ಇಸ್ರೇಲ್ನ ಟೆಲ್ ಅವೀವ್ ನಗರದಿಂದ 13 ಜೂನ್ 2025 ರಂದು ಬೆಂಗಳೂರಿಗೆ ಹೊರಡಬೇಕಿದ್ದ ನಿಯೋಗ ಜೂನ್ 13 ರಂದು ಟೆಲ್ ಅವೀವ್ ಮಿಮಾನ ನಿಲ್ದಾಣ ಮುಚ್ಚಿದ್ದರಿಂದ ಪ್ರಯಾಣ ಮುಂದೂಡಲಾಯಿತು. ಅಲ್ಲಿನ ಪರಿಸ್ಥಿತಿಗಳನ್ನು ನೋಡಿಕೊಂಡು ಬಿ.ಪ್ಯಾಕ್ ನಿಯೋಗವು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತಾಗಲು ಇಸ್ರೇಲ್ ಕಾನ್ಸುಲೇಟ್, ಕರ್ನಾಟಕ ಸರ್ಕಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಅಲ್ಲದೆ ಇಸ್ರೇಲ್ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ನಿಯೋಗದ ಬೆಂಬಲಕ್ಕೆ ನಿಂತಿದ್ದರು.
ಬಿ.ಪ್ಯಾಕ್/ಬಿ.ಕ್ಲಿಪ್ ನಿಯೋಗದ ಜೊತೆಗಿದ್ದ ಇಸ್ರೇಲ್ನ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ಶ್ರೀಮತಿ ಓರ್ಲಿ ವೀಟ್ಜ್ಮನ್ ಅವರು ಟೆಲ್ ಅವೀವ್ನಲ್ಲಿ ವಾಸ್ತವ್ಯದ ಸಮಯದಲ್ಲಿ ಅವರ ಭದ್ರತೆ ಮತ್ತು ಸುರಕ್ಷತೆ ಕಾಪಾಡಲು ನಿಯೋಗದೊಂದಿಗೆ ನಿತಂತರ ಸಂಪರ್ಕದಲ್ಲಿದ್ದರು.
ನಿಯೋಗವು ಜೋರ್ಡಾನ್ ನಿಂದ ವಿಮಾನ ಹತ್ತಿದ್ದು, ನಾಳೆ ಬೆಂಗಳೂರು ತಲುಪಲಿದೆ.
ಬಿ.ಪ್ಯಾಕ್ ನಿಯೋಗ ವಾಪಸ್ ಬೆಂಗಳೂರಿಗೆ ಸುರಕ್ಷಿತವಾಗಿ ಹಿಂತಿರುಗುವವರೆಗೆ ಸೂಕ್ತ ಭದ್ರತೆ ಮತ್ತು ಸುಕ್ಷತೆ ಯನ್ನು ಕಲ್ಪಿಸಿದ್ದಕ್ಕಾಗಿ ಇಸ್ರೇಲ್ ಕಾನ್ಸುಲೇಟ್, ಇಸ್ರೇಲ್ನಲ್ಲಿರುವ ಭಾರತೀಯ ಹೈಕಮಿಷನ್, ಜೋರ್ಡಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬಿ.ಪ್ಯಾಕ್ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.
ಏಲ್ಲಾ ಸಮಯ ಸಂದರ್ಭಗಳಲ್ಲಿ ಸಮನ್ವಯಸಾಧಿಸಿದ ಕರ್ನಾಟಕ ಸರ್ಕಾರ, ವಿದೇಶಾಂಗ ಇಲಾಖೆಗೆ ಬಿ.ಪ್ಯಾಕ್ ಕೃತಜ್ಞವಾಗಿದೆ.