ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ):
ವಿಶೇಷ ಸದನ ಸಮಿತಿ ಅಧ್ಯಕ್ಷರಾದ ನಿರಾಣಿ ಹಣಮಂತ್ ರುದ್ರಪ್ಪ (ಅವರು, ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ದಿನಾಂಕ: 22.04.2025 ರಿಂದ 06 ತಿಂಗಳುಗಳ ಕಾಲಾವಕಾಶವನ್ನು ಸದನದ ಸಹಮತಿಯನ್ನು ಕಾಯ್ದಿರಿಸಿ ವಿಸ್ತರಿಸಲಾಗಿರುವ ಪ್ರಸ್ತಾವನೆಗೆ ಸದನದ ಸಹಮತಿ ಕೋರಿ ಪ್ರಸ್ತಾವವನ್ನು ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಮಂಡಿಸಿದರು.