨,೬೦,೧೪೯ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ತಿರಸ್ಕರಿಸಲ್ಪಟ್ಟ ಈ ಅರ್ಜಿಗಳಿಗೆ ಸುಪ್ರೀಂ ಕೋರ್ಟ ತಿರಸ್ಕರಿಲ್ಪಟ್ಟ ಸಮಿತಿಯಿಂದಲ್ಲೇ ಪುನರ್ ಪರಿಶೀಲಿಸಲು ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು.
ಲಗತ್ತಿಸಿದ ದಾಖಲೆಗಳು:
೧. ಮುಖ್ಯ ಕಾರ್ಯದರ್ಶಿ ಅವರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ೫,೫,೨೦೨೫ ರಂದು ಬರೆದ ಪತ್ರ.
೨. ಮುಖ್ಯ ಕಾರ್ಯದರ್ಶಿ ಅವರು ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ೫,೫,೨೦೨೫ ರಂದು ಬರೆದ ಪತ್ರ.
೩. ಸರ್ಕಾರದ ಕಾರ್ಯದರ್ಶಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯವರು ದಿನಾಂಕ:೧೨-೦೨-೨೦೨೫ ರಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬರೆದ ಆದೇಶ ಪ್ರತಿ.
೪. ಅರಣ್ಯ ಹಕ್ಕು ಕಾಯಿದೆಯಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಬುಡಕಟ್ಟು ಇಲಾಖೆಯ ದಾಖಲೆಯಂತೆ, ಏಪ್ರೀಲ್ ೨೦೨೫ಕ್ಕೆ ಇರುವ ಪ್ರಗತಿ ನೋಟ.
೫. ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಚಿತ್ರ.
ರವೀಂದ್ರ ನಾಯ್ಕ ಅಧ್ಯಕ್ಷ: ೯೪೪೯೧೯೩೮೦೧, ೮೧೦೫೪೭೭೫೯೯
ಇಮೇಲ್ ಐಡಿ: ಚಿಡಿಚಿviಟಿಜಡಿಚಿಚಿ.ಟಿ@gmಚಿiಟ.ಛಿ om