ಬೆಳಗಾವಿ / ಬೆಂಗಳೂರು:ಕರ್ನಾಟಕ ಸಾಮಾಜಿಕ ಬಹಿಷಾ್ಕರ (ಪ್ರತಿಬಂಧ, ನಿಷೆೀಧ ಮತ್ತು ಪರಿಹಾರ) ವಿಧೇಯಕ-2025 ಕ್ಕೆ ವಿಧಾನಸಭೆಯಲ್ಲಿ ರ್ವಾನುಮತದ ಅಂಗೀಕಾರ ದೊರಕಿತು.ಬೆಳಗಾವಿ ಸುರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ಗುರುವಾರದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇಪ್ಪನವರು ಸಭೆಯ ಅಂಗೀಕಾರ ಕೋರಿ ವಿಧೇಯಕವನ್ನು ರ್ಯಾಲೋಚನೆಗೆ ತಂದರು.ಅಸಂವಿಧಾನಿಕ ಆಚರಣೆಗಳಾದ ಜಾತಿ ಪಂಚಾಯಿತಿಗಳು ಹೇರುವ ಸಾಮಾಜಿಕ ಬಹಿಷಾ್ಕರ, ಕಿರುಕುಳ, ವಿವಿಧ ರೀತಿಯ ಶಿಕ್ಷೆಗಳನ್ನು ತಡೆಗಟ್ಟಿ ಸಾಮಾಜಿಕ ಬಹಿಷಾ್ಕರ ಪದ್ಧತಿಯನ್ನು ಸಮಾಜದಿಂದ ನರ್ಮೂಲನೆ ಮಾಡುವುದಕ್ಕಾಗಿ ಕರ್ನಾಟಕ ಸಾಮಾಜಿಕ ಬಹಿಷಾ್ಕರ (ಪ್ರತಿಬಂಧ, ನಿಷೆೀಧ ಮತ್ತು ಪರಿಹಾರ) ವಿಧೇಯಕ-2025ನ್ನು ರ್ಕಾರ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ವಿಧೇಯಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ಸಹ ಸಮ್ಮತಿ ಸೂಚಿಸಿ ಬೆಂಬಲ ನೀಡಿ ಮಾತನಾಡಿದರು. ಈ ವೇಳೆ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ ವಿಧೇಯಕದ 12ನೇ ವಿಧಿಯಲ್ಲಿ ಸಂತ್ರಸ್ತ ಅಥವಾ ಆತನ ಕುಟುಂಬದ ಸದಸ್ಯರು ಪೊಲೀಸರಿಗೆ ಅಥವಾ ನೇರವಾಗಿ ಪ್ರಥಮ ದರ್ಜೆ ನಾಯಿಕ ಮ್ಯಾಜಿಸ್ಟ್ರೇಟರಿಗೆ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ವಿಧೇಯಕದ ಪರಿಣಾಮಕಾರಿ ಅನುಷಾ್ಠನಕ್ಕೆ ಅನುಕೂಲವಾಗುವಂತೆ ಸಾಮಾಜಿಕ ಬಹಿಷಾ್ಕರದಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಪೊಲೀಸರು ಸಹ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ವಿಧೇಯಕದಲ್ಲಿ ಅವಕಾಶ ನೀಡಿ, ತಿದ್ದುಪಡಿ ತರುವಂತೆ ಸಚಿವ ಹೆಚ್.ಸಿ.ಮಹಾದೇವಪ್ಪನವರಲ್ಲಿ ಕೋರಿದರು. ಅಂತಿಮವಾಗಿ ಪೊಲೀಸರಿಗೆ ಸ್ವಯಂ ಪ್ರೇರಿತ ದೂರು ದಾಖಲಿಸಲು ಅಧಿಕಾರ ನೀಡುವ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ರ್ವಾನುಮತ ಅಂಗೀಕಾರ ದೊರಕಿತು. 18 ಗಂಟೆಗಳ ನಿರಂತರ ಕರ್ಯಾಚರಣೆ ಯಶಸ್ವಿ: ಕಾವೇರಿ 5ನೇ ಹಂತದ ಸೋರಿಕೆ ಸರಿಪಡಿಸಿದ ಜಲಮಂಡಳಿ; ನೀರು ಸರಬರಾಜು ಪುನರಾರಂಭ: ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್