ಬೆಂಗಳೂರು: ಮಲ್ಲೇಶ್ವರ ಬ್ರಾಹ್ಮಣ ಮಹಾಸಭಾ ವತಿಯಿಂದ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಲೋಕಕಲ್ಯಾಣರ್ಥಾಕ್ಕಾಗಿ ಸಾವಿರದ ಎಂಟು ಸುಮಂಗಲಿಯರಿಂದ ಸಹಸ್ರ ಸುಮಂಗಲಿ ಪೂಜೆ ಮತ್ತು ಕೋಟಿ ಲಲಿತಾರ್ಚನೆ ಕಾರ್ಯಕ್ರಮ.
ಮಲ್ಲೇಶ್ವರ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಪ್ರಕಾಶ್ ಎಸ್.ಅಯ್ಯಂಗಾರ್ ರವರು, ಕಾಂಗ್ರೆಸ್ ಮುಖಂಡರು ಅನೂಪ್ ಅಯ್ಯಂಗಾರ್ ರವರು ಲಲಿತಾ ದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.*ಇದೇ ಸಂದರ್ಭದಲ್ಲಿ ಪ್ರಕಾಶ್ ಎಸ್.ಅಯ್ಯಂಗಾರ್* ರವರು ಮಾತನಾಡಿ ಬ್ರಾಹ್ಮಣ ಸಮುದಾಯ ಎಲ್ಲರ ಶ್ರೇಯಸ್ಸು ಅಭಿವೃದ್ದಿ ಬಯಸುವ ಸರ್ವೆ ಜನಾಃ ಸುಖಿನೋ ಭವಂತು ಎಂದು ಭಾವಿಸುವವರು. ನಾವು, ನಾವೆಲ್ಲರು ಇಡಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು. ಎಲ್ಲರ ಕಲ್ಯಾಣಕ್ಕಾಗಿ ಸಹಸ್ರ ಸುಮಂಗಲಿ ಪೂಜೆ ಮತ್ತು ಕೋಟಿ ಲಲಿತಾ ಅರ್ಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಲ್ಲರು ಬಾಳಿನಲ್ಲಿ ಸುಖ, ಶಾಂತಿ ನೆಮ್ಮದ್ದಿ ಲಭಿಸಬೇಕು ಮತ್ತು ದೇಶ, ರಾಜ್ಯ ಸುಭೀಕ್ಷೆಯಾಗಿ ಇರಬೇಕು. ಕಷ್ಟಗಳ ದೂರವಾಗಿ ಎಲ್ಲರ ಬಾಳಿನಲ್ಲಿ ಬೆಳಕು ಮೂಡಬೇಕು.
ಮಲ್ಲೇಶ್ವರಂ ಬ್ರಾಹ್ಮಣ ಮಹಾಸಭಾ ತ್ರಿಮತಸ್ಥ ಸಾವಿರಾರು ವಿಪ್ರ ವಟುಗಳಿಗೆ ಉಚಿತ ಉಪನಯನ ಕಾರ್ಯಕ್ರಮ ಯಶ್ವಸಿಯಾಗಿ ನಡೆಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಧರ್ಮ ಕಾರ್ಯ, ವಿಪ್ರ ಸಮಾಜದ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಅಭಿಷೇಕ್ ಬ್ರಹ್ಮಚಾರಿ ಜೀ, ಶ್ರೀ ಶ್ರೀ ಶ್ರೀಮನ್ ನಾಮಜೀಯರ್ ರಾಮಾನುಜ ದಾಸನ್, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ, ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮ, ಮಾಜಿ ಅದ್ಯಕರು ಬ್ರಾಹ್ಮಣ ಮಹಾಸಭಾ ಮಾಜಿ ಸಚ್ಚಿದಾನಂದಮೂರ್ತಿರವರು ಭಾಗವಹಿಸಿದ್ದರು.