ಚಿದಾನಂದಮೂರ್ತಿ, ಭೈರಪ್ಪ ಕನ್ನಡಕ್ಕೆ ಮಿಡಿದವರು: ಎಸ್ ಜಿ ಸಿದ್ದರಾಮಯ್ಯ

varthajala
0

 ಬೆಂಗಳೂರುಪ್ರಾಮಾಣಿಕ ಸಂಶೋಧನೆಗೆ ಹೆಸರಾಗಿದ್ದ ಎಂ ಚಿದಾನಂದಮೂರ್ತಿ ಮತ್ತು ತಮ್ಮ‌ ಕಾದಂಬರಿಗಳ‌ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ ಎಸ್ ಎಲ್ ಭೈರಪ್ಪ ಇಬ್ಬರೂ ಕನ್ನಡ ಮತ್ತು ಕನ್ನಡಿಗರ ಪರವಾಗಿ ಮಿಡಿದವರಾಗಿದ್ದಾರೆ ಎಂದು ಹಿರಿಯ ಕವಿ ಎಸ್ ಜಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆಕನ್ನಡ ಗೆಳೆಯರ ಬಳಗಕರ್ನಾಟಕ ವಿಕಾಸ ರಂಗ ಮತ್ತು ಸಪ್ನಾ ಪುಸ್ತಕ ಮಳಿಗೆ ಸಂಯುಕ್ತವಾಗಿ ಏರ್ಪಡಿಸಿದ್ದ 'ಕನ್ನಡಕನ್ನಡಿಗಕರ್ನಾಟಕಕೃತಿಯ ಪರಿಷ್ಕೃತ 17ನೇ ಮುದ್ರಣ, ಎಚ್.ಜಿ  ಸಿದ್ದರಾಮಯ್ಯ ಅವರಿಗೆ ಚಿದಾನಂದಮೂರ್ತಿ ನೆನಪಿನ  ಗೌರವ ಮತ್ತು ಎಸ್ ಎಲ್ ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಮೊದಲು ಕೇವಲ 12 ಪುಟಗಳ ಕರಪತ್ರದ ರೂಪದಲ್ಲಿ ಬಂದ 'ಕನ್ನಡ-ಕನ್ನಡಿಗರ್ನಾಟಕವು ಈಗ 480 ಪುಟಗಳ ಸಮಗ್ರ ಸಂಪುಟದ ಮಟ್ಟಕ್ಕೆ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆಇದರಲ್ಲಿ ಕನ್ನಡಿಗರ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು ಏನೇನು ಎಂಬುದು ಗೊತ್ತಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ

ಚಿದಾನಂದಮೂರ್ತಿಗಳು ಗುರುವಿನ ಸ್ಥಾನದ ಮೌಲ್ಯಗಳ ಮೂರ್ತರೂಪದಂತೆ ಬಾಳಿ ಬದುಕಿದರುಅವರು ಪ್ರಾಮಾಣಿಕತೆಅಧಿಕಾರ ನಿರ್ಲಿಪ್ತಿ ಇವುಗಳಿಗೆ ಹೆಸರಾಗಿದ್ದರುಒಕ್ಕೂಟ ಧರ್ಮಕ್ಕೆ ಅಪಾಯ ಬಂದಿರುವ ಸಂದರ್ಭದಲ್ಲಿ ಇಂತಹ ಕೃತಿಗಳು ನೆರವಿಗೆ ಬರುತ್ತವೆ ಎಂದು ಅವರು ನುಡಿದಿದ್ದಾರೆಸಂಶೋಧಕ ಡಾ.ಆರ್ ಶೇಷಶಾಸ್ತ್ರಿ ಮಾತನಾಡಿಚಿದಾನಂದಮೂರ್ತಿಗಳು ಖಚಿತ ಪುರಾವೆಗಳನ್ನು ಆಧರಿಸಿ ಸಂಶೋಧನೆ ನಡೆಸುತ್ತಿದ್ದರುಇನ್ನೊಬ್ಬರ ಅಭಿಪ್ರಾಯವನ್ನು ಯಾವತ್ತೂ ತಮ್ಮದೆಂದು ಹೇಳಿಕೊಳ್ಳುತ್ತಿರಲಿಲ್ಲಇಡೀ ಕರ್ನಾಟಕಕ್ಕೆ ಸಂಬಂಧಿಸಿದ ಬಹುಮುಖಿ ಧಾರೆಗಳ ಪರಿಪೂರ್ಣ ಗ್ರಂಥಾಲಯ ಸ್ಥಾಪಿಸಬೇಕು ಎಂಬ ಕನಸು ಹೊಂದಿದ್ದರುಅದನ್ನು ಸರಕಾರ ಈಡೇರಿಸಬೇಕು ಎಂದು ಅಭಿಪ್ರಾಯಪಟ್ಟರು.

 ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ..ಚನ್ನೇಗೌಡ ಮಾತನಾಡಿಚಿಮೂ ಅವರಿಂದಾಗಿ ಹಂಪೆ ಕನ್ನಡ ವಿವಿನೈರುತ್ಯ ರೈಲ್ವೆ ವಲಯಪುಸ್ತಕ ಪ್ರಾಧಿಕಾರಪ್ರಾಮಾಣಿಕ ಕನ್ನಡ ಚಳವಳಿ ಇವೆಲ್ಲವೂ ಅಸ್ತಿತ್ವಕ್ಕೆ ಬಂದವು ಎಂದು ನೆನಪಿಸಿಕೊಂಡರುಕನ್ನಡ ಗೆಳೆಯರ ಬಳಗದ ಸಂಚಾಲಕ ರಾ ನಂ ಚಂದ್ರಶೇಖರ ಮಾತನಾಡಿಕನ್ನಡ-ಕನ್ನಡಿಗ-ಕರ್ನಾಟಕ ಕೃತಿಯ ಹೊಸ ಆವೃತ್ತಿಯಲ್ಲಿ ಕರ್ನಾಟಕದ ಇತಿಹಾಸದಿಂದ ಹಿಡಿದು ಕನ್ನಡಿಗರ ಉದ್ಯಮಶೀಲತೆಮಹಿಷಿ ವರದಿನಂಜುಂಡಪ್ಪ ವರದಿ ಮತ್ತು ಗಾಡ್ಗೀಳ್ ವರದಿಯವರೆಗೆ ಸಮಗ್ರ ಮಾಹಿತಿ ಮತ್ತು ಅಂಕಿಅಂಶಗಳನ್ನು ಕ್ರೋಡೀಕರಿಸಲಾಗಿದೆಇಂತಹ ಪರಿಕಲ್ಪನೆಯ ಒಂದು ಪುಸ್ತಕ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ ಎಂದರು 


ಅನುವಾದಕ ಬಿ ಎಸ್ ಜಯಪ್ರಕಾಶ ನಾರಾಯಣ ಅವರು 'ಎಸ್ ಎಲ್ ಭೈರಪ್ಪನವರು ಅನುದಿನದ ಸಂಗತಿ,‌ ನಂಬಿಕೆಸಂಘರ್ಷಮಿಥ್ ಗಳ ಮೂಲಕವೇ ತಮ್ಮ ಕೃತಿಗಳಲ್ಲಿ ಒಂದು ಗಂಭೀರ ತಾತ್ವಿಕತೆಯನ್ನು ಕಟ್ಟಿಕೊಡುತ್ತಿದ್ದರುಅವರು ಗ್ರಾಮೀಣ ಭಾಷೆಯ ಮೂಲಕವೇ ಅಖಿಲ ಭಾರತೀಯ ಸ್ತರದ ಪ್ರಜ್ಞೆಯನ್ನು ಸೃಷ್ಟಿಸಿದರುಹುಟ್ಟುಸಾವು ಮತ್ತು ಕಾಮದ ನಿರ್ವಹಣೆಯಲ್ಲಿ ಅವರೊಬ್ಬ ಆಸಾಧಾರಣ ಲೇಖಕರಾಗಿದ್ದರುಲೇಖಕರನ್ನು ಎಡಬಲ ತರಹದ ಐಡಿಯಾಲಜಿಗಳ ಮೂಲಕ ನೋಡುವುದು ಸರಿಯಲ್ಲ ಎಂದು ಹೇಳಿದ್ದಾರೆಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರರಾದ .ಚಂದ್ರಶೇಖರ್ಲೇಖಕ ಕೆ ಎನ್ ಭಗವಾನ್ಬೆ.ರಾ.ನಾಗರಾಜ್ಎಚ್.ಎನ್.ರಮೇಶ್ ಬಾಬುಸುರೇಶ್ಸಪ್ನಾ ಪುಸ್ತಕ ಮಳಿಗೆಯ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೇಗೌಡ ಉಪಸ್ಥಿತರಿದ್ದರು.


Post a Comment

0Comments

Post a Comment (0)