ದಕ್ಷಿಣ ಕನ್ನಡ: ಮುಂಗಾರು ಬಹುತೇಕ ರಾಜ್ಯವನ್ನು ಪ್ರವೇಶಿಸಲು ಸಿದ್ದತೆ ನಡೆಸಿದ್ದು ಇದರ ಮುನ್ಸೂಚನೆಯೆಂಬಂತೆ ಕಳೆದೆರೆಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಎಡೆಬಿದಡೆ ಮಳೆ ಸುರಿಯುತ್ತಿದೆ, ಕುಮಾರಾಧಾರ ಹಾಗೂ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಯಾತ್ರಿಕರಿಗೆ ಎಚ್ಚರಿಕೆ ನೀಡಲಾಗಿದೆ,
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ, ನದಿಗೆ ಸ್ನಾನಕ್ಕೆ ಇಳಿಯದಂತೆ ಯಾತ್ರಿಕರಿಗೆ ಸೂಚನೆ ನೀಡಲಾಗಿದ್ದು ನದಿಯ ಬಳಿ ಕಾವಲು ನಿಯೋಜಿಸಲಾಗಿದೆ, ಸ್ನಾನದ ಬದಲಾಗಿ ನದಿಯ ನೀರನ್ನು ತಲೆಯ ಮೇಲೆ ಪ್ರೋಕ್ಷಿಸಿಕೊಂಡು ಬರಲು ಮಾತ್ರ, ಯತ್ರಿಕರಿಗೆ ಅನುಮತಿ ನೀಡಲಾಗಿದೆ,
ಇನ್ನು ಐದು ದಿನ ಇದೇ ರೀತಿ ಮಳೆಯ ಆರ್ಭಟ ಮುಂದುವರೆಯುವ ನಿರೀಕ್ಷೆಯಿದೆ.