ರಾಜ್ಯ ಸರ್ಕಾರಕ್ಕೆ ಮಾನದಂಡ ನಿಗಧಿ: ಅರಣ್ಯ ಭೂಮಿ ಹಕ್ಕು ಗುರುತಿಸಲು ``ದಾಜ್‌ಗುವಾ” ಪ್ರಕ್ರಿಯೆ ಯೋಜನೆ - ರವೀಂದ್ರ ನಾಯ್ಕ

varthajala
0

 ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಾನದಂಡ ನಿಗಧಿ:

ಅರಣ್ಯ ಭೂಮಿ ಹಕ್ಕು ಗುರುತಿಸಲು ಕೇಂದ್ರ ಸರ್ಕಾರದಿಂದ ``ದಾಜ್‌ಗುವಾ” ಪ್ರಕ್ರಿಯೆ ಯೋಜನೆ - ರವೀಂದ್ರ ನಾಯ್ಕ

ಬೆಂಗಳೂರು: ಭಾರತದಲ್ಲಿ ಅರಣ್ಯ ಹಕ್ಕುಗಳನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆಯನ್ನ  ಸೂಚಿಸಿ, ಪರಿಶಿಷ್ಠ ಪಂಗಡಗಳ ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನ ಗುರುತಿಸಲು ಮತ್ತು ¸ಬಲೀಕರಣಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರಕ್ಕೆ ಮಾನದಂಡ ನಿಗಧಿಗೊಳಿಸಿ ``ದಾಜ್‌ಗುವಾ” ಪ್ರಕ್ರಿಯ ಯೋಜನೆ ಜಾರಿಗೆ ತಂದಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅವರು ಇಂದು ಕೆಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮತ್ತು ಹೊಸ ಉಪಕ್ರಮವಾದ ಧರ್ತಿ ಅಬಾ ಜಂಜಾಟಿಯಾ ಗ್ರಾಮ ಉತ್ಕರ್ಷ ಅಭಿಯಾನದ  ಆದೇಶವನ್ನು ಬಿಡುಗಡೆಗೊಳಿಸುತ್ತಾ ಮೇಲಿನಂತೆ ಹೇಳಿದರು.

ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಅರಣ್ಯ ಭೂಮಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚನ ಅನುಷ್ಠಾನದ ಜವಾಬ್ದಾರಿಯೊಂದಿಗೆ, ವಿವಿಧ ಅರಣ್ಯ ಹಕ್ಕು ಸಮಿತಿಗಳಿಗೆ ದಾಖಲೆಗಳನ್ನ ಸಿದ್ದ ಪಡಿಸುವ, ಪುರಾವೆಗಳನ್ನ ಸಂಗ್ರಹಿಸುವ,ಮತ್ತು ಡಿಜಿಟಲ್‌ಕರಣಗೊಳಿಸುವ ಕಾರ್ಯದೊಂದಿಗೆ ವಿವಿಧ ಅರಣ್ಯ ಹಕ್ಕು ಸಮಿತಿಗಳಿಗೆ ಬೆಂಬಲಿಸುವ, ಸಹಾಯ ನೀಡುವ ಹಾಗೂ ಬಾಕಿ ಇರುವ ಹಕ್ಕುಗಳ ಪ್ರಕ್ರಿಯೆ ತ್ವರಿತಗೊಳಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
 ಈ ಸಂದರ್ಭದಲ್ಲಿ ರಾಘವೇಂದ್ರ ನಾಯ್ಕ ಕವಂಚೂರು, ಅಬ್ದುಲ್ ಸುಬಾನ್ ಸಾಬ್ ಅರೆಂದೂರು, ಕಮಲಾಕರ್ ಗೌಡ ತ್ಯಾರ್ಸಿ, ದಯಾನಂದ ಕೆ ಗೌಡ ಬಾಮಣಿ, ಆನಂದ ಕೆ ಗೌಡ, ಮಾಬ್ಲೇಶ್ವರ ದ್ಯಾವ ಗೌಡ ರಾಗಿಹೊಸಳ್ಳಿ ಉಪಸ್ಥಿತರಿದ್ದರು.

ದೇಶದಲ್ಲಿ ಶೇ.೪೨ ಅರ್ಜಿ ತಿರಸ್ಕಾರ :

           ಮಾರ್ಚ ೨೦೨೫ ರ ಅವಧಿಗೆೆ, ೨೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ೫೧.೧೧ ಲಕ್ಷ ಅರಣ್ಯ ಹಕ್ಕು ಅರ್ಜಿಗಳಲ್ಲಿ ಸರಿ ಸುಮಾರು ಶೇ.೧೪.೪ ಬಾಕಿ ಉಳಿದಿದ್ದು, ವಿಲೇವಾರಿ ಮಾಡಲಾದ ಹಕ್ಕುಗಳಲ್ಲಿ ಶೇ.೪೨ ಕ್ಕಿಂತ ಹೆಚ್ಚು ತಿರಸ್ಕರಿಸವಾಗಿರುವ ಹಿನ್ನಲೆಯಲ್ಲಿ ಅನುಷ್ಠಾನದಲ್ಲಿ ಪರಿಪೂರ್ಣತೆ ನೀಡುವ ಉದ್ದೇಶದಿಂದ ದಾಜ್‌ಗುವಾ ಯೋಜನೆಯು ೧೭ ಸಚಿವಾಲಯಗಳ ಸಹಯೋಗದೊಂದಿಗೆ, ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
     ಈ ಅಭಿಯಾನವು ದೇಶಾದ್ಯಂತ ೬೩,೮೪೩ ಹಳ್ಳಿಗಳು, ೫೪೯ ಜಿಲ್ಲೆಗಳು, ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ೫ ಕೋಟಿಗೂ ಹೆಚ್ಚು ಅರಣ್ಯವಾಸಿಗಳಿಗೆ ನೇರವು ನೀಡುವು ಗುರಿ ಹೋಂದಿದೆ ಎಂದು ಅವರು ಹೇಳಿದರು.

Tags

Post a Comment

0Comments

Post a Comment (0)