ರಾಜ್ಯದ ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಗತ್ಯ ಕ್ರಮ- ಸಚಿವ ಡಾ: ಶರಣಪ್ರಕಾಶ್ ಆರ್ ಪಾಟೀಲ್

varthajala
0

 ಬೆಂಗಳೂರು  : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿಗೆ ರಾಜ್ಯದ ವಿಕಲಚೇತನರಿಗೆ ತಾಂತ್ರಿಕ ಜ್ಞಾನದೊಂದಿಗೆ ಆರ್ಥಿಕತೆಯಲ್ಲಿ ಮುನ್ನಡೆಸುವ ಉದ್ದೇಶದಿಂದ ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ವೃತ್ತಿ ತರಬೇತಿಗಳ ಮೂಲಕ 1000 ಅಭ್ಯರ್ಥಿಗಳಿಗೆ ರೂ. 300.00ಲಕ್ಷಗಳ ವೆಚ್ಚದಲ್ಲಿ ಕೌಶಲ್ಯ ತರಬೇತಿ ಜೊತೆಗೆ ಟೂಲ್ ಕಿಟ್ ವಿತರಣೆ ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ.

ಕರ್ನಾಟಕ ಉದ್ಯಮಶೀಲತಾಭಿವೃಧ್ಧಿ ಕೇಂದ್ರ (ಸಿಡಾಕ್)ದಿಂದ ಉದ್ಯಮ ಶೀಲತಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬೈಂದೂರು ವಿಧಾನಸಭಾ ಸದಸ್ಯರಾದ ಗುರುರಾಜ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿ ಅವರು, ವಿಕಲಚೇತನರಿಗೆ ಸರ್ಕಾರದ ಆದೇಶದನ್ವಯ ಈ ಹಿಂದಿನ ಸಾಲಿನಲ್ಲಿ ಶೇಕಡ 3 ರಷ್ಟು ಮತ್ತು ಪ್ರಸ್ತುತ ಶೇಕಡ 5 ರಷ್ಟು ಮೀಸಲಾತಿಯನ್ನು ತರಬೇತಿ ಕಾರ್ಯಕ್ರಮಗಳಡಿ ಒದಗಿಸಲಾಗಿದ್ದು, 540 ಅಭ್ಯರ್ಥಿಗಳು ವಿವಿಧ ಜಾಬ್ ರೋಲ್ ಗಳಡಿ ವಿವಿಧ ತರಬೇತಿದಾರರ ಸಂಸ್ಥೆಗಳ ಮುಖೇನ ತರಬೇತಿ ನೀಡಲಾಗಿದೆ. 83 ವಿಕಲಚೇತನ ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆಯಲು ಯಶಸ್ವಿಯಾಗಿರುತ್ತಾರೆ ಎಂದರು.

Post a Comment

0Comments

Post a Comment (0)