ವಿಶ್ವ ಮಾನವ ದಿನಾಚರಣೆ, ಮತ್ತು ರಾಷ್ಟ್ರಕವಿ ಕುವಂಪು ಅವರ ಜನ್ಮದಿನೋತ್ಸವ.ಕ್ಕೆ - ತಮಗೆ ಆತ್ಮೀಯ ಆಹ್ವಾನ

varthajala
0

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಜಿಲ್ಲೆಯು ದಿನಾಂಕ 29 12 2025 ರ ಸೋಮವರ ಸಂಜೆ, 4 ಗಂಟೆಗೆ "ವಿಶ್ವ ಮಾನವ ದಿನಾಚರಣೆ "ಹಾಗು  "ರಾಷ್ಟ್ರ ಕವಿ ಕುವೆಂಪು ಅವರ  ಜನ್ಮದಿನೋತ್ಸವ" ಸಮಾರಂಭದ ಆಚರಣೆಯನ್ನು  ಮಲ್ಲೇಶ್ವರ ಮುಖ್ಯ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿ( ಮೇಲ್ಸೇತುವೆ)ಬಳಿ ಆಯೋಜಿಸಲಾಗಿದೆ.


ಡಾ. ಮನುಬಳಿಗಾರ್  ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷರಾದ ಎಚ್ ಶಿವರಾಮೇಗೌಡ,ಅವರುಗಳು ರಾಷ್ಟ್ರಕವಿ ಕುವೆಂಪು ಅವರಪುತ್ಥಳಿ/ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಕಾರ್ಯಕ್ರಮಕ್ಕೆಚಾಲನೆನೀಡಲಿದ್ದಾರೆ. "ಕುವೆಂಪು ಅವರ ಸಾಹಿತ್ಯದಲ್ಲಿ ಸಮಸಮಾಜ"ಕುರಿತಂತೆ ಡಾ.ಮನುಬಳಿಗರ್ ಅವರು ವಿಷೇಶ ಉಪನ್ಯಾಸ ನೀಡಲಿದ್ದಾರೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಕರಪತ್ರವು ಸಾರ್ವಜನಿಕ ರಿಗೆ ವಿತರಿಸಲಾಗವುದು.

                                   

ಪ್ರಸಿದ್ದ ಗಾಯಕರುಗಳು ಕುವೆಂಪು ಅವರು ರಚನೆ ಮಾಡಿದ ಕನ್ನಡ ಗೀತೆಗಳ ಗಾಯನ, ಹಾಗು ಮತ್ತಷ್ಟು ಕವಿಗಳಿಂದ ಕವಿಗೋಷ್ಠಿಯು ನೆಡೆಯಲಿದೆ. ಅಂದಿನ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತಾವು ತಪ್ಪದೆ ಬನ್ನಿ, ಗೆಳಯರನ್ನು ಕರೆತನ್ನಿ.
ನಾ ಶ್ರೀಧರ, ಅಧ್ಯಕ್ಷರು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಬೆಂಗಳೂರು ಜಿಲ್ಲೆ.
92430 083504

Post a Comment

0Comments

Post a Comment (0)