ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸುಧೀರ್ಘವಾಗಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ, ಇದೇ ಮೇ ತಿಂಗಳಿನಲ್ಲಿ ಗಾಂಧಿನಗರದ ಸಹಾಯಕ ಕಂದಾಯ ಅಧಿಕಾರಿಯಾಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ವಯೋನಿವೃತ್ತಿ ಹೊಂದಿದ ಶ್ರೀ ಜಿ. ವಿ. ನಾಗರಾಜ್ ಅವರನ್ನು, ಗಾಂಧಿನಗರ ಕಂದಾಯ ಅಧಿಕಾರಿಗಳಾದ ಕೆ.ಶ್ರೀನಿವಾಸ್ ರವರ ಸಮ್ಮುಖದಲ್ಲಿ ಸಹೋದ್ಯೋಗಿಗಳು ಹಾಗೂ ಹಿತೈಷಿ ಬಂಧು-ಮಿತ್ರರ ಉಪಸ್ಥಿತಿಯಲ್ಲಿ ಗೌರವಾದರಗಳೊಂದಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಇವರ ನಿವೃತ್ತ ಜೀವನವು ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರಲೆಂದು ಎಲ್ಲರೂ ಹಾರೈಸಿ, ಶುಭ ಕೋರಿದರು.